‘ಈಗಾಗಲೇ ಕ್ಷೇತ್ರದಲ್ಲಿ ರಸ್ತೆ, ಹೆದ್ದಾರಿ, ರೈಲ್ವೆ ಯೋಜನೆ ವೇಗದಿಂದ ನಡೆಯುತ್ತಿವೆ. ಅವುಗಳನ್ನು ಪೂರ್ಣಗೊಳಿಸಲಾಗುವುದು. ಈ ಬಾರಿ ನನ್ನ ಚುನಾವಣೆ ಆದ್ಯತೆ ನೀರಾವರಿ ಕ್ಷೇತ್ರ ಆಗಿತ್ತು. ಜಿಲ್ಲೆಯ ಜನರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಎನ್ಡಿಎ ಸರ್ಕಾರ ಪ್ರಣಾಳಿಕೆಯಲ್ಲಿಯೇ ಭರವಸೆ ನೀಡಿದೆ. ಅದರಂತೆ ಕ್ಷೇತ್ರದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವುದೇ ನಮ್ಮ ಗುರಿಯಾಗಿದೆ’ ಎಂದು ಹೇಳಿದರು.