<p>ಕಾರಟಗಿ: ಅಸ್ಪೃಶ್ಯತೆ ಆಚರಣೆ ಅಪರಾಧ. ಕ್ಷೌರಿಕರು, ಮಡಿವಾಳರು ಅಸ್ಪೃಶ್ಯರನ್ನೂ ತಮ್ಮಂತೆಯೇ ಕಾಣಬೇಕು. ಎಲ್ಲರೂ ಸಮಾನತೆಯಿಂದ, ಸಾಮರಸ್ಯದಿಂದ ಶಾಂತಿ, ಸೌಹಾರ್ದತೆಯಿಂದ ಬಾಳಿ ಗ್ರಾಮದಲ್ಲಿ ಶಾಂತಿಯ ವಾತಾವರಣ ಕಾಪಾಡಬೇಕು. ಇದು ಎಲ್ಲರ ಜವಾಬ್ದಾರಿಯೂ ಹೌದು ಎಂದು ಕೊಪ್ಪಳ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.</p>.<p>ತಾಲ್ಲೂಕಿನ ಬೂದಗುಂಪಾ ಗ್ರಾಮದಲ್ಲಿ ಭಾನುವಾರ ನಡೆದ ಶಾಂತಿ ಹಾಗೂ ಸೌಹಾರ್ದ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.</p>.<p>‘ಅಸ್ಪೃಶ್ಯರು ಎಂಬ ಕಾರಣದಿಂದ ಕ್ಷೌರಿಕರು, ಇಸ್ತ್ರಿ ಮಾಡುವವರು ಅವರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ನಾವೆಲ್ಲಾ ಬಂದಿದ್ದೇವೆ. ಮುಂದೆ ನೀವೆಲ್ಲರೂ ಸಹೋದರರಂತೆ ಹೊಂದಾಣಿಕೆಯಿಂದ ಬಾಳಿರಿ’ ಎಂದು ಕಿವಿಮಾತು ಹೇಳಿದರು.</p>.<p>ಗಂಗಾವತಿ ಡಿವೈಎಸ್ಪಿ ಚಾಯಪ್ಪ ನ್ಯಾಮಗೌಡರ್ ಮಾತನಾಡಿ, ‘ಅಸ್ಪೃಶ್ಯತೆ ಆಚರಣೆ ಕಾನೂನು ವಿರೋಧಿ. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಅವಕಾಶವಿದೆ. ಗ್ರಾಮದಲ್ಲಿ ಎಲ್ಲರೂ ಸಾಮರಸ್ಯದಿಂದ ಇರಬೇಕು. ಇಲಾಖೆಗಳೊಂದಿಗೆ ಸಹಕರಿಸಬೇಕು’ ಎಂದರು.</p>.<p>ಗ್ರಾಮದ ನಾಗರಿಕರ ಪರವಾಗಿ ಮಾತನಾಡಿದ ಪರಮೇಶಗೌಡ ಪಾಟೀಲ್, ‘ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಇಲ್ಲ. ಯಾರೋ ಸುಳ್ಳು ಸುದ್ದಿ, ವದಂತಿ ಹಬ್ಬಿಸಿರಬೇಕು. ಕ್ಷೌರಿಕರು, ಮಡಿವಾಳರು ಅನೋನ್ಯವಾಗಿದ್ದಾರೆ. ಅಂತಹ ಪ್ರಸಂಗ ಬಂದರೆ ಸರಿಪಡಿಸಲು ಗ್ರಾಮದ ಪ್ರಮುಖರು ಸಿದ್ದರಿದ್ದೇವೆ’ ಎಂದರು.</p>.<p>ತಹಶೀಲ್ದಾರ್ ಎಂ. ಕುಮಾರಸ್ವಾಮಿ, ಇನ್ಸ್ಪೆಕ್ಟರ್ ಸುಧೀರಕುಮಾರ ಬೆಂಕಿ, ಕಂದಾಯ ಅಧಿಕಾರಿಗಳಾದ ಸಂಗಮ್ಮ ಹಿರೇಮಠ, ಮಂಜುನಾಥ ರಾಠೋಡ, ಪ್ರಮುಖರಾದ ಗುರುಸಿದ್ದಪ್ಪ ಎರಕಲ್, ಚಳ್ಳೂರು ಬಸವರಾಜ್, ಮಲ್ಲನಗೌಡ, ಶರಣೇಗೌಡ, ಜಡೆಪ್ಪ ವಕೀಲ, ಸುರೇಶ ಬೆಳ್ಳಿಕಟ್ಟಿ, ಮರಿಯಪ್ಪ ಸೇರಿದಂತೆ ಹಡಪದ, ಮಡಿವಾಳ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-35-1667677185</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರಟಗಿ: ಅಸ್ಪೃಶ್ಯತೆ ಆಚರಣೆ ಅಪರಾಧ. ಕ್ಷೌರಿಕರು, ಮಡಿವಾಳರು ಅಸ್ಪೃಶ್ಯರನ್ನೂ ತಮ್ಮಂತೆಯೇ ಕಾಣಬೇಕು. ಎಲ್ಲರೂ ಸಮಾನತೆಯಿಂದ, ಸಾಮರಸ್ಯದಿಂದ ಶಾಂತಿ, ಸೌಹಾರ್ದತೆಯಿಂದ ಬಾಳಿ ಗ್ರಾಮದಲ್ಲಿ ಶಾಂತಿಯ ವಾತಾವರಣ ಕಾಪಾಡಬೇಕು. ಇದು ಎಲ್ಲರ ಜವಾಬ್ದಾರಿಯೂ ಹೌದು ಎಂದು ಕೊಪ್ಪಳ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.</p>.<p>ತಾಲ್ಲೂಕಿನ ಬೂದಗುಂಪಾ ಗ್ರಾಮದಲ್ಲಿ ಭಾನುವಾರ ನಡೆದ ಶಾಂತಿ ಹಾಗೂ ಸೌಹಾರ್ದ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.</p>.<p>‘ಅಸ್ಪೃಶ್ಯರು ಎಂಬ ಕಾರಣದಿಂದ ಕ್ಷೌರಿಕರು, ಇಸ್ತ್ರಿ ಮಾಡುವವರು ಅವರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ನಾವೆಲ್ಲಾ ಬಂದಿದ್ದೇವೆ. ಮುಂದೆ ನೀವೆಲ್ಲರೂ ಸಹೋದರರಂತೆ ಹೊಂದಾಣಿಕೆಯಿಂದ ಬಾಳಿರಿ’ ಎಂದು ಕಿವಿಮಾತು ಹೇಳಿದರು.</p>.<p>ಗಂಗಾವತಿ ಡಿವೈಎಸ್ಪಿ ಚಾಯಪ್ಪ ನ್ಯಾಮಗೌಡರ್ ಮಾತನಾಡಿ, ‘ಅಸ್ಪೃಶ್ಯತೆ ಆಚರಣೆ ಕಾನೂನು ವಿರೋಧಿ. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಅವಕಾಶವಿದೆ. ಗ್ರಾಮದಲ್ಲಿ ಎಲ್ಲರೂ ಸಾಮರಸ್ಯದಿಂದ ಇರಬೇಕು. ಇಲಾಖೆಗಳೊಂದಿಗೆ ಸಹಕರಿಸಬೇಕು’ ಎಂದರು.</p>.<p>ಗ್ರಾಮದ ನಾಗರಿಕರ ಪರವಾಗಿ ಮಾತನಾಡಿದ ಪರಮೇಶಗೌಡ ಪಾಟೀಲ್, ‘ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಇಲ್ಲ. ಯಾರೋ ಸುಳ್ಳು ಸುದ್ದಿ, ವದಂತಿ ಹಬ್ಬಿಸಿರಬೇಕು. ಕ್ಷೌರಿಕರು, ಮಡಿವಾಳರು ಅನೋನ್ಯವಾಗಿದ್ದಾರೆ. ಅಂತಹ ಪ್ರಸಂಗ ಬಂದರೆ ಸರಿಪಡಿಸಲು ಗ್ರಾಮದ ಪ್ರಮುಖರು ಸಿದ್ದರಿದ್ದೇವೆ’ ಎಂದರು.</p>.<p>ತಹಶೀಲ್ದಾರ್ ಎಂ. ಕುಮಾರಸ್ವಾಮಿ, ಇನ್ಸ್ಪೆಕ್ಟರ್ ಸುಧೀರಕುಮಾರ ಬೆಂಕಿ, ಕಂದಾಯ ಅಧಿಕಾರಿಗಳಾದ ಸಂಗಮ್ಮ ಹಿರೇಮಠ, ಮಂಜುನಾಥ ರಾಠೋಡ, ಪ್ರಮುಖರಾದ ಗುರುಸಿದ್ದಪ್ಪ ಎರಕಲ್, ಚಳ್ಳೂರು ಬಸವರಾಜ್, ಮಲ್ಲನಗೌಡ, ಶರಣೇಗೌಡ, ಜಡೆಪ್ಪ ವಕೀಲ, ಸುರೇಶ ಬೆಳ್ಳಿಕಟ್ಟಿ, ಮರಿಯಪ್ಪ ಸೇರಿದಂತೆ ಹಡಪದ, ಮಡಿವಾಳ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-35-1667677185</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>