ಚುನಾವಣೆ ಹಿನ್ನೆಲೆಯಲ್ಲಿ ನಿಷೇಧ ಮಾಡಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ ‘ಒಮ್ಮೆ ಬಿಜೆಪಿ, ಇನ್ನೊಮ್ಮೆ ಕಾಂಗ್ರೆಸ್ ಗೆಲ್ಲಬಹುದು. ಪಿಎಫ್ಐ ಪರ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಆ ಜನಾಂಗದ ಮತಗಳನ್ನು ಗಳಿಸುವ ಪಿತೂರಿ ಮಾಡುತ್ತಿದೆ. ಭಾರತದ ಜನ ನೆಮ್ಮದಿಯಾಗಿ ಬದುಕಬಾರದೇ’ ಎಂದು ಪ್ರಶ್ನಿಸಿದರು.