<p><strong>ಕಾರಟಗಿ:</strong> ‘ಪಟ್ಟಣದ ಗ್ರಾಮೀಣ ಸಂತೆ ಮಾರುಕಟ್ಟೆ ಪ್ರದೇಶದಲ್ಲಿ ಮಾಂಸ ಮಾರಾಟ ಅಂಗಡಿಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಇದರಿಂದ ದುರ್ವಾಸನೆ ಹೆಚ್ಚುತ್ತಿದೆ. ಶೀಘ್ರ ದುರ್ವಾಸನೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರ್ ಅವರಿಗೆ ಮನವಿ ಸಲ್ಲಿಸಿದರು.</p>.<p>ವಾರ್ಡ್ ನಂ.11 ಸೇರಿದಂತೆ ಸುತ್ತಲಿನ ಬಡಾವಣೆ ನಿವಾಸಿಗಳು ದುರ್ವಾಸನೆಯಿಂದ ವಾಸಿಸುವುದು ಕಷ್ಟವಾಗಿದೆ. ರೋಗ, ರುಜಿನಗಳ ಆತಂಕ ಹೆಚ್ಚಾಗಿದೆ. ಮಾಂಸ ಮಾರಾಟಗಾರರಿಗೆ ಸೂಕ್ತ ನಿರ್ದೇಶನ ನೀಡಿ, ದುರ್ವಾಸನೆ ಬರುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.</p>.<p>ವಾರ್ಡ್ನ ನಿವಾಸಿ ಶಿವರಾಜ್ ವಿ. ದಾನನಗೌಡ ಮಾತನಾಡಿ, ‘ಸಂತೆ ಮಾರುಕಟ್ಟೆಯಲ್ಲಿನ ಚಿಕನ್ ಹಾಗೂ ಮಟನ್ ಮಾರಾಟಗಾರರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡುವುದರಿಂದ ಬೀದಿನಾಯಿಗಳ ಹಾವಳಿ ಅಧಿಕವಾಗಿದೆ. ದುರ್ವಾಸನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೊಳ್ಳೆ ಮತ್ತಿತರ ಕ್ರಿಮಿಕೀಟಗಳ ಹಾವಳಿಯಿಂದ ಜನರು ಆನಾರೋಗ್ಯದಿಂದ ಬಳಲುವಂತಾಗಿದೆ’ ಎಂದರು.</p>.<p>ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಮಾತನಾಡಿ, ‘ಶೀಘ್ರವೇ ಚಿಕನ್ ಮತ್ತು ಮಟನ್ ವ್ಯಾಪಾರಿಗಳಿಗೆ ಸ್ವಚ್ಚತೆ ಕಾಪಾಡಲು ಸೂಚಿಸಲಾಗುವುದು. ಪುರಸಭೆಯಿಂದ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.</p>.<p>ವಾರ್ಡ್ನ ನಿವಾಸಿ ಪ್ರಶಾಂತ ನಾಯಕ, ವೆಂಕಟೇಶ ಕೋಟೆ, ಬೋನಾಬಾಯಿ, ನಿರ್ಮಲಮ್ಮ ಬಡಿಗೇರ, ಮಲ್ಲಮ್ಮ ಬಡಿಗೇರ, ಶಕುಂತಲಮ್ಮ, ರತ್ಮಮ್ಮ, ದ್ಯಾವಮ್ಮ ಬಡಿಗೇರ, ಹನುಮೇಶ ನಾಯಕ, ರಾಮಸಿಂಗ್, ಭವಾನಿ ಸಿಂಗ್, ಆಕಾಶ್ ಮಡ್ಡೇರ್ ಸಹಿತ ಅನೇಕರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-35-309517153</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ:</strong> ‘ಪಟ್ಟಣದ ಗ್ರಾಮೀಣ ಸಂತೆ ಮಾರುಕಟ್ಟೆ ಪ್ರದೇಶದಲ್ಲಿ ಮಾಂಸ ಮಾರಾಟ ಅಂಗಡಿಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಇದರಿಂದ ದುರ್ವಾಸನೆ ಹೆಚ್ಚುತ್ತಿದೆ. ಶೀಘ್ರ ದುರ್ವಾಸನೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರ್ ಅವರಿಗೆ ಮನವಿ ಸಲ್ಲಿಸಿದರು.</p>.<p>ವಾರ್ಡ್ ನಂ.11 ಸೇರಿದಂತೆ ಸುತ್ತಲಿನ ಬಡಾವಣೆ ನಿವಾಸಿಗಳು ದುರ್ವಾಸನೆಯಿಂದ ವಾಸಿಸುವುದು ಕಷ್ಟವಾಗಿದೆ. ರೋಗ, ರುಜಿನಗಳ ಆತಂಕ ಹೆಚ್ಚಾಗಿದೆ. ಮಾಂಸ ಮಾರಾಟಗಾರರಿಗೆ ಸೂಕ್ತ ನಿರ್ದೇಶನ ನೀಡಿ, ದುರ್ವಾಸನೆ ಬರುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.</p>.<p>ವಾರ್ಡ್ನ ನಿವಾಸಿ ಶಿವರಾಜ್ ವಿ. ದಾನನಗೌಡ ಮಾತನಾಡಿ, ‘ಸಂತೆ ಮಾರುಕಟ್ಟೆಯಲ್ಲಿನ ಚಿಕನ್ ಹಾಗೂ ಮಟನ್ ಮಾರಾಟಗಾರರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡುವುದರಿಂದ ಬೀದಿನಾಯಿಗಳ ಹಾವಳಿ ಅಧಿಕವಾಗಿದೆ. ದುರ್ವಾಸನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೊಳ್ಳೆ ಮತ್ತಿತರ ಕ್ರಿಮಿಕೀಟಗಳ ಹಾವಳಿಯಿಂದ ಜನರು ಆನಾರೋಗ್ಯದಿಂದ ಬಳಲುವಂತಾಗಿದೆ’ ಎಂದರು.</p>.<p>ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಮಾತನಾಡಿ, ‘ಶೀಘ್ರವೇ ಚಿಕನ್ ಮತ್ತು ಮಟನ್ ವ್ಯಾಪಾರಿಗಳಿಗೆ ಸ್ವಚ್ಚತೆ ಕಾಪಾಡಲು ಸೂಚಿಸಲಾಗುವುದು. ಪುರಸಭೆಯಿಂದ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.</p>.<p>ವಾರ್ಡ್ನ ನಿವಾಸಿ ಪ್ರಶಾಂತ ನಾಯಕ, ವೆಂಕಟೇಶ ಕೋಟೆ, ಬೋನಾಬಾಯಿ, ನಿರ್ಮಲಮ್ಮ ಬಡಿಗೇರ, ಮಲ್ಲಮ್ಮ ಬಡಿಗೇರ, ಶಕುಂತಲಮ್ಮ, ರತ್ಮಮ್ಮ, ದ್ಯಾವಮ್ಮ ಬಡಿಗೇರ, ಹನುಮೇಶ ನಾಯಕ, ರಾಮಸಿಂಗ್, ಭವಾನಿ ಸಿಂಗ್, ಆಕಾಶ್ ಮಡ್ಡೇರ್ ಸಹಿತ ಅನೇಕರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-35-309517153</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>