<p><strong>ಅಳವಂಡಿ:</strong> ‘ಭಗತ್ಸಿಂಗ್ ಅವರ ಹೆಸರು ಇಂದಿಗೂ ಲಕ್ಷಾಂತರ ಯುವಜನರ ಮನದಲ್ಲಿ ನೆಲೆಸಿದೆ. ಅವರ ಆದರ್ಶಗಳನ್ನು ಇಂದಿನ ಯುವ ಜನತೆ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಿದೆ’ ಎಂದು ಕಾನೂನು, ಮಾಹಿತಿ ಹಕ್ಕು ಮಾನವ ಹಕ್ಕುಗಳ ವಿಭಾಗದ ಜಿಲ್ಲಾಧ್ಯಕ್ಷ ಗುರುಬಸವರಾಜ ಹಳ್ಳಿಕೇರಿ ಹೇಳಿದರು.</p>.<p>ಗ್ರಾಮದಲ್ಲಿ ಭಗತ್ಸಿಂಗ್ ಯುವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೂತನ ಕಾರ್ಯಾಲಯ ಉದ್ಘಾಟನೆ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p>.<p>ಮಲ್ಲಿಕಾರ್ಜುನ ಮೇಟಿ ಮಾತನಾಡಿ, ‘ಅಳವಂಡಿಯಲ್ಲಿ ಭಗತ್ಸಿಂಗ್ ಅವರ ಸ್ಮಾರಕ ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗ ಳಲ್ಲಿ ಅಭಿಯಾನ ಕೈಗೊಂಡು ರಾಜ್ಯದ ಪ್ರತಿಯೊಂದು ತಾಲ್ಲೂಕಿನಿಂದ ಒಂದು ಹಿಡಿ ಮಣ್ಣು, ಒಂದು ರೂಪಾಯಿ ಸಂಗ್ರಹಿಸಿ, ಆ ಮಣ್ಣನ್ನು ಸ್ಮಾರಕದಲ್ಲಿ ಬೆರೆಸಲಾಗುವುದು’ ಎಂದರು.</p>.<p>ಮುತ್ತಣ್ಣ ಮೇಟಿ, ತಿರುಪತಿ ವಡ್ಡರ್, ಗವಿಸಿದ್ದಪ್ಪ ಶ್ವಾರಗಲ್, ಶಿವುಕುಮಾರ ಗಾಳಿ, ಶಿವ ಗ್ಯಾನಪ್ಪ, ನೀಲಿಹಿಂಡರ್, ಅನ್ನಪೂರ್ಣ ಜಂತ್ಲಿ, ಮಂಜವ್ವ ಭಾಗ್ಯನಗರ, ಮಂಜಮ್ಮ ಕೊರವರ, ಪಾರ್ವತಿ ದೋತರಗಾವಿ, ಶರಣಪ್ಫ ಬಳ್ಳಾರಿ, ಶಿವುಕುಮಾರ ಪೋಲಿಸ್ ಪಾಟೀಲ, ಅನಿಲ ದೊಡ್ಡಮನಿ, ಮನು ಶೆಟ್ಟರ್, ಪುಟ್ಟರಾಜ ಎಲಿಗಾರ, ರಾಹುಲ್ ನೀಲಿಹಿಂಡರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳವಂಡಿ:</strong> ‘ಭಗತ್ಸಿಂಗ್ ಅವರ ಹೆಸರು ಇಂದಿಗೂ ಲಕ್ಷಾಂತರ ಯುವಜನರ ಮನದಲ್ಲಿ ನೆಲೆಸಿದೆ. ಅವರ ಆದರ್ಶಗಳನ್ನು ಇಂದಿನ ಯುವ ಜನತೆ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಿದೆ’ ಎಂದು ಕಾನೂನು, ಮಾಹಿತಿ ಹಕ್ಕು ಮಾನವ ಹಕ್ಕುಗಳ ವಿಭಾಗದ ಜಿಲ್ಲಾಧ್ಯಕ್ಷ ಗುರುಬಸವರಾಜ ಹಳ್ಳಿಕೇರಿ ಹೇಳಿದರು.</p>.<p>ಗ್ರಾಮದಲ್ಲಿ ಭಗತ್ಸಿಂಗ್ ಯುವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೂತನ ಕಾರ್ಯಾಲಯ ಉದ್ಘಾಟನೆ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p>.<p>ಮಲ್ಲಿಕಾರ್ಜುನ ಮೇಟಿ ಮಾತನಾಡಿ, ‘ಅಳವಂಡಿಯಲ್ಲಿ ಭಗತ್ಸಿಂಗ್ ಅವರ ಸ್ಮಾರಕ ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗ ಳಲ್ಲಿ ಅಭಿಯಾನ ಕೈಗೊಂಡು ರಾಜ್ಯದ ಪ್ರತಿಯೊಂದು ತಾಲ್ಲೂಕಿನಿಂದ ಒಂದು ಹಿಡಿ ಮಣ್ಣು, ಒಂದು ರೂಪಾಯಿ ಸಂಗ್ರಹಿಸಿ, ಆ ಮಣ್ಣನ್ನು ಸ್ಮಾರಕದಲ್ಲಿ ಬೆರೆಸಲಾಗುವುದು’ ಎಂದರು.</p>.<p>ಮುತ್ತಣ್ಣ ಮೇಟಿ, ತಿರುಪತಿ ವಡ್ಡರ್, ಗವಿಸಿದ್ದಪ್ಪ ಶ್ವಾರಗಲ್, ಶಿವುಕುಮಾರ ಗಾಳಿ, ಶಿವ ಗ್ಯಾನಪ್ಪ, ನೀಲಿಹಿಂಡರ್, ಅನ್ನಪೂರ್ಣ ಜಂತ್ಲಿ, ಮಂಜವ್ವ ಭಾಗ್ಯನಗರ, ಮಂಜಮ್ಮ ಕೊರವರ, ಪಾರ್ವತಿ ದೋತರಗಾವಿ, ಶರಣಪ್ಫ ಬಳ್ಳಾರಿ, ಶಿವುಕುಮಾರ ಪೋಲಿಸ್ ಪಾಟೀಲ, ಅನಿಲ ದೊಡ್ಡಮನಿ, ಮನು ಶೆಟ್ಟರ್, ಪುಟ್ಟರಾಜ ಎಲಿಗಾರ, ರಾಹುಲ್ ನೀಲಿಹಿಂಡರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>