<p><strong>ಕೊಪ್ಪಳ:</strong> ಸರಕು ಸಾಗಾಣಿಕೆಗೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿರುವ ವ್ಯಾಗಿನ್ ಸೌಲಭ್ಯವನ್ನು ಒಂದು ತಿಂಗಳೊಳಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಭಾಗ್ಯನಗರದ ನಾಗರಿಕ ಹಿತರಕ್ಷಣಾ ವೇದಿಕೆ ಪ್ರಮುಖರು ಸೋಮವಾರ ನಗರದಲ್ಲಿ ಹಲವರಿಗೆ ಮನವಿ ಸಲ್ಲಿಸಿದ್ದಾರೆ.</p>.<p>ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಬರೆದ ಪತ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ರೈಲು ನಿಲ್ದಾಣದ ಅಧಿಕಾರಿ ಹಾಗೂ ಇತರರಿಗೆ ಸಲ್ಲಿಸಲಾಗಿದ್ದು ರೈಲು ನಿಲ್ದಾಣದ ಮೂಲಕ ಭಾಗ್ಯನಗರ ರಸ್ತೆಯ ಮೂಲಕ ಸಂಚರಿಸುವ ವ್ಯಾಗಿನ್ ಲಾರಿಗಳಿಂದ ರಸ್ತೆಗಳು ಹಾಳಾಗುತ್ತಿವೆ ಎಂದು ಹೇಳಿದ್ದಾರೆ. </p>.<p>ಸರಕು ತುಂಬಿದ ಲಾರಿಗಳ ಓಡಾಟದಿಂದಾಗಿ ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಯ ಮಧ್ಯದಲ್ಲಿ ಲಾರಿಗಳು ಕೆಟ್ಟುನಿಂತು ಅನೇಕ ಬಾರಿ ತೊಂದರೆ ಉಂಟು ಮಾಡಿದ ಘಟನೆಗಳು ಕೂಡ ನಡೆದಿವೆ. ಆದ್ದರಿಂದ ರೈಲುಗಳ ಮೂಲಕ ಬರುವ ಸರಕು ಲೋಡ್ ಹಾಗೂ ಅನ್ಲೋಡ್ ವ್ಯವಸ್ಥೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.</p>.<p>ರೈಲು ನಿಲ್ದಾಣದಲ್ಲಿ ಎರಡನೇ ಪ್ಲಾಟ್ಫಾರ್ಮ್ ಆರಂಭಿಸಿ ಅಲ್ಲಿ ಎಸ್ಕಲೇಟರ್, ಟಿಕೆಟ್ ಕೌಂಟರ್ ಆರಂಭಿಸಿದರೆ ಇದಕ್ಕೆ ಹೊಂದಿಕೊಂಡಿರುವ ಭಾಗ್ಯನಗರ ಹಾಗೂ ಇತರ ಜನರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.</p>.<p>ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ ಹ್ಯಾಟಿ, ಉಪಾಧ್ಯಕ್ಷ ಹೊನ್ನೂರಸಾಬ್ ಬೈರಾಪುರ, ಉದ್ಯಮಿ ಶ್ರೀನಿವಾಸ ಗುಪ್ತಾ, ಪ್ರಮುಖರಾದ ಪ್ರಹ್ಲಾದ ಅಗಳಿ, ರಾಘವೇಂದ್ರ ಪಾನಘಂಟಿ, ಸುಬ್ಬಯ್ಯ ಸಲ್ಲ, ಡಾ. ಶ್ರೀನಿವಾಸ್ ಹ್ಯಾಟಿ ಶ್ರೀಧರ್ ಎಚ್., ಡಾ. ಕೊಟ್ರೇಶ್ ಸೇಡ್ಮಿ, ಗ್ಯಾನೇಶ್ ಹ್ಯಾಟಿ, ಕೊಟ್ರೇಶ್ ಕವಲೂರು, ಸುರೇಶ್ ದರ್ಗದ, ಕಟ್ಟಿ ಚಂದ್ರು, ಬೆಟಗೇರಿಕೃಷ್ಣ ಮ್ಯಾಗಳಮನಿ ಸೇರಿದಂತೆ ಅನೇಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ಸರಕು ಸಾಗಾಣಿಕೆಗೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿರುವ ವ್ಯಾಗಿನ್ ಸೌಲಭ್ಯವನ್ನು ಒಂದು ತಿಂಗಳೊಳಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಭಾಗ್ಯನಗರದ ನಾಗರಿಕ ಹಿತರಕ್ಷಣಾ ವೇದಿಕೆ ಪ್ರಮುಖರು ಸೋಮವಾರ ನಗರದಲ್ಲಿ ಹಲವರಿಗೆ ಮನವಿ ಸಲ್ಲಿಸಿದ್ದಾರೆ.</p>.<p>ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಬರೆದ ಪತ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ರೈಲು ನಿಲ್ದಾಣದ ಅಧಿಕಾರಿ ಹಾಗೂ ಇತರರಿಗೆ ಸಲ್ಲಿಸಲಾಗಿದ್ದು ರೈಲು ನಿಲ್ದಾಣದ ಮೂಲಕ ಭಾಗ್ಯನಗರ ರಸ್ತೆಯ ಮೂಲಕ ಸಂಚರಿಸುವ ವ್ಯಾಗಿನ್ ಲಾರಿಗಳಿಂದ ರಸ್ತೆಗಳು ಹಾಳಾಗುತ್ತಿವೆ ಎಂದು ಹೇಳಿದ್ದಾರೆ. </p>.<p>ಸರಕು ತುಂಬಿದ ಲಾರಿಗಳ ಓಡಾಟದಿಂದಾಗಿ ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಯ ಮಧ್ಯದಲ್ಲಿ ಲಾರಿಗಳು ಕೆಟ್ಟುನಿಂತು ಅನೇಕ ಬಾರಿ ತೊಂದರೆ ಉಂಟು ಮಾಡಿದ ಘಟನೆಗಳು ಕೂಡ ನಡೆದಿವೆ. ಆದ್ದರಿಂದ ರೈಲುಗಳ ಮೂಲಕ ಬರುವ ಸರಕು ಲೋಡ್ ಹಾಗೂ ಅನ್ಲೋಡ್ ವ್ಯವಸ್ಥೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.</p>.<p>ರೈಲು ನಿಲ್ದಾಣದಲ್ಲಿ ಎರಡನೇ ಪ್ಲಾಟ್ಫಾರ್ಮ್ ಆರಂಭಿಸಿ ಅಲ್ಲಿ ಎಸ್ಕಲೇಟರ್, ಟಿಕೆಟ್ ಕೌಂಟರ್ ಆರಂಭಿಸಿದರೆ ಇದಕ್ಕೆ ಹೊಂದಿಕೊಂಡಿರುವ ಭಾಗ್ಯನಗರ ಹಾಗೂ ಇತರ ಜನರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.</p>.<p>ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ ಹ್ಯಾಟಿ, ಉಪಾಧ್ಯಕ್ಷ ಹೊನ್ನೂರಸಾಬ್ ಬೈರಾಪುರ, ಉದ್ಯಮಿ ಶ್ರೀನಿವಾಸ ಗುಪ್ತಾ, ಪ್ರಮುಖರಾದ ಪ್ರಹ್ಲಾದ ಅಗಳಿ, ರಾಘವೇಂದ್ರ ಪಾನಘಂಟಿ, ಸುಬ್ಬಯ್ಯ ಸಲ್ಲ, ಡಾ. ಶ್ರೀನಿವಾಸ್ ಹ್ಯಾಟಿ ಶ್ರೀಧರ್ ಎಚ್., ಡಾ. ಕೊಟ್ರೇಶ್ ಸೇಡ್ಮಿ, ಗ್ಯಾನೇಶ್ ಹ್ಯಾಟಿ, ಕೊಟ್ರೇಶ್ ಕವಲೂರು, ಸುರೇಶ್ ದರ್ಗದ, ಕಟ್ಟಿ ಚಂದ್ರು, ಬೆಟಗೇರಿಕೃಷ್ಣ ಮ್ಯಾಗಳಮನಿ ಸೇರಿದಂತೆ ಅನೇಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>