ಗಾಯಗೊಂಡವರನ್ನು ಎಚ್.ಆರ್.ಜಿ ನಗರದ ಬಸವರಾಜ ಮತ್ತು ನಿಂಗಜ್ಜ ಎಂದು ಗುರುತಿಸಲಾಗಿದೆ. ಗಂಗಾವತಿಯಿಂದ ಎಚ್.ಆರ್.ಜಿ ನಗರಕ್ಕೆ ಆಟೊ ಹೋಗುತ್ತಿರುವಾಗ ಬೆಣಕಲ್ ಸಮೀಪ ಕಾರು ಡಿಕ್ಕಿಯಾಗಿದೆ. ಗಾಯಾಳುಗಳು ಸದ್ಯಕ್ಕೆ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.