ಯಲಬುರ್ಗಾ: ತಾಲ್ಲೂಕಿನ ಗಡಿಭಾಗದ ಸಂಕನೂರ ಗ್ರಾಮದ ಬಸ್ ನಿಲ್ದಾಣ ಸಂಪೂರ್ಣ ಹಾಳಾಗಿದೆ. ಕೊಪ್ಪಳ ಜಿಲ್ಲೆಯಾಗುವ ಪೂರ್ವದಲ್ಲಿಯೇ ನಿರ್ಮಾಣಗೊಂಡ ಈ ಕಿರು ಬಸ್ನಿಲ್ದಾಣ ಈಗ ಕುಸಿದು ಬೀಳುವತ್ತ ಸಾಗಿದೆ.
ಯಲಬುರ್ಗ ಕ್ಷೇತ್ರದ ಈ ಹಿಂದಿನ ಶಾಸಕರಾದ ಈಶಣ್ಣ ಗುಳಗಣ್ಣನವರ, ಹಾಲಪ್ಪ ಆಚಾರ, ಈಗಿನ ಶಾಸಕ ಬಸವರಾಜ ರಾಯರಡ್ಡಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಬಸ್ ನಿಲ್ದಾಣ ದುರಸ್ತಿ ಸಂಬಂಧ ಮನವಿ ಸಲ್ಲಿಸುತ್ತಲೇ ಇದ್ದರೂ ಯಾರೊಬ್ಬರು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.
ಬಸ್ ನಿಲ್ದಾಣಕ್ಕೆ ಬಂದು ಕೂಡಲು ಸರಿಯಾದ ಸ್ಥಳಾವಕಾಶವಿಲ್ಲ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ನಿಲ್ದಾಣದೊಳಗೆ ಮಣ್ಣು ಮತ್ತು ಸಿಮೆಂಟ್ ಹಾಕಿ ಅರ್ಧದಷ್ಟು ಮುಚ್ಚಿದ್ದಾರೆ. ಗ್ರಾಮ ಪಂಚಾಯಿತಿಯು ಇತ್ತ ಗಮನ ಹರಿಸಿಲ್ಲ. ಕೊಪ್ಪಳ ಜಿಲ್ಲೆಯಾಗಿ 25 ವರ್ಷ ಕಳೆದಿವೆ. ಆದರೆ ಬಸ್ ನಿಲ್ದಾಣದಲ್ಲಿ ರಾಯಚೂರು ಜಿಲ್ಲೆ ಎಂದೇ ಇದೆ. ಯಾರೊಬ್ಬರು ಗಡಿ ಗ್ರಾಮಗಳ ಕಾಳಜಿ ತೋರುತ್ತಿಲ್ಲ ಎಂದು ಗ್ರಾಮದ ನೂರಭಾಷ, ಕಳಕಪ್ಪ ಸಿರಗುಂಪಿ, ಗೇನಪ್ಪ ದೊಡ್ಡಮನಿ ಸೇರಿ ಅನೇಕರು ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.