ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿ ಅಲ್ಪಾವಧಿಯಲ್ಲೇ ಆರೋಪಿತರ ಗುರುತು ಪತ್ತೆ ಹಚ್ಚಿದ ಕಾರಟಗಿ ಠಾಣೆಯ ಭೀಮಣ್ಣ, ಮಾರುತಿ, ಅಮರಪ್ಪ, ಮಂಜುಸಿಂಗ್, ಶರಣಪ್ಪ, ಶಿವರಾಜ, ಪ್ರಸನ್ನಕುಮಾರ, ಬಸವರಾಜ, ನಾಗರಾಜ, ಕನಕಗಿರಿ ಠಾಣೆ ಸಿಬ್ಬಂದಿ ಶೇಖರ್, ಕೊಟ್ರೇಶ್, ಬೈಲಪ್ಪ, ಅರ್ಜುನ ಅವರಿಗೆ ಬಹುಮಾನ, ಪ್ರಶಂಸಾ ಪತ್ರ ನೀಡಲಾಗುವುದು ಎಂದರು. ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ವೆಂಕಟಪ್ಪ ನಾಯಕ, ಸಿಪಿಐಉದಯರವಿ, ಪಿಎಸ್ಐ ಅವಿನಾಶ್, ಪ್ರಶಾಂತ ಪಿ.ಎಸ್.ಐ ಕನಕಗಿರಿ, ಸಿಬ್ಬಂದಿ ಇದ್ದರು.