ಮೊದಲು ಸಜ್ಜೆ, ಎಳ್ಳು, ತೊಗರಿ, ನವಣೆ ಸೇರಿದಂತೆ ಇನ್ನಿತರ ಬೆಳೆ ಬೆಳೆದರೂ ಹಾಕಿದ ಬಂಡವಾಳ ತೆಗೆಯುವುದು ಕಷ್ಟವಾಗುತ್ತಿತ್ತು. ಆದರೆ, ಈ ಬೆಳೆಗೆ ಸುಮಾರು ₹7 ರಿಂದ 8 ಲಕ್ಷ ಬಂಡವಾಳ ಹಾಕಿದ್ದು, ಮಳೆರಾಯನ ಕೃಪೆಯಿಂದ ಇಳುವರಿ ಚೆನ್ನಾಗಿ ಬಂದಿದೆ. ಕೃಷಿಯಲ್ಲಿ ಖುಷಿ ಕಂಡಿದ್ದೇವೆ ಎನ್ನುತ್ತಾರೆ ಅಮರೇಶ ಗಾಂಜಿ ದಂಪತಿ.