ಕುಕನೂರು (ಕೊಪ್ಪಳ): ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಶುಕ್ರವಾರ ಶಾಲೆಗೆ ತೆರಳುತ್ತಿದ್ದ ಸುಮಯಾ ಲಾಲಸಾಬ್ ಕವಳಿಕಾಯಿ (9) ಎಂಬ ವಿದ್ಯಾರ್ಥಿನಿ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಸುಮಯಾ ರಸ್ತೆ ದಾಟುವಾಗ ವೇಗವಾಗಿ ಬಂದ ಟಾಟಾ ಎಸಿ ವಿದ್ಯಾರ್ಥಿನಿ ಮೇಲೆ ಹಾದು ಹೋದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಸ್ಥಳೀಯರು ತಿಳಿಸಿದರು.
‘ಟಾಟಾ ಎಸಿ ಚಾಲಕನ ನಿರ್ಲಕ್ಷತನದಿಂದ ಈ ಘಟನೆ ಸಂಭವಿಸಿದೆ’ ಎಂದು ಕುಕನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವಿದ್ಯಾರ್ಥಿನಿ ಮೂಲತಃ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದವರು.