ನಾಗರಿಕ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ಮಾತನಾಡಿ, ಜನಪದವು ಜನರ ಜೀವಾಳ. ಗ್ರಾಮೀಣ ಪ್ರದೇಶದ ಸಂಸ್ಕೃತಿ ಪರಂಪರೆ ಮತ್ತು ಸೊಗಡು ನಾಶವಾಗಿ ಮುಂದಿನ ಪೀಳಿಗೆಗೆ ಜನಪದ ಸಾಹಿತ್ಯ ತಿಳಿಸಲು ಕಷ್ಟವಾಗಲಿದೆ. ಆದ್ದರಿಂದ ಇದನ್ನು ಉಳಿಸಲು ಯುವಶಕ್ತಿ ಮುಂದಾಗಬೇಕು ಎಂದು ಸಲಹೆ ನೀಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಶರಣಯ್ಯ ಇಟಗಿ, ಉತ್ಸವದ ಸಂಚಾಲಕ ಮಹೇಶಬಾಬು ಸುರ್ವೆ, ಸಾಹಿತಿ ಫಕಿರಪ್ಪ ವಜ್ರಬಂಡಿ, ಸಾದಿಕ್ ಅಲಿ, ಎಂ.ಬಿ ಅಳವುಂಡಿ, ಅನ್ನಪೂರ್ಣಮ್ಮ ಮನ್ನಾಪುರ, ರುದ್ರಪ್ಪ ಬಂಡಾರಿ, ಮಂಜುನಾಥ ಪ್ರಸಾದ್, ಬಸವರಾಜ ಕೊನಾರಿ, ಬಿ.ಎಂ ಹಳ್ಳಿ, ಮಂಜುನಾಥ ಅಂಗಡಿ, ಕರಬಸಯ್ಯ ಬಿನ್ನಾಳ, ವಿರುಪಾಕ್ಷಪ್ಪ ಪೊಲೀಸ್ ಪಾಟೀಲ ಇದ್ದರು.