<p><strong>ಕೊಪ್ಪಳ:</strong> ಬಿರು ಬೇಸಿಗೆಯಲ್ಲಿನ ಬಿಸಿಲಿನ ತಾಪ ಕಡಿಮೆಯಾಗಿ ಜಿಲ್ಲೆಯಲ್ಲಿ ನಿಧಾನವಾಗಿ ಮಳೆಯ ವಾತಾವರಣ ನಿರ್ಮಾಣವಾಗುತ್ತಿದ್ದು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಅನ್ನದಾತರು ಸಜ್ಜಾಗುತ್ತಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 3.17 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿದೆ.</p>.<p>ಗಂಗಾವತಿ, ಕೊಪ್ಪಳ ತಾಲ್ಲೂಕಿನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಭಾಗ, ಕನಕಗಿರಿ ಹಾಗೂ ಕಾರಟಗಿಯಲ್ಲಿ ಭತ್ತ ಬಿತ್ತನೆ ಮಾಡಲಾಗುತ್ತಿದ್ದು, ಭತ್ತದ ಒಟ್ಟು ಬಿತ್ತನೆ ಪ್ರದೇಶವೇ 62 ಸಾವಿರ ಹೆಕ್ಟೇರ್ನಷ್ಟಿದೆ. ತುಂಗಭದ್ರಾ ಜಲಾಶಯದಲ್ಲಿ ಕ್ರೆಸ್ಟ್ಗೇಟ್ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು ಅಂತಿಮ ಹಂತದ ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ಶಿವಮೊಗ್ಗ ಹಾಗೂ ಆ ಕಡೆಯ ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆಯಾದರೆ ಜಲಾಶಯಕ್ಕೆ ಸಮೃದ್ಧವಾಗಿ ನೀರು ಹರಿದು ಬರುತ್ತದೆ. ಈ ನೀರಿನ ಆಧಾರದ ಮೇಲೆಯೇ ಬಹುತೇಕ ಕಡೆ ಭತ್ತ ಬಿತ್ತನೆ ಮಾಡಲಾಗುತ್ತದೆ.</p>.<p>ಜಿಲ್ಲೆಯಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುವ ಪ್ರದೇಶವಿದ್ದು ಈ ಬಾರಿ 1,00,057 ಹೆಕ್ಟೇರ್ ಗುರಿ ನಿಗದಿ ಮಾಡಲಾಗಿದೆ. ಇವುಗಳನ್ನು ಹೊರತುಪಡಿಸಿ ಶಕ್ತಿಮಾನ್ ಜೋಳ (2500 ಹೆಕ್ಟೇರ್), ಸಜ್ಜೆ (64372 ಹೆಕ್ಟೇರ್), ನವಣೆ (5001 ಹೆಕ್ಟೇರ್), ಹುರಳಿ (3586 ಹೆಕ್ಟೇರ್), ಹೆಸರು (15411 ಹೆಕ್ಟೇರ್), ಶೇಂಗಾ (10652 ಹೆಕ್ಟೇರ್), ಸೂರ್ಯಕಾಂತಿ (14146 ಹೆಕ್ಟೇರ್), ಎಳ್ಳು (5577 ಹೆಕ್ಟೇರ್) ಪ್ರದೇಶದಲ್ಲಿ ಬೆಳೆಯುವ ಗುರಿ ನಿಗದಿ ಮಾಡಲಾಗಿದೆ. ಲ್ಲಲ್ಲಿ ಹೆಸರು, ಅಲಸಂದಿ, ಅವರೆ, ಮಡಿಕೆ, ಎಳ್ಳು, ಗುರೆಳ್ಳು, ಔಡಲ, ಹತ್ತಿ, ಕಬ್ಬು ಬೆಳೆಯಲಾಗುತ್ತದೆ.</p>.<p>ಜಿಲ್ಲೆಯಲ್ಲಿ ಕಳೆದ ವರ್ಷ ಉತ್ತಮ ಫಸಲು ಬಂದಿತ್ತು. ಈ ಬಾರಿಯೂ ಉತ್ತಮ ಮಳೆಯಾಗಿ ಚೆನ್ನಾಗಿಯೇ ಫಸಲು ಬರಬಹುದು ಎನ್ನುವ ನಿರೀಕ್ಷೆ ರೈತರದ್ದಾಗಿದೆ. ಈಗಾಗಲೇ ಹೆಸರು ಹಾಗೂ ಹತ್ತಿ ಬಿತ್ತನೆ ಮಾಡಲಾಗಿದೆ. ಕೊಪ್ಪಳ ತಾಲ್ಲೂಕಿನಲ್ಲಿ 63,006 ಹೆಕ್ಟೇರ್, ಕುಷ್ಟಗಿ 80,004 ಹೆಕ್ಟೇರ್, ಯಲಬುರ್ಗಾ 56,789 ಹೆಕ್ಟೇರ್, ಕುಕನೂರು 29,427 ಹೆಕ್ಟೇರ್, ಗಂಗಾವತಿ 24,589 ಹೆಕ್ಟೇರ್, ಕಾರಟಗಿ 31,022 ಹೆಕ್ಟೇರ್ ಹಾಗೂ ಕನಕಗಿರಿ ತಾಲ್ಲೂಕಿನಲ್ಲಿ 32489 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.</p>.<p>ನೈರುತ್ಯ ಮುಂಗಾರು ಮಾರುತಗಳು ಮೇ 26ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಕೇರಳಂಗೆ ವಾಡಿಕೆಯಂತೆ ಜೂನ್ 1ರಂದು ಮುಂಗಾರು ಪ್ರವೇಶಿಸುತ್ತದೆ. ಆದರೆ, ಈ ಬಾರಿ ವಾಡಿಕೆಗಿಂತ ನಾಲ್ಕು ದಿನ ಮುನ್ನ ಅಥವಾ ನಾಲ್ಕು ದಿನ ನಂತರ ಮುಂಗಾರು ಪ್ರವೇಶಿಸಬಹುದು ಎಂದು ಐಎಂಡಿ ಅಂದಾಜಿಸಿರುವ ಕಾರಣ ಕೃಷಿ ಚಟುವಟಿಕೆಗೆ ಜಿಲ್ಲೆಯ ರೈತರು ಭೂಮಿ ಹದ ಗೊಳಿಸುತ್ತಿದ್ದಾರೆ.</p>.<p><strong>ರಸಗೊಬ್ಬರ; ಕೊರತೆಯ ಆತಂಕ</strong></p><p>ಮುಂಗಾರು ಹಂಗಾಮು ಆರಂಭವಾಗುತ್ತಿರುವುದರಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಬೇಕಾದ ಅಗತ್ಯವಿದೆ. ಕಳೆದವರ್ಷ ರಸಗೊಬ್ಬರಕ್ಕೆ ಕೊರತೆಯಾಗಿದ್ದರಿಂದ ರೈತರು ಪರದಾಡಿದ್ದರು. ರೈತರೊಬ್ಬರು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದರಿಂದ ರಾಜಕೀಯವಾಗಿಯೂ ಜಟಾಪಟಿ ನಡೆಸಿತ್ತು. ಬಳಿಕ ಪೊಲೀಸರ ಕಣ್ಗಾವಲಿನಲ್ಲಿ ರಸಗೊಬ್ಬರ ವಿತರಣೆ ಮಾಡಲಾಗಿತ್ತು. ಕಳೆದ ಬಾರಿ ಆದ ದುರ್ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳು ಈಗಿನಿಂದಲೇ ಎಚ್ಚರಿಕೆ ವಹಿಸಬೇಕಿದೆ. ಡಿಎಪಿ ಯೂರಿಯಾ ಕೊರತೆಯಾಗುವ ಆತಂಕವಾಗಿದೆ.,</p>.<div><blockquote>ರೈತರಿಗೆ ಅನುಕೂಲವಾಗುವಂತೆ ಸಕಾಲದಲ್ಲಿ ರಸಗೊಬ್ಬರ ಒದಗಿಸಬೇಕು. ಕಳೆದ ಬಾರಿ ರಸಗೊಬ್ಬರಕ್ಕೆ ಆದ ತೊಂದರೆ ಈ ಬಾರಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.</blockquote><span class="attribution">–ಸುಖಮುನಿಯಪ್ಪ ಬಡಿಗೇರ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ (ಚೂನಪ್ಪ ಪೂಜೇರಿ ಬಣ) ಜಿಲ್ಲಾಧ್ಯಕ್ಷ</span></div>.<div><blockquote>ಯೂರಿಯಾ ಡಿಎಪಿ ಮಾರಾಟ ಆರಂಭಿಸಿಲ್ಲ. ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು </blockquote><span class="attribution">–ಜಿ.ಡಿ. ಕೃಷ್ಣಮೂರ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-35-1610351472</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ಬಿರು ಬೇಸಿಗೆಯಲ್ಲಿನ ಬಿಸಿಲಿನ ತಾಪ ಕಡಿಮೆಯಾಗಿ ಜಿಲ್ಲೆಯಲ್ಲಿ ನಿಧಾನವಾಗಿ ಮಳೆಯ ವಾತಾವರಣ ನಿರ್ಮಾಣವಾಗುತ್ತಿದ್ದು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಅನ್ನದಾತರು ಸಜ್ಜಾಗುತ್ತಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 3.17 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿದೆ.</p>.<p>ಗಂಗಾವತಿ, ಕೊಪ್ಪಳ ತಾಲ್ಲೂಕಿನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಭಾಗ, ಕನಕಗಿರಿ ಹಾಗೂ ಕಾರಟಗಿಯಲ್ಲಿ ಭತ್ತ ಬಿತ್ತನೆ ಮಾಡಲಾಗುತ್ತಿದ್ದು, ಭತ್ತದ ಒಟ್ಟು ಬಿತ್ತನೆ ಪ್ರದೇಶವೇ 62 ಸಾವಿರ ಹೆಕ್ಟೇರ್ನಷ್ಟಿದೆ. ತುಂಗಭದ್ರಾ ಜಲಾಶಯದಲ್ಲಿ ಕ್ರೆಸ್ಟ್ಗೇಟ್ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು ಅಂತಿಮ ಹಂತದ ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ಶಿವಮೊಗ್ಗ ಹಾಗೂ ಆ ಕಡೆಯ ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆಯಾದರೆ ಜಲಾಶಯಕ್ಕೆ ಸಮೃದ್ಧವಾಗಿ ನೀರು ಹರಿದು ಬರುತ್ತದೆ. ಈ ನೀರಿನ ಆಧಾರದ ಮೇಲೆಯೇ ಬಹುತೇಕ ಕಡೆ ಭತ್ತ ಬಿತ್ತನೆ ಮಾಡಲಾಗುತ್ತದೆ.</p>.<p>ಜಿಲ್ಲೆಯಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುವ ಪ್ರದೇಶವಿದ್ದು ಈ ಬಾರಿ 1,00,057 ಹೆಕ್ಟೇರ್ ಗುರಿ ನಿಗದಿ ಮಾಡಲಾಗಿದೆ. ಇವುಗಳನ್ನು ಹೊರತುಪಡಿಸಿ ಶಕ್ತಿಮಾನ್ ಜೋಳ (2500 ಹೆಕ್ಟೇರ್), ಸಜ್ಜೆ (64372 ಹೆಕ್ಟೇರ್), ನವಣೆ (5001 ಹೆಕ್ಟೇರ್), ಹುರಳಿ (3586 ಹೆಕ್ಟೇರ್), ಹೆಸರು (15411 ಹೆಕ್ಟೇರ್), ಶೇಂಗಾ (10652 ಹೆಕ್ಟೇರ್), ಸೂರ್ಯಕಾಂತಿ (14146 ಹೆಕ್ಟೇರ್), ಎಳ್ಳು (5577 ಹೆಕ್ಟೇರ್) ಪ್ರದೇಶದಲ್ಲಿ ಬೆಳೆಯುವ ಗುರಿ ನಿಗದಿ ಮಾಡಲಾಗಿದೆ. ಲ್ಲಲ್ಲಿ ಹೆಸರು, ಅಲಸಂದಿ, ಅವರೆ, ಮಡಿಕೆ, ಎಳ್ಳು, ಗುರೆಳ್ಳು, ಔಡಲ, ಹತ್ತಿ, ಕಬ್ಬು ಬೆಳೆಯಲಾಗುತ್ತದೆ.</p>.<p>ಜಿಲ್ಲೆಯಲ್ಲಿ ಕಳೆದ ವರ್ಷ ಉತ್ತಮ ಫಸಲು ಬಂದಿತ್ತು. ಈ ಬಾರಿಯೂ ಉತ್ತಮ ಮಳೆಯಾಗಿ ಚೆನ್ನಾಗಿಯೇ ಫಸಲು ಬರಬಹುದು ಎನ್ನುವ ನಿರೀಕ್ಷೆ ರೈತರದ್ದಾಗಿದೆ. ಈಗಾಗಲೇ ಹೆಸರು ಹಾಗೂ ಹತ್ತಿ ಬಿತ್ತನೆ ಮಾಡಲಾಗಿದೆ. ಕೊಪ್ಪಳ ತಾಲ್ಲೂಕಿನಲ್ಲಿ 63,006 ಹೆಕ್ಟೇರ್, ಕುಷ್ಟಗಿ 80,004 ಹೆಕ್ಟೇರ್, ಯಲಬುರ್ಗಾ 56,789 ಹೆಕ್ಟೇರ್, ಕುಕನೂರು 29,427 ಹೆಕ್ಟೇರ್, ಗಂಗಾವತಿ 24,589 ಹೆಕ್ಟೇರ್, ಕಾರಟಗಿ 31,022 ಹೆಕ್ಟೇರ್ ಹಾಗೂ ಕನಕಗಿರಿ ತಾಲ್ಲೂಕಿನಲ್ಲಿ 32489 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.</p>.<p>ನೈರುತ್ಯ ಮುಂಗಾರು ಮಾರುತಗಳು ಮೇ 26ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಕೇರಳಂಗೆ ವಾಡಿಕೆಯಂತೆ ಜೂನ್ 1ರಂದು ಮುಂಗಾರು ಪ್ರವೇಶಿಸುತ್ತದೆ. ಆದರೆ, ಈ ಬಾರಿ ವಾಡಿಕೆಗಿಂತ ನಾಲ್ಕು ದಿನ ಮುನ್ನ ಅಥವಾ ನಾಲ್ಕು ದಿನ ನಂತರ ಮುಂಗಾರು ಪ್ರವೇಶಿಸಬಹುದು ಎಂದು ಐಎಂಡಿ ಅಂದಾಜಿಸಿರುವ ಕಾರಣ ಕೃಷಿ ಚಟುವಟಿಕೆಗೆ ಜಿಲ್ಲೆಯ ರೈತರು ಭೂಮಿ ಹದ ಗೊಳಿಸುತ್ತಿದ್ದಾರೆ.</p>.<p><strong>ರಸಗೊಬ್ಬರ; ಕೊರತೆಯ ಆತಂಕ</strong></p><p>ಮುಂಗಾರು ಹಂಗಾಮು ಆರಂಭವಾಗುತ್ತಿರುವುದರಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಬೇಕಾದ ಅಗತ್ಯವಿದೆ. ಕಳೆದವರ್ಷ ರಸಗೊಬ್ಬರಕ್ಕೆ ಕೊರತೆಯಾಗಿದ್ದರಿಂದ ರೈತರು ಪರದಾಡಿದ್ದರು. ರೈತರೊಬ್ಬರು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದರಿಂದ ರಾಜಕೀಯವಾಗಿಯೂ ಜಟಾಪಟಿ ನಡೆಸಿತ್ತು. ಬಳಿಕ ಪೊಲೀಸರ ಕಣ್ಗಾವಲಿನಲ್ಲಿ ರಸಗೊಬ್ಬರ ವಿತರಣೆ ಮಾಡಲಾಗಿತ್ತು. ಕಳೆದ ಬಾರಿ ಆದ ದುರ್ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳು ಈಗಿನಿಂದಲೇ ಎಚ್ಚರಿಕೆ ವಹಿಸಬೇಕಿದೆ. ಡಿಎಪಿ ಯೂರಿಯಾ ಕೊರತೆಯಾಗುವ ಆತಂಕವಾಗಿದೆ.,</p>.<div><blockquote>ರೈತರಿಗೆ ಅನುಕೂಲವಾಗುವಂತೆ ಸಕಾಲದಲ್ಲಿ ರಸಗೊಬ್ಬರ ಒದಗಿಸಬೇಕು. ಕಳೆದ ಬಾರಿ ರಸಗೊಬ್ಬರಕ್ಕೆ ಆದ ತೊಂದರೆ ಈ ಬಾರಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.</blockquote><span class="attribution">–ಸುಖಮುನಿಯಪ್ಪ ಬಡಿಗೇರ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ (ಚೂನಪ್ಪ ಪೂಜೇರಿ ಬಣ) ಜಿಲ್ಲಾಧ್ಯಕ್ಷ</span></div>.<div><blockquote>ಯೂರಿಯಾ ಡಿಎಪಿ ಮಾರಾಟ ಆರಂಭಿಸಿಲ್ಲ. ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು </blockquote><span class="attribution">–ಜಿ.ಡಿ. ಕೃಷ್ಣಮೂರ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-35-1610351472</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>