<p><strong>ಕೊಪ್ಪಳ</strong>: ‘ನಾವು ಸ್ನೇಹಕ್ಕೆ ಗೌರವ ಕೊಟ್ಟು ಕದನ ವಿರಾಮ ಹೇಳಿದ್ದೇವೆ. ಇದರ ಅರ್ಥ ಇಡೀ ಜಗತ್ತಿನ ಜೊತೆ ಒಳ್ಳೆ ಸ್ನೇಹ ಬೆಳೆಸೋದು’ ಎಂದು ಭೋವಿ ಸಮುದಾಯದ ಇಮ್ಮಡಿ ಸಿದ್ದರಾಮೇಶ್ವರಶ್ರೀ ಹೇಳಿದರು.</p>.<p>ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಇದನ್ನು ಪಕ್ಕದ ರಾಷ್ಟ್ರ ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಕ್ರಾಂತಿ ಮೊಳಗಿಸೋದು ಅನಿವಾರ್ಯ’ ಎಂದರು.</p>.<p>ಅಮೆರಿಕ ಮತ್ತು ನಮ್ಮ ನಡುವೆ ಸೌಹಾರ್ದ ವಾತಾವರಣ ಇದೆ. ಹೀಗಾಗಿ ಅವರಿಗೆ ಗೌರವ ಕೊಡೋ ಕಾರಣಕ್ಕೆ ಕದನ ವಿರಾಮ ಒಪ್ಪಿಕೊಂಡಿದ್ದೇವೆ. ಭಾರತ ಜಗತ್ತಿಗೆ ಶಾಂತಿಧೂತ ರಾಷ್ಟ್ರ. ನಮ್ಮ ಮನೆಯವರಿಗೆ ತೊಂದರೆ ಕೊಟ್ಟರೆ ಶಾಂತಿ ಬೋಧಿಸೋಕೆ ಆಗಲ್ಲ. ಶಸ್ತ್ರ ಹಿಡಿದುಕೊಳ್ಳಲೆಬೇಕು’ ಎಂದರು.</p>.<p>‘ಕದನ ವಿರಾಮ ಮಾಡಿರೋದು ಒಳ್ಳೆಯದಲ್ಲ. ನಮಗೆ ಶಾಂತಿ ಬೋಧನೆ ಮಾಡಿದ ರಾಷ್ಟ್ರಗಳು ಇದೀಗ ಭಯೋತ್ಪಾದಕರನ್ನು ಅಟ್ಟಾಡಿಸೋ ಕೆಲಸ ಮಾಡಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ‘ನಾವು ಸ್ನೇಹಕ್ಕೆ ಗೌರವ ಕೊಟ್ಟು ಕದನ ವಿರಾಮ ಹೇಳಿದ್ದೇವೆ. ಇದರ ಅರ್ಥ ಇಡೀ ಜಗತ್ತಿನ ಜೊತೆ ಒಳ್ಳೆ ಸ್ನೇಹ ಬೆಳೆಸೋದು’ ಎಂದು ಭೋವಿ ಸಮುದಾಯದ ಇಮ್ಮಡಿ ಸಿದ್ದರಾಮೇಶ್ವರಶ್ರೀ ಹೇಳಿದರು.</p>.<p>ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಇದನ್ನು ಪಕ್ಕದ ರಾಷ್ಟ್ರ ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಕ್ರಾಂತಿ ಮೊಳಗಿಸೋದು ಅನಿವಾರ್ಯ’ ಎಂದರು.</p>.<p>ಅಮೆರಿಕ ಮತ್ತು ನಮ್ಮ ನಡುವೆ ಸೌಹಾರ್ದ ವಾತಾವರಣ ಇದೆ. ಹೀಗಾಗಿ ಅವರಿಗೆ ಗೌರವ ಕೊಡೋ ಕಾರಣಕ್ಕೆ ಕದನ ವಿರಾಮ ಒಪ್ಪಿಕೊಂಡಿದ್ದೇವೆ. ಭಾರತ ಜಗತ್ತಿಗೆ ಶಾಂತಿಧೂತ ರಾಷ್ಟ್ರ. ನಮ್ಮ ಮನೆಯವರಿಗೆ ತೊಂದರೆ ಕೊಟ್ಟರೆ ಶಾಂತಿ ಬೋಧಿಸೋಕೆ ಆಗಲ್ಲ. ಶಸ್ತ್ರ ಹಿಡಿದುಕೊಳ್ಳಲೆಬೇಕು’ ಎಂದರು.</p>.<p>‘ಕದನ ವಿರಾಮ ಮಾಡಿರೋದು ಒಳ್ಳೆಯದಲ್ಲ. ನಮಗೆ ಶಾಂತಿ ಬೋಧನೆ ಮಾಡಿದ ರಾಷ್ಟ್ರಗಳು ಇದೀಗ ಭಯೋತ್ಪಾದಕರನ್ನು ಅಟ್ಟಾಡಿಸೋ ಕೆಲಸ ಮಾಡಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>