<p><strong>ಮುನಿರಾಬಾದ್:</strong> ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾ ಸ್ಥಳ, ಹುಲಿಗಿಯ ಹುಲಿಗೆಮ್ಮದೇವಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಎರಡನೇ ದಿನವಾದ ಮಂಗಳವಾರ ಕೂಡ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.</p>.<p>ಹೆಚ್ಚಾಗಿ ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮೀಣ ಭಾಗದ ಜನರು, ರೈತರು ಕುಟುಂಬ ಸಮೇತ ದೇವಿಯ ದರ್ಶನಕ್ಕೆ ಬರುವುದು ವಾಡಿಕೆ.</p>.<p>ರೈತರಿಗೆ ಗಂಗೆಯ ನಂಟು: ಗ್ರಾಮೀಣ ಭಾಗದ ಭಕ್ತರು ಹೆಚ್ಚಾಗಿ ರೈತ ಮನೆತನದಿಂದ ಬಂದವರಾಗಿದ್ದು, ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ದಡದಲ್ಲಿ ‘ಗಂಗಾ ಪೂಜೆ’ ನೆರವೇರಿಸುವರು.</p>.<p>ನಂತರ ಜೋಗತಿಯರಿಗೆ ಪಡ್ಲಗಿ (ಜೋಗತಿಯರ ಪುಟ್ಟಿ) ತುಂಬಿಸುವ ಪೂಜೆ ಮಾಡಲಾಗುತ್ತದೆ. ತಾವು ಬೆಳೆದ ದವಸ ಧಾನ್ಯ, ತರಕಾರಿಗಳನ್ನು ಜೋಗತಿಯರ ಬುಟ್ಟಿಯಲ್ಲಿ ತುಂಬುತ್ತಾರೆ. ಆ ಮೂಲಕ ದೇವಿಗೆ ಸಮರ್ಪಣೆ ಮಾಡುತ್ತಾರೆ.</p>.<p>ಗಂಗಾ ಪೂಜೆಯ ಜೊತೆ ಜೋಗತಿಯರ ಪೂಜೆ ನಂತರ ತಾವು ಊಟ ಮಾಡುತ್ತಾರೆ.</p>.<p><strong>ಮುಗ್ಧ ಭಕ್ತರ ಶ್ರದ್ಧಾ ಭಕ್ತಿ:</strong> ಗ್ರಾಮೀಣ ಭಾಗದ ಜನ ಕಲ್ಲು, ಮಣ್ಣು, ನೀರಿನಲ್ಲಿ ದೇವರನ್ನು ಕಾಣುತ್ತಾರೆ. ಅಂತಹ ಶ್ರದ್ಧಾಭಕ್ತಿಯನ್ನು ಹೊತ್ತುಕೊಂಡು ಬರುವ ಭಕ್ತರು, ದೇವಿಯ ದರ್ಶನ ಪಡೆದು ಜಾತ್ರೆಯಲ್ಲಿ ಕುಟುಂಬ ಸಮೇತ ತಿರುಗಾಡಿ, ಗೃಹೋಪಯೋಗಿ ವಸ್ತುಗಳು, ಆಟಿಕೆ ಸಾಮಾನು, ಬಳೆ, ಭಂಡಾರ, ಕುಂಕುಮ, ಸೌಂದರ್ಯವರ್ಧಕಗಳು ಸಾಮಾನುಗಳನ್ನು ಖರೀದಿಸಿ ಸಂಭ್ರಮ ದಿಂದ ತಮ್ಮ ಊರಿಗೆ ಮರಳುತ್ತಾರೆ.</p>.<p><strong>ಭಕ್ತರಿಗೆ ಊಟ:</strong> ಭಕ್ತರಲ್ಲಿ ಕೆಲವರು ಮನೆಯಿಂದ ಬುತ್ತಿ ತಂದರೆ ಇನ್ನು ಕೆಲವರು ದೇವಸ್ಥಾನ ಆವರಣದಲ್ಲಿ ಸ್ವತಃ ಅಡುಗೆ ತಯಾರಿಸಿ ದೇವಿಗೆ ನೈವೇದ್ಯ ಸಮರ್ಪಿಸಿ, ತಾವು ಊಟ ಮಾಡುವುದು ವಾಡಿಕೆ. ಟ್ರ್ಯಾಕ್ಟರ್, ಎತ್ತಿನ ಬಂಡಿ ಹಾಗೂ ಲಘು ವಾಹನಗಳಲ್ಲಿ ಕುಟುಂಬ ಸಮೇತ ಬಂದ ಭಕ್ತರು ಪ್ರಾಧಿಕಾರದ ವತಿಯಿಂದ ವ್ಯವಸ್ಥೆ ಮಾಡಿದ ವಿಶೇಷ ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿ ಮರಳುವುದು ಕಂಡು ಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನಿರಾಬಾದ್:</strong> ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾ ಸ್ಥಳ, ಹುಲಿಗಿಯ ಹುಲಿಗೆಮ್ಮದೇವಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಎರಡನೇ ದಿನವಾದ ಮಂಗಳವಾರ ಕೂಡ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.</p>.<p>ಹೆಚ್ಚಾಗಿ ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮೀಣ ಭಾಗದ ಜನರು, ರೈತರು ಕುಟುಂಬ ಸಮೇತ ದೇವಿಯ ದರ್ಶನಕ್ಕೆ ಬರುವುದು ವಾಡಿಕೆ.</p>.<p>ರೈತರಿಗೆ ಗಂಗೆಯ ನಂಟು: ಗ್ರಾಮೀಣ ಭಾಗದ ಭಕ್ತರು ಹೆಚ್ಚಾಗಿ ರೈತ ಮನೆತನದಿಂದ ಬಂದವರಾಗಿದ್ದು, ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ದಡದಲ್ಲಿ ‘ಗಂಗಾ ಪೂಜೆ’ ನೆರವೇರಿಸುವರು.</p>.<p>ನಂತರ ಜೋಗತಿಯರಿಗೆ ಪಡ್ಲಗಿ (ಜೋಗತಿಯರ ಪುಟ್ಟಿ) ತುಂಬಿಸುವ ಪೂಜೆ ಮಾಡಲಾಗುತ್ತದೆ. ತಾವು ಬೆಳೆದ ದವಸ ಧಾನ್ಯ, ತರಕಾರಿಗಳನ್ನು ಜೋಗತಿಯರ ಬುಟ್ಟಿಯಲ್ಲಿ ತುಂಬುತ್ತಾರೆ. ಆ ಮೂಲಕ ದೇವಿಗೆ ಸಮರ್ಪಣೆ ಮಾಡುತ್ತಾರೆ.</p>.<p>ಗಂಗಾ ಪೂಜೆಯ ಜೊತೆ ಜೋಗತಿಯರ ಪೂಜೆ ನಂತರ ತಾವು ಊಟ ಮಾಡುತ್ತಾರೆ.</p>.<p><strong>ಮುಗ್ಧ ಭಕ್ತರ ಶ್ರದ್ಧಾ ಭಕ್ತಿ:</strong> ಗ್ರಾಮೀಣ ಭಾಗದ ಜನ ಕಲ್ಲು, ಮಣ್ಣು, ನೀರಿನಲ್ಲಿ ದೇವರನ್ನು ಕಾಣುತ್ತಾರೆ. ಅಂತಹ ಶ್ರದ್ಧಾಭಕ್ತಿಯನ್ನು ಹೊತ್ತುಕೊಂಡು ಬರುವ ಭಕ್ತರು, ದೇವಿಯ ದರ್ಶನ ಪಡೆದು ಜಾತ್ರೆಯಲ್ಲಿ ಕುಟುಂಬ ಸಮೇತ ತಿರುಗಾಡಿ, ಗೃಹೋಪಯೋಗಿ ವಸ್ತುಗಳು, ಆಟಿಕೆ ಸಾಮಾನು, ಬಳೆ, ಭಂಡಾರ, ಕುಂಕುಮ, ಸೌಂದರ್ಯವರ್ಧಕಗಳು ಸಾಮಾನುಗಳನ್ನು ಖರೀದಿಸಿ ಸಂಭ್ರಮ ದಿಂದ ತಮ್ಮ ಊರಿಗೆ ಮರಳುತ್ತಾರೆ.</p>.<p><strong>ಭಕ್ತರಿಗೆ ಊಟ:</strong> ಭಕ್ತರಲ್ಲಿ ಕೆಲವರು ಮನೆಯಿಂದ ಬುತ್ತಿ ತಂದರೆ ಇನ್ನು ಕೆಲವರು ದೇವಸ್ಥಾನ ಆವರಣದಲ್ಲಿ ಸ್ವತಃ ಅಡುಗೆ ತಯಾರಿಸಿ ದೇವಿಗೆ ನೈವೇದ್ಯ ಸಮರ್ಪಿಸಿ, ತಾವು ಊಟ ಮಾಡುವುದು ವಾಡಿಕೆ. ಟ್ರ್ಯಾಕ್ಟರ್, ಎತ್ತಿನ ಬಂಡಿ ಹಾಗೂ ಲಘು ವಾಹನಗಳಲ್ಲಿ ಕುಟುಂಬ ಸಮೇತ ಬಂದ ಭಕ್ತರು ಪ್ರಾಧಿಕಾರದ ವತಿಯಿಂದ ವ್ಯವಸ್ಥೆ ಮಾಡಿದ ವಿಶೇಷ ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿ ಮರಳುವುದು ಕಂಡು ಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>