<p><strong>ಗಂಗಾವತಿ (ಕೊಪ್ಪಳ ಜಿಲ್ಲೆ):</strong> ತಾಲ್ಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ ಅಂಜನಾದ್ರಿ ಬೆಟ್ಟದ ಆಂಜನೇಯನಿಗೆ ಹೈದರಾಬಾದ್ ಮೂಲದ ಎ.ಎಂ.ಆರ್. ಸಂಸ್ಥೆಯ ಅಧ್ಯಕ್ಷ ಡಾ.ಎ.ಮಹೇಶರೆಡ್ಡಿ ದಂಪತಿ ಶಾಸಕ ಜಿ.ಜನಾರ್ದನ ರೆಡ್ಡಿ ದಂಪತಿ ನೇತೃತ್ವದಲ್ಲಿ ₹2.5 ಕೋಟಿ ಮೌಲ್ಯದ ಬಂಗಾರದ ಆಭರಣಗಳನ್ನು ಶುಕ್ರವಾರ ಸಮರ್ಪಿಸಲಾಗಿದೆ.</p>.<p>ಬೆಳಿಗ್ಗೆ 5 ಗಂಟೆಗೆ ಆಂಜನೇಯನ ಪಾದಗಟ್ಟೆ ಬಳಿ ಚಿನ್ನದ ಪ್ರಭಾವಳಿ, ಛತ್ರಿ, ಕಿರೀಟ, ಗದೆ ಇರಿಸಿ, ವಿವಿಧ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ಪೂಜಾ ಮಾಡಲಾಯಿತು.</p>.<p>ನಂತರ ಎಲ್ಲರೂ 575 ಮೆಟ್ಟಿಲು ಏರಿಕೊಂಡು ಬಂದು, ಅಂಜನೇಯನ ದೇವರಿಗೆ ಸುಪ್ರಭಾತ ಸೇವೆ, ಅಲಂಕಾರ, ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ಕೈಗೊಂಡರು. ಬಳಿಕ ದೇವರಿಗೆ ಪ್ರಭಾವಳಿ, ಕಿರೀಟ, ಛತ್ರಿ, ಗದೆ ಇರಿಸಲಾಯಿತು.</p>.<p>ಈ ಸಂದರ್ಭದಲ್ಲಿ ಶಾಸಕ ಜಿ.ಜನಾರ್ದನ ರೆಡ್ಡಿ ಅವರು, ‘ಎ.ಎಂ.ಆರ್. ಸಂಸ್ಥೆ ಭಾರತದಲ್ಲಿನ ಅಗ್ರಗಣ್ಯ ಸಂಸ್ಥೆಗಳಲ್ಲಿ 3ನೇ ಸ್ಥಾನದಲ್ಲಿದೆ. ಈ ಹಿಂದೆ ಚುನಾವಣೆ ವೇಳೆ ಹನುಮಂತನಿಗೆ ಬಂಗಾರದ ಆಭರಣಗಳನ್ನು ನೀಡುವ ಭಕ್ತಿ ಹೊಂದಿದ್ದೆ. ಇಂದು ಈಡೇರಿದೆ’ ಎಂದರು.</p>.<p>‘ಅಂಜನಾದ್ರಿಯಲ್ಲಿ ₹240 ಕೋಟಿ ವೆಚ್ಚದಲ್ಲಿ ಮೆಟ್ಟಿಲು, ಗೋಪುರ, ರಾಮ, ಲಕ್ಷ್ಮಣ, ಸೀತೆ ದೇವಸ್ಥಾನ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು’ ಎಂದರು.</p>.<p>ಗಂಗಾವತಿ ತಹಶೀಲ್ದಾರ್ ವಸಂತ ಕುಮಾರಿ, ಕನಕಗಿರಿ ತಹಶೀಲ್ದಾರ್ ವಿಶ್ವನಾಥ, ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ಪಾಟೀಲ, ಮಾಜಿ ಸಂಸದ ಶಿವರಾಮೇಗೌಡ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-51-1536056566</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ (ಕೊಪ್ಪಳ ಜಿಲ್ಲೆ):</strong> ತಾಲ್ಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ ಅಂಜನಾದ್ರಿ ಬೆಟ್ಟದ ಆಂಜನೇಯನಿಗೆ ಹೈದರಾಬಾದ್ ಮೂಲದ ಎ.ಎಂ.ಆರ್. ಸಂಸ್ಥೆಯ ಅಧ್ಯಕ್ಷ ಡಾ.ಎ.ಮಹೇಶರೆಡ್ಡಿ ದಂಪತಿ ಶಾಸಕ ಜಿ.ಜನಾರ್ದನ ರೆಡ್ಡಿ ದಂಪತಿ ನೇತೃತ್ವದಲ್ಲಿ ₹2.5 ಕೋಟಿ ಮೌಲ್ಯದ ಬಂಗಾರದ ಆಭರಣಗಳನ್ನು ಶುಕ್ರವಾರ ಸಮರ್ಪಿಸಲಾಗಿದೆ.</p>.<p>ಬೆಳಿಗ್ಗೆ 5 ಗಂಟೆಗೆ ಆಂಜನೇಯನ ಪಾದಗಟ್ಟೆ ಬಳಿ ಚಿನ್ನದ ಪ್ರಭಾವಳಿ, ಛತ್ರಿ, ಕಿರೀಟ, ಗದೆ ಇರಿಸಿ, ವಿವಿಧ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ಪೂಜಾ ಮಾಡಲಾಯಿತು.</p>.<p>ನಂತರ ಎಲ್ಲರೂ 575 ಮೆಟ್ಟಿಲು ಏರಿಕೊಂಡು ಬಂದು, ಅಂಜನೇಯನ ದೇವರಿಗೆ ಸುಪ್ರಭಾತ ಸೇವೆ, ಅಲಂಕಾರ, ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ಕೈಗೊಂಡರು. ಬಳಿಕ ದೇವರಿಗೆ ಪ್ರಭಾವಳಿ, ಕಿರೀಟ, ಛತ್ರಿ, ಗದೆ ಇರಿಸಲಾಯಿತು.</p>.<p>ಈ ಸಂದರ್ಭದಲ್ಲಿ ಶಾಸಕ ಜಿ.ಜನಾರ್ದನ ರೆಡ್ಡಿ ಅವರು, ‘ಎ.ಎಂ.ಆರ್. ಸಂಸ್ಥೆ ಭಾರತದಲ್ಲಿನ ಅಗ್ರಗಣ್ಯ ಸಂಸ್ಥೆಗಳಲ್ಲಿ 3ನೇ ಸ್ಥಾನದಲ್ಲಿದೆ. ಈ ಹಿಂದೆ ಚುನಾವಣೆ ವೇಳೆ ಹನುಮಂತನಿಗೆ ಬಂಗಾರದ ಆಭರಣಗಳನ್ನು ನೀಡುವ ಭಕ್ತಿ ಹೊಂದಿದ್ದೆ. ಇಂದು ಈಡೇರಿದೆ’ ಎಂದರು.</p>.<p>‘ಅಂಜನಾದ್ರಿಯಲ್ಲಿ ₹240 ಕೋಟಿ ವೆಚ್ಚದಲ್ಲಿ ಮೆಟ್ಟಿಲು, ಗೋಪುರ, ರಾಮ, ಲಕ್ಷ್ಮಣ, ಸೀತೆ ದೇವಸ್ಥಾನ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು’ ಎಂದರು.</p>.<p>ಗಂಗಾವತಿ ತಹಶೀಲ್ದಾರ್ ವಸಂತ ಕುಮಾರಿ, ಕನಕಗಿರಿ ತಹಶೀಲ್ದಾರ್ ವಿಶ್ವನಾಥ, ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ಪಾಟೀಲ, ಮಾಜಿ ಸಂಸದ ಶಿವರಾಮೇಗೌಡ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-51-1536056566</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>