<p><strong>ಅಳವಂಡಿ:</strong> ‘ಜೀವನದಲ್ಲಿ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಿದ್ಯಾರ್ಥಿ ತೌಸೀಫ್ ಗೈಬು ಸಾಬ ಎಂಬ ವಿದ್ಯಾರ್ಥಿಯು, ಎಸ್ಎಸ್ಎಲ್ಸಿಯಲ್ಲಿ ಶೇ 98ರಷ್ಟು ಅಂಕಗಳಿಸಿದ್ದಾರೆ.</p>.<p>ಕೊಪ್ಪಳ ತಾಲ್ಲೂಕಿನ ಗುಡ್ಲಾನೂರು ಗ್ರಾಮದ ನಿವಾಸಿ ತೌಸೀಫ್ ಗೈಬುಸಾಬ ವಾಲೀಕಾರ, ಕಾತರಕಿ ಗುಡ್ಲಾನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.</p>.<p>ಗೈಬುಸಾಬ-ರಮೀಜಾ ಬೇಗಂ ವಾಲೀಕಾರ ದಂಪತಿಯ ದ್ವಿತೀಯ ಪುತ್ರ. ದಂಪತಿಗೆ 3 ಮಕ್ಕಳಿದ್ದು, ಮನೆಯಲ್ಲಿ ತುಂಬಾ ಬಡತನ. ಬಹುತೇಕ ಮುಸ್ಲಿಂ ಪಾಲಕರು ಬಡತನವಿದ್ದರೆ, ಶಿಕ್ಷಣ ನೀಡುವುದನ್ನು ಬಿಟ್ಟು, ದುಡಿಯಲು ಕೆಲಸಕ್ಕೆ ಸೇರಿಸುತ್ತಾರೆ. ಆದರೆ ತೌಸೀಫ್ ಪಾಲಕರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಗೈಬುಸಾಬ ಮನೆಬಿಟ್ಟು ದೂರದ ಹುಬ್ಬಳ್ಳಿ ನಗರದ ಹೊಟೇಲ್ನಲ್ಲಿ ಕೆಲಸ ಮಾಡಿದರೆ, ಪತ್ನಿ ರಮೀಜಾ ಊರಿನ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಇಬ್ಬರು ದುಡಿದ ಹಣದಿಂದ ಒಂದು ಕಡೆ ಮನೆ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳುತ್ತಾರೆ. ಆದರೆ ಹಣ ಸಾಕಾಗುವುದಿಲ್ಲ. ಹೀಗಾಗಿ ತೌಸೀಫ್, ಶಾಲಾ ರಜಾ ಮತ್ತು ಬಿಡುವಿನ ಸಮಯಲ್ಲಿ ಗಾರೆಕೆಲಸ, ಪೇಂಟಿಂಗ್ ಕೆಲಸ ಮಾಡುತ್ತಾರೆ.</p>.<p>ತೌಸೀಫ್, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಲ್ಲಿ ಪಾಲ್ಗೊಳ್ಳುತ್ತಿದ್ದ. ಜತೆಗೆ ಶಿಕ್ಷಕರು ಹೇಳಿದ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದ. ವಿಶೇಷ ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.</p>.<p>ಪರೀಕ್ಷೆಗೆ 2 ತಿಂಗಳಿದ್ದಾಗ ಬೆಳಿಗ್ಗೆ 2 ಗಂಟೆಗೆ ಎದ್ದು ಸಿದ್ಧತೆ ನಡೆಸುತ್ತಿದ್ದ. ಕನ್ನಡ-125, ಇಂಗ್ಲಿಷ್-98, ಹಿಂದಿ-95, ಗಣಿತ-100, ವಿಜ್ಞಾನ-97, ಸಮಾಜ ವಿಜ್ಞಾನ-98 ಅಂಕ ಗಳಿಸಿದ್ದಾನೆ.</p>.<p><strong>ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೇಕಿದೆ ನೆರವು:</strong> ತೌಸೀಫ್ ಪ್ರತಿಭಾವಂತ ವಿದ್ಯಾರ್ಥಿ. ವೈದ್ಯಕೀಯ ಶಿಕ್ಷಣ ಪಡೆದು, ಬಡವರಿಗೆ ಉಚಿತ ಸೇವೆ ಓದಗಿಸುವ ಆಸೆಯಿದೆ. ಸದ್ಯ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕಗಳಿಸಿದ್ದು, ಮುಂದಿನ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ನೆರವು ದೊರೆತರೆ ವಿದ್ಯಾರ್ಥಿ ಉನ್ನತ ಸಾಧನೆ ಮಾಡುತ್ತಾನೆ ಎಂದು ಗ್ರಾಮಸ್ಥರು ರವಿಕುಮಾರ ಹೇಳಿದರು.</p>.<div><blockquote>ಶಿಕ್ಷಕರು ಹೇಳಿದ ಪಾಠ ಕೇಳಿ, ಓದಿದ ವಿಷಯವನ್ನು ಮನನ ಮಾಡಿಕೊಳ್ಳುತ್ತಿದ್ದೆ. ಗೊಂದಲಗಳಿದ್ದರೆ ಶಿಕ್ಷಕರಿಂದ ಪರಿಹರಿಸಿಕೊಳ್ಳುತ್ತಿದ್ದೆ. ವೈದ್ಯನಾಗುವ ಆಸೆಯಿದೆ </blockquote><span class="attribution">ತೌಸೀಫ್ ಗೈಬುಸಾಬ, ವಿದ್ಯಾರ್ಥಿ</span></div>.<div><blockquote>ತೌಸೀಫ್ ಪ್ರತಿಭಾವಂತ ವಿದ್ಯಾರ್ಥಿ. ವಿಶೇಷ ತರಗತಿಗಳನ್ನು ತಪ್ಪಿಸುತ್ತಿದ್ದಿಲ್ಲ. ಬಡತನದಲ್ಲೂ ಉತ್ತಮ ಫಲಿತಾಂಶ ಮಾಡಿಕೊಂಡಿದ್ದು, ಉನ್ನತ ಶಿಕ್ಷಣಕ್ಕೆ ದಾನಿಗಳ ನೆರವಿನ ಅಗತ್ಯವಿದೆ</blockquote><span class="attribution"> ಶರಣಪ್ಪ ಜಿ. ಮೂಲಿಮನಿ, ಮುಖ್ಯಶಿಕ್ಷಕ ಸರ್ಕಾರಿ ಪ್ರೌಢಶಾಲೆ ಕಾತರಕಿ ಗುಡ್ಲಾನೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳವಂಡಿ:</strong> ‘ಜೀವನದಲ್ಲಿ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಿದ್ಯಾರ್ಥಿ ತೌಸೀಫ್ ಗೈಬು ಸಾಬ ಎಂಬ ವಿದ್ಯಾರ್ಥಿಯು, ಎಸ್ಎಸ್ಎಲ್ಸಿಯಲ್ಲಿ ಶೇ 98ರಷ್ಟು ಅಂಕಗಳಿಸಿದ್ದಾರೆ.</p>.<p>ಕೊಪ್ಪಳ ತಾಲ್ಲೂಕಿನ ಗುಡ್ಲಾನೂರು ಗ್ರಾಮದ ನಿವಾಸಿ ತೌಸೀಫ್ ಗೈಬುಸಾಬ ವಾಲೀಕಾರ, ಕಾತರಕಿ ಗುಡ್ಲಾನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.</p>.<p>ಗೈಬುಸಾಬ-ರಮೀಜಾ ಬೇಗಂ ವಾಲೀಕಾರ ದಂಪತಿಯ ದ್ವಿತೀಯ ಪುತ್ರ. ದಂಪತಿಗೆ 3 ಮಕ್ಕಳಿದ್ದು, ಮನೆಯಲ್ಲಿ ತುಂಬಾ ಬಡತನ. ಬಹುತೇಕ ಮುಸ್ಲಿಂ ಪಾಲಕರು ಬಡತನವಿದ್ದರೆ, ಶಿಕ್ಷಣ ನೀಡುವುದನ್ನು ಬಿಟ್ಟು, ದುಡಿಯಲು ಕೆಲಸಕ್ಕೆ ಸೇರಿಸುತ್ತಾರೆ. ಆದರೆ ತೌಸೀಫ್ ಪಾಲಕರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಗೈಬುಸಾಬ ಮನೆಬಿಟ್ಟು ದೂರದ ಹುಬ್ಬಳ್ಳಿ ನಗರದ ಹೊಟೇಲ್ನಲ್ಲಿ ಕೆಲಸ ಮಾಡಿದರೆ, ಪತ್ನಿ ರಮೀಜಾ ಊರಿನ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಇಬ್ಬರು ದುಡಿದ ಹಣದಿಂದ ಒಂದು ಕಡೆ ಮನೆ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳುತ್ತಾರೆ. ಆದರೆ ಹಣ ಸಾಕಾಗುವುದಿಲ್ಲ. ಹೀಗಾಗಿ ತೌಸೀಫ್, ಶಾಲಾ ರಜಾ ಮತ್ತು ಬಿಡುವಿನ ಸಮಯಲ್ಲಿ ಗಾರೆಕೆಲಸ, ಪೇಂಟಿಂಗ್ ಕೆಲಸ ಮಾಡುತ್ತಾರೆ.</p>.<p>ತೌಸೀಫ್, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಲ್ಲಿ ಪಾಲ್ಗೊಳ್ಳುತ್ತಿದ್ದ. ಜತೆಗೆ ಶಿಕ್ಷಕರು ಹೇಳಿದ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದ. ವಿಶೇಷ ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.</p>.<p>ಪರೀಕ್ಷೆಗೆ 2 ತಿಂಗಳಿದ್ದಾಗ ಬೆಳಿಗ್ಗೆ 2 ಗಂಟೆಗೆ ಎದ್ದು ಸಿದ್ಧತೆ ನಡೆಸುತ್ತಿದ್ದ. ಕನ್ನಡ-125, ಇಂಗ್ಲಿಷ್-98, ಹಿಂದಿ-95, ಗಣಿತ-100, ವಿಜ್ಞಾನ-97, ಸಮಾಜ ವಿಜ್ಞಾನ-98 ಅಂಕ ಗಳಿಸಿದ್ದಾನೆ.</p>.<p><strong>ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೇಕಿದೆ ನೆರವು:</strong> ತೌಸೀಫ್ ಪ್ರತಿಭಾವಂತ ವಿದ್ಯಾರ್ಥಿ. ವೈದ್ಯಕೀಯ ಶಿಕ್ಷಣ ಪಡೆದು, ಬಡವರಿಗೆ ಉಚಿತ ಸೇವೆ ಓದಗಿಸುವ ಆಸೆಯಿದೆ. ಸದ್ಯ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕಗಳಿಸಿದ್ದು, ಮುಂದಿನ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ನೆರವು ದೊರೆತರೆ ವಿದ್ಯಾರ್ಥಿ ಉನ್ನತ ಸಾಧನೆ ಮಾಡುತ್ತಾನೆ ಎಂದು ಗ್ರಾಮಸ್ಥರು ರವಿಕುಮಾರ ಹೇಳಿದರು.</p>.<div><blockquote>ಶಿಕ್ಷಕರು ಹೇಳಿದ ಪಾಠ ಕೇಳಿ, ಓದಿದ ವಿಷಯವನ್ನು ಮನನ ಮಾಡಿಕೊಳ್ಳುತ್ತಿದ್ದೆ. ಗೊಂದಲಗಳಿದ್ದರೆ ಶಿಕ್ಷಕರಿಂದ ಪರಿಹರಿಸಿಕೊಳ್ಳುತ್ತಿದ್ದೆ. ವೈದ್ಯನಾಗುವ ಆಸೆಯಿದೆ </blockquote><span class="attribution">ತೌಸೀಫ್ ಗೈಬುಸಾಬ, ವಿದ್ಯಾರ್ಥಿ</span></div>.<div><blockquote>ತೌಸೀಫ್ ಪ್ರತಿಭಾವಂತ ವಿದ್ಯಾರ್ಥಿ. ವಿಶೇಷ ತರಗತಿಗಳನ್ನು ತಪ್ಪಿಸುತ್ತಿದ್ದಿಲ್ಲ. ಬಡತನದಲ್ಲೂ ಉತ್ತಮ ಫಲಿತಾಂಶ ಮಾಡಿಕೊಂಡಿದ್ದು, ಉನ್ನತ ಶಿಕ್ಷಣಕ್ಕೆ ದಾನಿಗಳ ನೆರವಿನ ಅಗತ್ಯವಿದೆ</blockquote><span class="attribution"> ಶರಣಪ್ಪ ಜಿ. ಮೂಲಿಮನಿ, ಮುಖ್ಯಶಿಕ್ಷಕ ಸರ್ಕಾರಿ ಪ್ರೌಢಶಾಲೆ ಕಾತರಕಿ ಗುಡ್ಲಾನೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>