‘ನನ್ನ ತಮ್ಮ ಧನಗುಂಡಯ್ಯನ ಹೆಂಡತಿ ಗವಿಸಿದ್ದಮ್ಮ ಹಾಗೂ ಬೇಳೂರು ಗ್ರಾಮದ ವೀರಯ್ಯ ಹಿರೇಮಠ ನಡುವೆ ಅನೈತಿಕ ಸಂಬಂಧವಿತ್ತು. ಈ ಕುರಿತು ನಮ್ಮ ಮನೆಯಲ್ಲಿ ಅನೇಕ ಬಾರಿ ಜಗಳವಾಗಿತ್ತು. ಸಮಸ್ಯೆ ಪರಿಹರಿಸುವುದಾಕ್ಕಾಗಿ ಗವಿಸಿದ್ದಮ್ಮಗೆ ಊರ ಹಿರಿಯರ ಮುಂದೆ ಬುದ್ಧಿವಾದ ಹೇಳಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಮನನೊಂದು ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಮೃತನ ಸಹೋದರ ಬಸಯ್ಯ ಧನಗುಂಡಿಮಠ ದೂರಿನಲ್ಲಿ ತಿಳಿಸಿದ್ದಾರೆ. ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.