ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸಮಸ್ಯೆಗೆ ಸ್ಪಂದಿಸಿ, ಅಭಿವೃದ್ಧಿಗೆ ಆದ್ಯತೆ: ಡಾ.ಚಾರುಲ್‌

Last Updated 27 ಮಾರ್ಚ್ 2023, 11:11 IST
ಅಕ್ಷರ ಗಾತ್ರ

ಕಾರಟಗಿ: ಜನಾರ್ದನರೆಡ್ಡಿ ಎಂದರೆ ಹಣ, ಹಣ ಎಂದರೆ ಜನಾರ್ದನರೆಡ್ಡಿ ಎಂಬುದು ತಪ್ಪು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ಎಂದು ಕೆಆರ್‌ಪಿಪಿಕನಕಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಚಾರುಲ್‌ ವೆಂಕಟರಮಣ ದಾಸರಿ ಹೇಳಿದರು.

ಭಾನುವಾರ ಪಟ್ಟಣದಿಂದ ಕನಕಗಿರಿವರೆಗಿನ 3 ದಿನಗಳ 54 ಕಿ.ಮೀ. ಯುವ ಸಂಕಲ್ಪ ಯಾತ್ರೆಯ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಿವಿಧ ಕ್ಷೇತ್ರಗಳಿಗೆ ಆಯ್ಕೆ ಮಾಡಿರುವ ಅಭ್ಯರ್ಥಿಗಳು ಹಣವಂತರಲ್ಲ. ಜನರ ಸೇವೆ, ಕ್ಷೇತ್ರದ ಅಭಿವೃದ್ಧಿ ಮಾಡುವವರಾಗಿದ್ದಾರೆ ಎಂದರು.

ಪಕ್ಷದ ಮುಖಂಡರಾದ ವಿರುಪಾಕ್ಷಗೌಡ, ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರ, ಬ್ಲಾಕ್‌ ಅಧ್ಯಕ್ಷ ಚನ್ನಬಸಪ್ಪ ತಗ್ಗಿನಮನಿ, ಯುವಮೋರ್ಚಾ ಅಧ್ಯಕ್ಷ ಸುರೇಶ ಗೊಡವರ್ತಿ, ಪ್ರಚಾರ ಸಮಿತಿ ಅಧ್ಯಕ್ಷ ಸತೀಶ ಕಾರಟಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT