ಸಾರನಾಥದ ನಾಲ್ಕುಮುಖದ ಸಿಂಹದ ಆಕರ್ಷಕ ಕೆತ್ತನೆಯೊಂದಿಗೆ ಇರುವ ಈ ಸರ್ಕಲ್ 1957ರಲ್ಲಿ ನಿರ್ಮಿಸಲಾಗಿದೆ. ಕೆಲ ತಿಂಗಳುಗಳ ಹಿಂದೆ ಸರ್ಕಲ್ಗೆ ವಾಹನ ಡಿಕ್ಕಿ ಹೊಡೆದಿದ್ದರಿಂದ ಐತಿಹಾಸಿಕವಾದ ಈ ಸ್ಮಾರಕ ಉಳಿಯಬೇಕು, ಧಕ್ಕೆಯಾಗದಂತೆ ಕ್ರಮ ವಹಿಸಬೇಕು ಎಂದು ಇಲ್ಲಿನ ಹೋರಾಟಗಾರರು ಹಾಗೂ ಇತಿಹಾಸ ಪ್ರೇಮಿಗಳು ಆಗ್ರಹಿಸಿದ್ದರು. ಆದ್ದರಿಂದ ಮಾರ್ಚ್ 21ರಂದು ಅಭಿವೃದ್ಧಿ ಕೆಲಸಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು.