<p><strong>ಯಲಬುರ್ಗಾ</strong>: ‘ಪಟ್ಟಣದಲ್ಲಿ ಹಾಲುಮತ ಸಮಾಜದ ವತಿಯಿಂದ ಆಯೋಜಿಸಿರುವ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಕಾರ್ಯ ಕ್ರಮವನ್ನು ಮಾಜಿ ಸಚಿವ ಬಸವರಾಜ ರಾಯರಡ್ಡಿ ರಾಜಕೀಯವಾಗಿ ಬಳಸಿಕೊಳ್ಳುವ ಮೂಲಕ ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಆರೋಪಿಸಿದರು.</p>.<p>ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಹಾಲುಮತ ಸಮಾಜವನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಂಡು ನಂತರ ಸಮಾಜದ ಮುಖಂಡರಿಗೆ ದ್ರೋಹ ಮಾಡುತ್ತಲೇ ಬಂದಿರುವ ರಾಯರಡ್ಡಿ ಈಗ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಯ ಹೆಸರಿನಲ್ಲಿ ಪೆಂಡಲ್ ಹಾಕಿಸುವುದು, ಬ್ಯಾನರ್ ಹಾಕಿಸುವುದು ಅಲ್ಲದ ಹಾಲುಮತ ಸಮಾಜದವರ ಗಮನಕ್ಕೆ ತರದೇ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಕಾರ್ಯ ಕ್ರಮವನ್ನು ಆಯೋಜಿಸು ತ್ತಿರುವುದು ಸರಿಯಾದ ಧೋರಣೆಯಲ್ಲ’ ಎಂದರು.</p>.<p>ಬಿಜೆಪಿಯ ಮುಖಂಡರೂ ಆದ ಕಳಕಪ್ಪ ಕಂಬಳಿ ‘ಸಿದ್ದರಾಮಯ್ಯ ಎದುರು ಬೇಳೆ ಬೇಯಿಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿ ಅಗ್ಗದ ಪ್ರಚಾರ ಗಿಟ್ಟಿಸಿ ಕೊಳ್ಳುವುದು, ಸಿದ್ದರಾಮಯ್ಯ ನವರ ಪ್ರವಾಸದ ವೆಚ್ಚ ಹಾಗೂ ಇನ್ನಿತರ ಅಗತ್ಯತೆ ಪೂರೈಸಲು ರಾಯರಡ್ಡಿ ಮುಂದಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ರಾಜಕೀಯ ವೇದಿಕೆಯನ್ನಾಗಿ ಮಾಡುವ ಮೂಲಕ ಕುರುಬ ಸಮಾಜವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಖಂಡನೀಯ’ ಎಂದರು.</p>.<p>‘ಸಿದ್ದರಾಮಯ್ಯನವರ ಜೊತೆ ಕಾರ್ಯಕ್ರಮ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತಗಳು ಬರುತ್ತವೆ ಎನ್ನುವ ಭ್ರಮೆಯಲ್ಲಿರುವ ರಾಯರಡ್ಡಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಹಾಲುಮತ ಸಮಾಜದ ಗಮನಕ್ಕಿಲ್ಲದೇ ರಾಯರಡ್ಡಿ ಸ್ವ ಆಸಕ್ತಿಯಿಂದ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಅಹಿತಕರ ಘಟನೆಗಳು ಜರುಗಿದರೆ ಅವರೇ ಹೊಣೆಗಾರರು’ ಎಂದರು.</p>.<p>ಮುಖಂಡರಾದ ದೊಡ್ಡಯ್ಯ ಗುರುವಿನ, ಶರಣು ಕಳಕಸಪ್ಪವನರ, ಶೇಖರಪ್ಪ ಕಂಬಳಿ, ಶ್ರೀನಿವಾಸ ತಿಮ್ಮಪ್ಪನರ, ಮಹೇಶ ಕವಲೂರ, ಮಲ್ಲಪ್ಪ ಚಳ್ಳಮರದ, ಶಿವರಾಜ, ರೇವಣೆಪ್ಪ ಹಿರೇಕುರುಬರ, ಶರಣ ಕುಮಾರ ಅಮರಗಟ್ಟಿ ಸೇರಿ ಅನೇಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ</strong>: ‘ಪಟ್ಟಣದಲ್ಲಿ ಹಾಲುಮತ ಸಮಾಜದ ವತಿಯಿಂದ ಆಯೋಜಿಸಿರುವ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಕಾರ್ಯ ಕ್ರಮವನ್ನು ಮಾಜಿ ಸಚಿವ ಬಸವರಾಜ ರಾಯರಡ್ಡಿ ರಾಜಕೀಯವಾಗಿ ಬಳಸಿಕೊಳ್ಳುವ ಮೂಲಕ ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಆರೋಪಿಸಿದರು.</p>.<p>ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಹಾಲುಮತ ಸಮಾಜವನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಂಡು ನಂತರ ಸಮಾಜದ ಮುಖಂಡರಿಗೆ ದ್ರೋಹ ಮಾಡುತ್ತಲೇ ಬಂದಿರುವ ರಾಯರಡ್ಡಿ ಈಗ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಯ ಹೆಸರಿನಲ್ಲಿ ಪೆಂಡಲ್ ಹಾಕಿಸುವುದು, ಬ್ಯಾನರ್ ಹಾಕಿಸುವುದು ಅಲ್ಲದ ಹಾಲುಮತ ಸಮಾಜದವರ ಗಮನಕ್ಕೆ ತರದೇ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಕಾರ್ಯ ಕ್ರಮವನ್ನು ಆಯೋಜಿಸು ತ್ತಿರುವುದು ಸರಿಯಾದ ಧೋರಣೆಯಲ್ಲ’ ಎಂದರು.</p>.<p>ಬಿಜೆಪಿಯ ಮುಖಂಡರೂ ಆದ ಕಳಕಪ್ಪ ಕಂಬಳಿ ‘ಸಿದ್ದರಾಮಯ್ಯ ಎದುರು ಬೇಳೆ ಬೇಯಿಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿ ಅಗ್ಗದ ಪ್ರಚಾರ ಗಿಟ್ಟಿಸಿ ಕೊಳ್ಳುವುದು, ಸಿದ್ದರಾಮಯ್ಯ ನವರ ಪ್ರವಾಸದ ವೆಚ್ಚ ಹಾಗೂ ಇನ್ನಿತರ ಅಗತ್ಯತೆ ಪೂರೈಸಲು ರಾಯರಡ್ಡಿ ಮುಂದಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ರಾಜಕೀಯ ವೇದಿಕೆಯನ್ನಾಗಿ ಮಾಡುವ ಮೂಲಕ ಕುರುಬ ಸಮಾಜವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಖಂಡನೀಯ’ ಎಂದರು.</p>.<p>‘ಸಿದ್ದರಾಮಯ್ಯನವರ ಜೊತೆ ಕಾರ್ಯಕ್ರಮ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತಗಳು ಬರುತ್ತವೆ ಎನ್ನುವ ಭ್ರಮೆಯಲ್ಲಿರುವ ರಾಯರಡ್ಡಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಹಾಲುಮತ ಸಮಾಜದ ಗಮನಕ್ಕಿಲ್ಲದೇ ರಾಯರಡ್ಡಿ ಸ್ವ ಆಸಕ್ತಿಯಿಂದ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಅಹಿತಕರ ಘಟನೆಗಳು ಜರುಗಿದರೆ ಅವರೇ ಹೊಣೆಗಾರರು’ ಎಂದರು.</p>.<p>ಮುಖಂಡರಾದ ದೊಡ್ಡಯ್ಯ ಗುರುವಿನ, ಶರಣು ಕಳಕಸಪ್ಪವನರ, ಶೇಖರಪ್ಪ ಕಂಬಳಿ, ಶ್ರೀನಿವಾಸ ತಿಮ್ಮಪ್ಪನರ, ಮಹೇಶ ಕವಲೂರ, ಮಲ್ಲಪ್ಪ ಚಳ್ಳಮರದ, ಶಿವರಾಜ, ರೇವಣೆಪ್ಪ ಹಿರೇಕುರುಬರ, ಶರಣ ಕುಮಾರ ಅಮರಗಟ್ಟಿ ಸೇರಿ ಅನೇಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>