ಹೋಟೆಲ್ಗಳ ಮೇಲೂ ಬೇಕಿದೆ ನಿಗಾ
ಉತ್ತರ ಕರ್ನಾಟಕದ ಖಾದ್ಯಗಳಲ್ಲಿ ತರಹೇವಾರಿ ಹೋಳಿಗೆಗಳು ಖ್ಯಾತಿ ಪಡೆದಿವೆ. ಶೇಂಗಾ ಹೂರಣ ಎಳ್ಳು ಹೀಗೆ ವಿವಿಧ ನಮೂನೆಯ ಹೋಳಿಗೆಗಳನ್ನು ಹೋಟೆಲ್ ಹಾಗೂ ಖಾನಾವಳಿಗಳಲ್ಲಿ ತಯಾರಿಸಲಾಗುತ್ತಿದೆ. ಅವುಗಳ ಮೇಲೆ ಹಾಕಲಾಗುವ ತುಪ್ಪದ ಮೇಲೂ ಅಧಿಕಾರಿಗಳು ನಿಗಾ ವಹಿಸಬೇಕಾಗಿದೆ. ಯಾಕೆಂದರೆ ಹಲವು ದಿನಗಳ ಹಿಂದೆ ಖಾನಾವಳಿಯೊಂದರಲ್ಲಿ ಶೇಂಗಾ ಹೋಳಿಗೆ ಮೇಲೆ ಬಿಸಿಯಾಗಿ ಕಾಯಿಸಿದ್ದ ತುಪ್ಪ ಹಾಕಿದ ಕೆಲವೇ ಹೊತ್ತಿನಲ್ಲಿ ಆ ತುಪ್ಪ ಬಿಳಿಬಣ್ಣಕ್ಕೆ ತಿರುಗಿತ್ತು. ಪೂರ್ಣಗಟ್ಟಿಯಾಗಿತ್ತು ಎಂದು ಗ್ರಾಹಕರೊಬ್ಬರು ತಿಳಿಸಿದರು. ಇನ್ನು ಕೆಲವರು ಮನೆಮನೆಗೆ ತೆರಳು ಕಡಿಮೆ ದರದಲ್ಲಿ ತುಪ್ಪು ಮಾರಾಟ ಮಾಡುತ್ತಾರೆ. ಇದು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.