ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಇಒ ಶಿವಪ್ಪ ಸುಬೇದಾರ ಮಾತನಾಡಿ, ಸಮುದಾಯದ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ನಿರ್ದಿಷ್ಟವಾಗಿ ಗುರುತಿಸುವ ಸ್ಥಳದಲ್ಲಿ ಅರಣ್ಯೀಕರಣ, ವೈಜ್ಞಾನಿಕ ರೀತಿಯಲ್ಲಿ ಕೃಷಿ, ತೋಟಗಾರಿಕೆ ಚಟುವಟಿಕೆಗಳ ಮೂಲಕ ಭೂ ಸವಕಳಿಯನ್ನು ನಿಯಂತ್ರಿಸಿ ಹಸಿರು ಪ್ರದೇಶವನ್ನು ಹೆಚ್ಚಿಸುವಲ್ಲಿ ಅಂತರ್ಜಲ ಚೇತನ ಉತ್ತಮ ಯೋಜನೆಯಾಗಿದೆ ಎಂದರು.