ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಯಲ್ಲಿ ಪ್ರಾಮಾಣಿಕತೆ ಅಗತ್ಯ: ಪ್ರಹ್ಲಾದಾಚಾರ ಸೌದಿ

ನಿತ್ಯನಿಧಿ ಸಂಗ್ರಹಕಾರ ಪ್ರಹ್ಲಾದಾಚಾರ ಸೌದಿ ಹೇಳಿಕೆ
Last Updated 21 ಜೂನ್ 2021, 13:48 IST
ಅಕ್ಷರ ಗಾತ್ರ

ಕುಷ್ಟಗಿ: ‘ಉದ್ಯೋಗ ಯಾವುದೇ ಆಗಿದ್ದರೂ ಶ್ರದ್ಧೆ, ಪ್ರಾಮಾಣಿಕತೆ ಇರಬೇಕು. ಇದರಿಂದ ಸಮಾಜದಲ್ಲಿ ವಿಶ್ವಾಸ ವೃದ್ಧಿಸುತ್ತದೆ’ ಎಂದು ಪಟ್ಟಣದ ಪ್ರಹ್ಲಾದಾಚಾರ ಸೌದಿ ಹೇಳಿದರು.

ನಿತ್ಯನಿಧಿ ಠೇವಣಿ ಸಂಗ್ರಹ ವೃತ್ತಿಯಿಂದ ನಿವೃತ್ತಿ ಹೊಂದಿದ ಕಾರಣ ಇಲ್ಲಿಯ ಬುತ್ತಿಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಪಟ್ಟಣದ ನಿತ್ಯನಿಧಿ ಠೇವಣಿ ಸಂಗ್ರಹಕಾರರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಪ್ರತಿಯೊಬ್ಬರೂ ವೃತ್ತಿಪರ ಗೌರವ ಹೊಂದಿರಬೇಕು. ಜನರಿಗೆ ನಮ್ಮ ಕೈಲಾದಷ್ಟು ಸಹಾಯ, ಸಹಕಾರ ನೀಡುವುದೂ ಸಮಾಜದ ಋಣ ಸಂದಾಯದ ಒಂದು ಭಾಗವಾಗುತ್ತದೆ. ನಾಲ್ಕೂವರೆ ದಶಕದ ತಮ್ಮ ವೃತ್ತಿ ಬದುಕಿನಲ್ಲಿ ಗಳಿಸಿದ ವಿಶ್ವಾಸಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ’ ಎಂದು ಅನುಭವ ಹಂಚಿಕೊಂಡರು.

ಪಿಗ್ಮಿ ಸಂಗ್ರಹಕಾರರಾದ ಜಯತೀರ್ಥ ಸೌದಿ, ಅನಿಲಕುಮಾರ್ ಆಲಮೇಲ, ಪ್ರಶಾಂತ ಅಂಗಡಿ, ಶಂಕರಪ್ಪ ಬನ್ನಿಗೋಳ, ಜಮದಗ್ನಿ, ನಾಗರಾಜಗೌಡ, ಶ್ರೀಶೈಲ, ಶಿವಕುಮಾರ ಹಿರೇಮಠ ಹಾಗೂ ಹನುಮೇಶ ಕುಲಕರ್ಣಿ ಇದ್ದರು.

ಶಿಕ್ಷಕ ಅರವಿಂದಕುಮಾರ ದೇಸಾಯಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT