ಡಾ.ಬಸವರಾಜ ಪೂಜಾರ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ಡಾ.ಮಲ್ಲಿಕಾರ್ಜುನ ಎಚ್ ಮತ್ತು ಯಮನೂರಪ್ಪ ತಳವಾರ ಉಪಸಂಪಾದಕತ್ವದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಈ ಕೃತಿ ರಚನೆಯಾಗಿದೆ. ಕಲಾವಿಜಯ ತಮ್ಮ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕವಾಗಿದೆ. ಜೊತೆಗೆ ನಾಡಿನ ಅನೇಕ ಹಿರಿಯ ವಿದ್ವಾಂಸರು, ಸಾಹಿತಿಗಳು ರಚಿಸಿರುವ ಬರಹಗಳಿಂದ ತುಂಬಿದ ಉತ್ತಮ ಜ್ಞಾನದ ದೀವಿಗೆಯಾಗಿದೆ. ತಾವೆಲ್ಲರೂ ಅದರ ಸದುಪಯೋಗ ಪಡೆದುಕೊಂಡು ಉತ್ತಮ ಜ್ಞಾನ ಮತ್ತು ಅಂಕ ಪಡೆದುಕೊಳ್ಳಬೇಕು ಎಂದರು.