ಎಸ್ಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷ ಅಮರೇಶ ಕಡಗದ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟಗಳನ್ನು ನಡೆಸಲು ಪಕ್ಷವನ್ನು ಕಟ್ಟಿಕೊಳ್ಳಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೆಯು ಸಹ ಪಕ್ಷವು ಹೋರಾಟಗಳನ್ನು ನಡೆಸುತ್ತಿದೆ. ಬಡವರ, ಹಿಂದುಳಿದವರ, ಕಾರ್ಮಿಕರ, ಕೂಲಿಕಾರರ ಪರವಾಗಿ ಪಕ್ಷವು ನಿಂತುಕೊಂಡು ಅವರಿಗೆ ನ್ಯಾಯವನ್ನು ಕೊಡಿಸುವಂತಹ ಕೆಲಸ ಮಾಡುತ್ತಿದೆ ಎಂದರು.