ಕಾರಟಗಿ: ಜನಾರ್ದನರೆಡ್ಡಿ ಎಂದರೆ ಹಣ, ಹಣ ಎಂದರೆ ಜನಾರ್ದನರೆಡ್ಡಿ ಎಂಬುದು ತಪ್ಪು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ಎಂದು ಕೆಆರ್ಪಿಪಿಕನಕಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಚಾರುಲ್ ವೆಂಕಟರಮಣ ದಾಸರಿ ಹೇಳಿದರು.
ಭಾನುವಾರ ಪಟ್ಟಣದಿಂದ ಕನಕಗಿರಿವರೆಗಿನ 3 ದಿನಗಳ 54 ಕಿ.ಮೀ. ಯುವ ಸಂಕಲ್ಪ ಯಾತ್ರೆಯ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಿವಿಧ ಕ್ಷೇತ್ರಗಳಿಗೆ ಆಯ್ಕೆ ಮಾಡಿರುವ ಅಭ್ಯರ್ಥಿಗಳು ಹಣವಂತರಲ್ಲ. ಜನರ ಸೇವೆ, ಕ್ಷೇತ್ರದ ಅಭಿವೃದ್ಧಿ ಮಾಡುವವರಾಗಿದ್ದಾರೆ ಎಂದರು.
ಪಕ್ಷದ ಮುಖಂಡರಾದ ವಿರುಪಾಕ್ಷಗೌಡ, ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರ, ಬ್ಲಾಕ್ ಅಧ್ಯಕ್ಷ ಚನ್ನಬಸಪ್ಪ ತಗ್ಗಿನಮನಿ, ಯುವಮೋರ್ಚಾ ಅಧ್ಯಕ್ಷ ಸುರೇಶ ಗೊಡವರ್ತಿ, ಪ್ರಚಾರ ಸಮಿತಿ ಅಧ್ಯಕ್ಷ ಸತೀಶ ಕಾರಟಗಿ ಇದ್ದರು.