<p>ಕೊಪ್ಪಳ: 'ಲಿಂಗಾರ್ಪಿತವಾದುದು ಪ್ರಸಾದವಾದರೆ, ಲಿಂಗಾರ್ಪಿತ ವಲ್ಲದುದು ಅನ್ನವಾಗುತ್ತದೆ. ಪ್ರಸಾದವನುಂಡವರ ಬಾಳು ಪ್ರಸನ್ನ. ಬದುಕೆಲ್ಲ ಬಂಗಾರ. ಹರುಷದ ಹೊನಲು. ಲಿಂಗಾರ್ಪಿತ ತತ್ವವು ಮಾನವನ ಅಹಂಕಾರ ನಿರಸನಗೊಳಿಸುವ ಮಂತ್ರವೂ ಹೌದು’ ಎಂದು ಬೀದರ್ನ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.</p>.<p>ಬಸವ ಜಯಂತಿ ಅಂಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ಹಮ್ಮಿಕೊಂಡಿರುವ ಪ್ರವಚನದಲ್ಲಿ ಮಾತನಾಡಿದ ಅವರು ‘ವ್ಯಷ್ಟಿ-ಸಮಷ್ಟಿಯ ಸುಂದರ ಬದುಕಿಗೆ ಸತ್ಯಶುದ್ಧ ಕಾಯಕ, ಅಗತ್ಯಕ್ಕೆ ತಕ್ಕಂತೆ ಗಳಿಕೆ, ಗಳಿಸಿದುದೆಲ್ಲ ಲಿಂಗಾರ್ಪಣೆ, ಜಂಗಮ ದಾಸೋಹ, ಉಳಿದದ್ದು ಪ್ರಸಾದ ಇದು ಬಸವ ಬಾಳಿನ ಸೂತ್ರವಾಗಿದೆ’ ಎಂದರು.</p>.<p>‘ಬಸವಣ್ಣನವರ ವಿಶಿಷ್ಟ ಕೊಡುಗೆ ಕಾಯಕ ಸಿದ್ದಾಂತ. ವ್ಯಕ್ತಿಯ ಅಂತರಂಗ-ಬಹಿರಂಗ ಶುದ್ಧಿಗೆ ಇದು ಪೂರಕ, ವ್ಯಕ್ತಿಯ ಉನ್ನತಿ ಜೊತೆಗೆ ಸಮಾಜದ ಅಭಿವೃದ್ಧಿಗೆ ತಾರಕ ಮಂತ್ರ. ನಾನೇ ಮಾಡಿದೆ ನಾನೇ ಗಳಿಸಿದೆ, ನನ್ನಿಂದಲೇ ಎಲ್ಲ ಎಂಬ ಅಹಂ ನಿವಾರಣೆಗೆ ಕಾಯಕದಿಂದ ಬಂದದ್ದು ಲಿಂಗಾರ್ಪಿತವ ಮಾಡಿ ಬಳಸಬೇಕು.</p>.<p>ಕಾಯಕ-ಅರ್ಪಣೆ-ಅನುಭಾವ-ಆನಂದದ ಸರಪಳಿ ಬಹುದೊಡ್ಡ ಗಣಿತ. ಎಲ್ಲೇ ಕಿಂಚಿತ್ ತಪ್ಪಿದರೂ ಫಲಿತಾಂಶ ಏರುಪೇರು. ಅತ್ಯಂತ ಅವಧಾನದ ಪ್ರಕ್ರಿಯೆ ಇದು’ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-35-2063085372</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಪ್ಪಳ: 'ಲಿಂಗಾರ್ಪಿತವಾದುದು ಪ್ರಸಾದವಾದರೆ, ಲಿಂಗಾರ್ಪಿತ ವಲ್ಲದುದು ಅನ್ನವಾಗುತ್ತದೆ. ಪ್ರಸಾದವನುಂಡವರ ಬಾಳು ಪ್ರಸನ್ನ. ಬದುಕೆಲ್ಲ ಬಂಗಾರ. ಹರುಷದ ಹೊನಲು. ಲಿಂಗಾರ್ಪಿತ ತತ್ವವು ಮಾನವನ ಅಹಂಕಾರ ನಿರಸನಗೊಳಿಸುವ ಮಂತ್ರವೂ ಹೌದು’ ಎಂದು ಬೀದರ್ನ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.</p>.<p>ಬಸವ ಜಯಂತಿ ಅಂಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ಹಮ್ಮಿಕೊಂಡಿರುವ ಪ್ರವಚನದಲ್ಲಿ ಮಾತನಾಡಿದ ಅವರು ‘ವ್ಯಷ್ಟಿ-ಸಮಷ್ಟಿಯ ಸುಂದರ ಬದುಕಿಗೆ ಸತ್ಯಶುದ್ಧ ಕಾಯಕ, ಅಗತ್ಯಕ್ಕೆ ತಕ್ಕಂತೆ ಗಳಿಕೆ, ಗಳಿಸಿದುದೆಲ್ಲ ಲಿಂಗಾರ್ಪಣೆ, ಜಂಗಮ ದಾಸೋಹ, ಉಳಿದದ್ದು ಪ್ರಸಾದ ಇದು ಬಸವ ಬಾಳಿನ ಸೂತ್ರವಾಗಿದೆ’ ಎಂದರು.</p>.<p>‘ಬಸವಣ್ಣನವರ ವಿಶಿಷ್ಟ ಕೊಡುಗೆ ಕಾಯಕ ಸಿದ್ದಾಂತ. ವ್ಯಕ್ತಿಯ ಅಂತರಂಗ-ಬಹಿರಂಗ ಶುದ್ಧಿಗೆ ಇದು ಪೂರಕ, ವ್ಯಕ್ತಿಯ ಉನ್ನತಿ ಜೊತೆಗೆ ಸಮಾಜದ ಅಭಿವೃದ್ಧಿಗೆ ತಾರಕ ಮಂತ್ರ. ನಾನೇ ಮಾಡಿದೆ ನಾನೇ ಗಳಿಸಿದೆ, ನನ್ನಿಂದಲೇ ಎಲ್ಲ ಎಂಬ ಅಹಂ ನಿವಾರಣೆಗೆ ಕಾಯಕದಿಂದ ಬಂದದ್ದು ಲಿಂಗಾರ್ಪಿತವ ಮಾಡಿ ಬಳಸಬೇಕು.</p>.<p>ಕಾಯಕ-ಅರ್ಪಣೆ-ಅನುಭಾವ-ಆನಂದದ ಸರಪಳಿ ಬಹುದೊಡ್ಡ ಗಣಿತ. ಎಲ್ಲೇ ಕಿಂಚಿತ್ ತಪ್ಪಿದರೂ ಫಲಿತಾಂಶ ಏರುಪೇರು. ಅತ್ಯಂತ ಅವಧಾನದ ಪ್ರಕ್ರಿಯೆ ಇದು’ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-35-2063085372</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>