ಕಾರಟಗಿ: ಕನಕಗಿರಿ ವಿಧಾನಸಭೆ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ ಅಭಿಮಾನಿಯೊಬ್ಬರು, ತಮ್ಮ ಎದೆಯ ಮೇಲೆ ತಂಗಡಗಿ ಅವರ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
2023ರ ವಿಧಾನಸಭೆ ಚುನಾವಣೆ ಯಲ್ಲಿ ಶಿವರಾಜ ತಂಗಡಗಿ ಮತ್ತೆ ಗೆಲ್ಲಬೇಕು. ಅವರದ್ದೇ ಪಕ್ಷ ಅಧಿಕಾರಕ್ಕೆ ಬಂದು, ಸಚಿವರಾಗಬೇಕು. ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಬೇಕು. ಕ್ಷೇತ್ರದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಆರೋಗ್ಯಕರ ವಾತಾವರಣ ನಿರ್ಮಾಣವಾಗಬೇಕು ಎಂಬ ಸಂಕಲ್ಪದೊಂದಿಗೆ ಈ ಹಚ್ಚೆ ಹಾಕಿಸಿಕೊಂಡಿದ್ದಾರೆ
ಪಟ್ಟಣದ 7ನೇ ವಾರ್ಡ್ನ ನಿವಾಸಿ ವಿಜಯ ಸಿಂಗ್ ರಜಪೂತ ಅವರು ಹಚ್ಚೆಹಾಕಿಸಿಕೊಂಡಿರುವವರು.
ರಾಜಕಾರಣಿ ಅಭಿಮಾನಿ ಎಂದರೆ ಸ್ವಾರ್ಥ ಸಾಧನೆಯಿರುತ್ತದೆ ಎಂಬೆಲ್ಲ ಆರೋಪಗಳಿವೆ. ಆದರೆ ವಿಜಯಸಿಂಗ್, ರಾಜಕಾರಣದಿಂದ ದೂರವಿದ್ದು, ನಿತ್ಯ ತಮ್ಮದೇ ಕೆಲಸದಲ್ಲಿ ತೊಡಗಿಸಿಕೊಂಡು, ನೈಜ ಅಭಿಮಾನ ಪ್ರದರ್ಶಿಸಿದ್ದಾರೆ.
ಹಚ್ಚೆಯ ಕೆಳಗೆ `ಮೈ ಬಾಸ್' ಎಂದು ಬರೆಯಿಸಿದ್ದು ಖಾಸಗಿ ಶಾಲೆ ವಾಹನ ಚಾಲಕ ರಾಗಿ ಕಾರ್ಯನಿರ್ವಹಿಸುತ್ತಿರುವ ವಿಜಯಸಿಂಗ್, ಮಾಜಿ ಸಚಿವರ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಯೆಂದು ಘೋಷಿಸಲ್ಪ ಟ್ಟಿರುವ ತಂಗಡಗಿಯವರು ಗೆದ್ದಿರುವ ಆತ್ಮವಿಶ್ವಾಸದಲ್ಲಿದ್ದಾರೆ. ಅವರು ನೈಜ ಕಾರ್ಯಕರ್ತರು, ಹಿತೈಷಿಗಳು, ಪ್ರತಿಫಲಾಪೇಕ್ಷೆ ಇಲ್ಲದೇ ಮಾರ್ಗದರ್ಶನ ಮಾಡುವವರಿಗೆ ಮಣೆ ಹಾಕಬೇಕು. ಹೀಗಾದರೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದರು.