<p><strong>ಕೊಪ್ಪಳ:</strong> ವಿದ್ಯಾರ್ಥಿಗಳು ತಮ್ಮ ಸುಂದರ ಭವಿಷ್ಯ ರೂಪಿಸಿಕೊಳ್ಳಲು ಪ್ರಮುಖ ವೇದಿಕೆಯಾದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ–1ರಲ್ಲಿ ಜಿಲ್ಲೆಯು ಒಂದೇ ವರ್ಷದಲ್ಲಿ ಐದು ಸ್ಥಾನಗಳಲ್ಲಿ ಜಿಗಿತ ಕಂಡಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದುವ ಜೊತೆಗೆ ಅಂಕ ಗಳಿಕೆಯಲ್ಲಿಯೂ ಮುಂಚೂಣಿಯಲ್ಲಿ ಸಾಧನೆ ಮಾಡಿರುವುದು ವಿಶೇಷ.</p>.<p>2024–25ರ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆ ಶೇ 57.32ರಷ್ಟು ಫಲಿತಾಂಶ ಪಡೆದು ರಾಜ್ಯಮಟ್ಟದಲ್ಲಿ 30ನೇ ಸ್ಥಾನ ಪಡೆದುಕೊಂಡಿತ್ತು. ಈ ವರ್ಷ ಶೇ 93ರಷ್ಟು ಫಲಿತಾಂಶ ಗಳಿಸಿ ರಾಜ್ಯದಲ್ಲಿ 25ನೇ ಸ್ಥಾನ ಸಂಪಾದಿಸಿದೆ. ಒಂದೇ ವರ್ಷದಲ್ಲಿ ಶೇಕಡವಾರು ಫಲಿತಾಂಶದಲ್ಲಿ ಶೇ 35.68ರಷ್ಟು ಹೆಚ್ಚಳವಾಗಿದ್ದು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅಧಿಕಾರಿಗಳ ಶ್ರಮಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮೂರು ವರ್ಷಗಳ ಹಿಂದೆ ಜಿಲ್ಲೆಯು ಶೇ 90.27ರಷ್ಟು ಫಲಿತಾಂಶ ಪಡೆದುಕೊಂಡಿತ್ತು. ಅದಾದ ಬಳಿಕ ಈಗ ಮತ್ತೊಮ್ಮೆ ಶೇ 90ರ ಗಡಿ ದಾಟಿದೆ.</p>.<p>ಪರೀಕ್ಷೆಗೆ ಹಾಜರಾದ ಒಟ್ಟು 21,433 ವಿದ್ಯಾರ್ಥಿಗಳಲ್ಲಿ 19,802 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 96 ಪ್ರೌಢಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದುಕೊಂಡಿದ್ದು ವಿಶೇಷ. ತಾಲ್ಲೂಕುವಾರು ವಿಶ್ಲೇಷಣೆಯಲ್ಲಿ ಯಲಬುರ್ಗಾ ಶೈಕ್ಷಣಿಕ ತಾಲ್ಲೂಕು (ಶೇ 95.14), ಗಂಗಾವತಿ ಶೈಕ್ಷಣಿಕ ತಾಲ್ಲೂಕು (ಶೇ 92.88), ಕುಷ್ಟಗಿ (ಶೇ 92.45) ಮತ್ತು ಕೊಪ್ಪಳ (ಶೇ 89.53) ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿವೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮೂರನೇ ಸ್ಥಾನ ಗಳಿಸಿದ್ದು ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳು ಮೊದಲ ಎರಡು ಸ್ಥಾನಗಳಲ್ಲಿವೆ.</p>.<p>ಕಾರಣವೇನು: ಜಿಲ್ಲೆಯಲ್ಲಿ ಉತ್ತೀರ್ಣ ಪ್ರಮಾಣ ಹೆಚ್ಚಿಸಲು ಮಿಷನ್ ಶೇ 40 ಯೋಜನೆ ಅನುಷ್ಠಾನ ಮಾಡಲಾಗಿತ್ತು. ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ನೇತೃತ್ವದಲ್ಲಿ ಸ್ಫೂರ್ತಿ ನಡೆ, ದಿನಕ್ಕೊಂದು ಪ್ರಶ್ನೆ–ವಾರಕ್ಕೊಂದು ಪರೀಕ್ಷೆ, ಎಸ್ಎಸ್ಎಲ್ಸಿಯಿಂದ ನಡೆಸಲಾದ ಪೂರ್ವ ಸಿದ್ಧತಾ ಪರೀಕ್ಷೆಗಳ ಸಮರ್ಪಕ ಅನುಷ್ಠಾನ, ಆರು ಮಾದರಿ ಪ್ರಶ್ನೆ ಪತ್ರಿಕೆಗಳ ಅಭ್ಯಾಸ, ಸಂಪನ್ಮೂಲ ಸದ್ಬಳಕೆ, ನೀಲನಕ್ಷೆ ಆಧಾರಿತ ವಿಷಯವಾರು ಪ್ಯಾಕೇಜ್ ತಯಾರಿಕೆ, ಜಿಲ್ಲಾ ಹಂತದ ಅಧಿಕಾರಿಗಳಿಂದ ದತ್ತು ಸ್ವೀಕಾರ ಹಾಗೂ ಮಾರ್ಗದರ್ಶನ, ಶಾಲಾ ಹಂತದಲ್ಲಿ ಗುಂಪು ಅಧ್ಯಯನ ಹಾಗೂ ವಿಶೇಷ ತರಗತಿಗಳನ್ನು ನಡೆಸಿದ್ದು ಜಿಲ್ಲೆಯ ಫಲಿತಾಂಶಕ್ಕೆ ಕಾರಣ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶ್ಲೇಷಿಸುತ್ತಾರೆ. ಈ ಎಲ್ಲಾ ಪ್ರಯೋಗಗಳು ಫಲ ನೀಡಿವೆ.</p>.<p><strong>ಜಿಲ್ಲಾಧಿಕಾರಿ ದತ್ತು ಪಡೆದ ಶಾಲೆಗೆ ಶೇ 80ರಷ್ಟು ಫಲಿತಾಂಶ</strong></p><p>ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಕೊಪ್ಪಳದ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ದತ್ತು ಪಡೆದಿದ್ದು ವಿದ್ಯಾರ್ಥಿಗಳ ಓದಿನ ಮೇಲ್ವಿಚಾರಣೆ ಮಾಡಿದ್ದರು. ಈ ಶಾಲೆಯು ಹಿಂದಿನ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದಿರಲಿಲ್ಲ. ಈ ಬಾರಿ ಶೇ 80ರಷ್ಟು ಫಲಿತಾಂಶ ಗಳಿಸಿ ಗಮನ ಸೆಳೆದಿದೆ. ಪರೀಕ್ಷೆ ಬರೆದ 94 ವಿದ್ಯಾರ್ಥಿಗಳಲ್ಲಿ 76 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.</p><p>ಈ ಕುರಿತು ಪ್ರತಿಕ್ರಿಯಿಸಿದ ಸುರೇಶ ಇಟ್ನಾಳ ‘ಜಿಲ್ಲೆಯ ಫಲಿತಾಂಶ ಸುಧಾರಣೆಯಾಗಿದ್ದು ಖುಷಿ ನೀಡಿದೆ. ಮುಂದೆ ಇನ್ನಷ್ಟು ಸುಧಾರಣೆಗೆ ಕ್ರಮ ವಹಿಸಲಾಗುವುದು’ ಎಂದರು. </p><p>‘ನಾನು ದತ್ತು ಪಡೆದ ಶಾಲೆಯಲ್ಲಿ ವಿದ್ಯಾರ್ಥಿಗಳ ಹಿನ್ನೆಲೆ ಭಿನ್ನವಾಗಿತ್ತು. ಬೇರೆ ಕಡೆಯಿಂದ ಬರುವವರು, ಶಾಲೆಯನ್ನು ತಪ್ಪಿಸುವವರು ಹೀಗೆ ಅನೇಕ ರೀತಿಯಲ್ಲಿ ಇದ್ದರು. ಈ ಅಡೆತಡೆಗಳ ನಡುವೆಯೂ ಉತ್ತಮ ಫಲಿತಾಂಶ ಆ ಶಾಲೆಗೆ ಬಂದಿದೆ. ಹಿಂದುಳಿದ ವರ್ಗಗಳ ಹಾಸ್ಟೆಲ್ಗಳು ಕೇವಲ ಉತ್ತೀರ್ಣಕ್ಕೆ ಸೀಮಿತವಾಗಿಲ್ಲ; ಉತ್ತಮ ಅಂಕಗಳನ್ನು ಪಡೆದುಕೊಂಡಿವೆ’ ಎಂದು ಸಂತಸ ವ್ಯಕ್ತಪಡಿಸಿದರು.</p>.<div><blockquote>ಮೇಲಧಿಕಾರಿಗಳ ಮಾರ್ಗದರ್ಶನ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಶ್ರಮದಿಂದಾಗಿ ಜಿಲ್ಲೆ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ. ಎಲ್ಲರಿಗೂ ಇದರ ಶ್ರೇಯ ಸಲ್ಲಬೇಕು. </blockquote><span class="attribution">–ಸೋಮಶೇಖರಗೌಡ ಪಾಟೀಲ ಡಿಡಿಪಿಐ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ವಿದ್ಯಾರ್ಥಿಗಳು ತಮ್ಮ ಸುಂದರ ಭವಿಷ್ಯ ರೂಪಿಸಿಕೊಳ್ಳಲು ಪ್ರಮುಖ ವೇದಿಕೆಯಾದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ–1ರಲ್ಲಿ ಜಿಲ್ಲೆಯು ಒಂದೇ ವರ್ಷದಲ್ಲಿ ಐದು ಸ್ಥಾನಗಳಲ್ಲಿ ಜಿಗಿತ ಕಂಡಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದುವ ಜೊತೆಗೆ ಅಂಕ ಗಳಿಕೆಯಲ್ಲಿಯೂ ಮುಂಚೂಣಿಯಲ್ಲಿ ಸಾಧನೆ ಮಾಡಿರುವುದು ವಿಶೇಷ.</p>.<p>2024–25ರ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆ ಶೇ 57.32ರಷ್ಟು ಫಲಿತಾಂಶ ಪಡೆದು ರಾಜ್ಯಮಟ್ಟದಲ್ಲಿ 30ನೇ ಸ್ಥಾನ ಪಡೆದುಕೊಂಡಿತ್ತು. ಈ ವರ್ಷ ಶೇ 93ರಷ್ಟು ಫಲಿತಾಂಶ ಗಳಿಸಿ ರಾಜ್ಯದಲ್ಲಿ 25ನೇ ಸ್ಥಾನ ಸಂಪಾದಿಸಿದೆ. ಒಂದೇ ವರ್ಷದಲ್ಲಿ ಶೇಕಡವಾರು ಫಲಿತಾಂಶದಲ್ಲಿ ಶೇ 35.68ರಷ್ಟು ಹೆಚ್ಚಳವಾಗಿದ್ದು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅಧಿಕಾರಿಗಳ ಶ್ರಮಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮೂರು ವರ್ಷಗಳ ಹಿಂದೆ ಜಿಲ್ಲೆಯು ಶೇ 90.27ರಷ್ಟು ಫಲಿತಾಂಶ ಪಡೆದುಕೊಂಡಿತ್ತು. ಅದಾದ ಬಳಿಕ ಈಗ ಮತ್ತೊಮ್ಮೆ ಶೇ 90ರ ಗಡಿ ದಾಟಿದೆ.</p>.<p>ಪರೀಕ್ಷೆಗೆ ಹಾಜರಾದ ಒಟ್ಟು 21,433 ವಿದ್ಯಾರ್ಥಿಗಳಲ್ಲಿ 19,802 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 96 ಪ್ರೌಢಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದುಕೊಂಡಿದ್ದು ವಿಶೇಷ. ತಾಲ್ಲೂಕುವಾರು ವಿಶ್ಲೇಷಣೆಯಲ್ಲಿ ಯಲಬುರ್ಗಾ ಶೈಕ್ಷಣಿಕ ತಾಲ್ಲೂಕು (ಶೇ 95.14), ಗಂಗಾವತಿ ಶೈಕ್ಷಣಿಕ ತಾಲ್ಲೂಕು (ಶೇ 92.88), ಕುಷ್ಟಗಿ (ಶೇ 92.45) ಮತ್ತು ಕೊಪ್ಪಳ (ಶೇ 89.53) ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿವೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮೂರನೇ ಸ್ಥಾನ ಗಳಿಸಿದ್ದು ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳು ಮೊದಲ ಎರಡು ಸ್ಥಾನಗಳಲ್ಲಿವೆ.</p>.<p>ಕಾರಣವೇನು: ಜಿಲ್ಲೆಯಲ್ಲಿ ಉತ್ತೀರ್ಣ ಪ್ರಮಾಣ ಹೆಚ್ಚಿಸಲು ಮಿಷನ್ ಶೇ 40 ಯೋಜನೆ ಅನುಷ್ಠಾನ ಮಾಡಲಾಗಿತ್ತು. ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ನೇತೃತ್ವದಲ್ಲಿ ಸ್ಫೂರ್ತಿ ನಡೆ, ದಿನಕ್ಕೊಂದು ಪ್ರಶ್ನೆ–ವಾರಕ್ಕೊಂದು ಪರೀಕ್ಷೆ, ಎಸ್ಎಸ್ಎಲ್ಸಿಯಿಂದ ನಡೆಸಲಾದ ಪೂರ್ವ ಸಿದ್ಧತಾ ಪರೀಕ್ಷೆಗಳ ಸಮರ್ಪಕ ಅನುಷ್ಠಾನ, ಆರು ಮಾದರಿ ಪ್ರಶ್ನೆ ಪತ್ರಿಕೆಗಳ ಅಭ್ಯಾಸ, ಸಂಪನ್ಮೂಲ ಸದ್ಬಳಕೆ, ನೀಲನಕ್ಷೆ ಆಧಾರಿತ ವಿಷಯವಾರು ಪ್ಯಾಕೇಜ್ ತಯಾರಿಕೆ, ಜಿಲ್ಲಾ ಹಂತದ ಅಧಿಕಾರಿಗಳಿಂದ ದತ್ತು ಸ್ವೀಕಾರ ಹಾಗೂ ಮಾರ್ಗದರ್ಶನ, ಶಾಲಾ ಹಂತದಲ್ಲಿ ಗುಂಪು ಅಧ್ಯಯನ ಹಾಗೂ ವಿಶೇಷ ತರಗತಿಗಳನ್ನು ನಡೆಸಿದ್ದು ಜಿಲ್ಲೆಯ ಫಲಿತಾಂಶಕ್ಕೆ ಕಾರಣ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶ್ಲೇಷಿಸುತ್ತಾರೆ. ಈ ಎಲ್ಲಾ ಪ್ರಯೋಗಗಳು ಫಲ ನೀಡಿವೆ.</p>.<p><strong>ಜಿಲ್ಲಾಧಿಕಾರಿ ದತ್ತು ಪಡೆದ ಶಾಲೆಗೆ ಶೇ 80ರಷ್ಟು ಫಲಿತಾಂಶ</strong></p><p>ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಕೊಪ್ಪಳದ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ದತ್ತು ಪಡೆದಿದ್ದು ವಿದ್ಯಾರ್ಥಿಗಳ ಓದಿನ ಮೇಲ್ವಿಚಾರಣೆ ಮಾಡಿದ್ದರು. ಈ ಶಾಲೆಯು ಹಿಂದಿನ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದಿರಲಿಲ್ಲ. ಈ ಬಾರಿ ಶೇ 80ರಷ್ಟು ಫಲಿತಾಂಶ ಗಳಿಸಿ ಗಮನ ಸೆಳೆದಿದೆ. ಪರೀಕ್ಷೆ ಬರೆದ 94 ವಿದ್ಯಾರ್ಥಿಗಳಲ್ಲಿ 76 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.</p><p>ಈ ಕುರಿತು ಪ್ರತಿಕ್ರಿಯಿಸಿದ ಸುರೇಶ ಇಟ್ನಾಳ ‘ಜಿಲ್ಲೆಯ ಫಲಿತಾಂಶ ಸುಧಾರಣೆಯಾಗಿದ್ದು ಖುಷಿ ನೀಡಿದೆ. ಮುಂದೆ ಇನ್ನಷ್ಟು ಸುಧಾರಣೆಗೆ ಕ್ರಮ ವಹಿಸಲಾಗುವುದು’ ಎಂದರು. </p><p>‘ನಾನು ದತ್ತು ಪಡೆದ ಶಾಲೆಯಲ್ಲಿ ವಿದ್ಯಾರ್ಥಿಗಳ ಹಿನ್ನೆಲೆ ಭಿನ್ನವಾಗಿತ್ತು. ಬೇರೆ ಕಡೆಯಿಂದ ಬರುವವರು, ಶಾಲೆಯನ್ನು ತಪ್ಪಿಸುವವರು ಹೀಗೆ ಅನೇಕ ರೀತಿಯಲ್ಲಿ ಇದ್ದರು. ಈ ಅಡೆತಡೆಗಳ ನಡುವೆಯೂ ಉತ್ತಮ ಫಲಿತಾಂಶ ಆ ಶಾಲೆಗೆ ಬಂದಿದೆ. ಹಿಂದುಳಿದ ವರ್ಗಗಳ ಹಾಸ್ಟೆಲ್ಗಳು ಕೇವಲ ಉತ್ತೀರ್ಣಕ್ಕೆ ಸೀಮಿತವಾಗಿಲ್ಲ; ಉತ್ತಮ ಅಂಕಗಳನ್ನು ಪಡೆದುಕೊಂಡಿವೆ’ ಎಂದು ಸಂತಸ ವ್ಯಕ್ತಪಡಿಸಿದರು.</p>.<div><blockquote>ಮೇಲಧಿಕಾರಿಗಳ ಮಾರ್ಗದರ್ಶನ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಶ್ರಮದಿಂದಾಗಿ ಜಿಲ್ಲೆ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ. ಎಲ್ಲರಿಗೂ ಇದರ ಶ್ರೇಯ ಸಲ್ಲಬೇಕು. </blockquote><span class="attribution">–ಸೋಮಶೇಖರಗೌಡ ಪಾಟೀಲ ಡಿಡಿಪಿಐ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>