ನವದೆಹಲಿ: ಚೆಂಡು ವಿರೂಪಗೊಳಿಸಿದ ಪ್ರಕರಣ ಐಪಿಎಲ್ ಮೇಲೆ ಕೂಡ ಪರಿಣಾಮ ಬೀರುವ ಸಾಧ್ಯತೆ ಇದೆ. ಐಸಿಸಿಯಿಂದ ಅಮಾನತು ಶಿಕ್ಷೆಗೆ ಒಳಗಾಗಿರುವ ಸ್ಮಿತ್ ಐಪಿಎಲ್ನಲ್ಲಿ ಆಡುತ್ತಿರುವ ತಂಡ ರಾಜಸ್ತಾನ್ ರಾಯಲ್ಸ್ನ ನಾಯಕರಾಗಿದ್ದಾರೆ. ಅವರು ಈ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದರೆ ಅಜಿಂಕ್ಯ ರಹಾನೆಗೆ ನಾಯಕತ್ವ ವಹಿಸಲು ತಂಡ ಮುಂದಾಗಲಿದೆ.