ಕೊಪ್ಪಳ: ಪ್ರಖರ ಬಿಸಿಲಿಗೆ ಬಸವಳಿದಿದ್ದ ನಗರದ ಜನರಿಗೆ ಶುಕ್ರವಾರ ಕೆಲ ಹೊತ್ತು ಸುರಿದ ಜೋರು ಮಳೆ ಭಾರಿ ತಂಪು ಮೂಡಿಸಿತು. ಮಧ್ಯಾಹ್ನ ಸುಮಾರು ಅರ್ಧ ತಾಸು ಬಿರುಗಾಳಿ, ಗುಡುಗಿನ ಆರ್ಭಟದ ಜೊತೆಗೆ ಮಳೆ ಸುರಿಯಿತು. ಕೊಪ್ಪಳ, ಅಳವಂಡಿ, ಕುಕನೂರುನಲ್ಲಿ ಜೋರು ಮಳೆ ಮತ್ತು ಮುನಿರಾಬಾದ್ನಲ್ಲಿ ಆಲಿಕಲ್ಲು ಮಳೆ ಬಂತು.