<p><strong>ಕೊಪ್ಪಳ:</strong> ಜಿಲ್ಲಾಕೇಂದ್ರದ ಸಮೀಪದಲ್ಲಿರುವ ಬಲ್ಡೋಟಾ ಕಂಪನಿಗೆ ತನ್ನ ಕೈಗಾರಿಕೆ ವಿಸ್ತರಣೆಗೆ ಅವಕಾಶ ಕೊಡಬೇಕು, ಭೂಮಿ ಕಳೆದುಕೊಂಡ ನಮಗೆ ಅಲ್ಲಿ ಕೆಲಸ ಸಿಗಬೇಕು, ಇಲ್ಲವಾದರೆ ಸರ್ಕಾರಿ ನೌಕರಿ ಒದಗಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.</p>.<p>ಅಶೋಕ ವೃತ್ತದಿಂದ ಜಿಲ್ಲಾಡಳಿತದ ಭವನದ ತನಕ ಮೆರವಣಿಗೆ ನಡೆಸಿದ ರೈತರು ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಬಲ್ಡೋಟ ಬೇಕು, ಪರಿಸರ ಪೂರಕ ಕಾರ್ಖಾನೆ ಸ್ಥಾಪಿಸಬೇಕು ಎಂದು ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು.</p>.<p>ಭೂಮಿ ಕಳೆದುಕೊಂಡ ರೈತ ಹನುಮಂತಪ್ಪ ಕೌದಿ ಮಾತನಾಡಿ ‘2006-07ರಲ್ಲಿ ಸರ್ಕಾರ ನಮ್ಮ ಜಮೀನನ್ನು ಒತ್ತಾಯಪೂರ್ವಕವಾಗಿ ಪಡೆದುಕೊಂಡು ಬಲ್ದೋಟ ಕಂಪನಿಗೆ ಲೀಸ್ ಅಗ್ರಿಮೆಂಟ್ ಮಾಡಿಕೊಟ್ಟಿದೆ. ಎರಡು ದಶಕಗಳು ಉರುಳಿದರೂ ಕಾರ್ಖಾನೆ ಸ್ಥಾಪನೆಯಾಗಿಲ್ಲ. ರೈತ ಕುಟುಂಬಗಳಿಗೆ ಉದ್ಯೋಗ ಕೊಡುವುದಾಗಿ ನಂಬಿಸಿ ಇತ್ತ ಕಾರ್ಖಾನೆಯೂ ಇಲ್ಲ, ಭೂಮಿಯು ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು. ತಹಶೀಲ್ದಾರ್ ಕಚೇರಿ ಆವರಣದಲ್ಲಿ 107 ದಿನಗಳಿಂದ ಅನಿರ್ದಿಷ್ಟ ಧರಣಿ ಮಾಡುತ್ತಿದ್ದೇವೆ ಎಂದು ಹೇಳಿದರು.</p>.<p>ಮುಖಂಡರಾದ ಕಾಮಣ್ಣ ಕಂಬಳಿ, ಸುರೇಶ ಕೊಪ್ಪಳ, ನಾಗರಾಜ ದಿಪಲದಿನ್ನಿ, ಸಂತೋಷ ಪೂಜಾರ, ಹನುಮಪ್ಪ ಮೈತಾಪುರ, ರಾಘವಡಂಬಳ ಮನೋಜ, ನಾಗರಾಜ ಗುರಿಕಾರ, ಕೆಮು ಇಟಗಿ, ದೇವವ್ವ ಕೌದಿ, ಕಾಳಮ್ಮ ಪಿರಾಂಬಿ, ನಾಗರತ್ನ ಕೌದಿ, ಶಾಂತಮ್ಮ, ಜ್ಯೋತಿಮ್ಮ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ಜಿಲ್ಲಾಕೇಂದ್ರದ ಸಮೀಪದಲ್ಲಿರುವ ಬಲ್ಡೋಟಾ ಕಂಪನಿಗೆ ತನ್ನ ಕೈಗಾರಿಕೆ ವಿಸ್ತರಣೆಗೆ ಅವಕಾಶ ಕೊಡಬೇಕು, ಭೂಮಿ ಕಳೆದುಕೊಂಡ ನಮಗೆ ಅಲ್ಲಿ ಕೆಲಸ ಸಿಗಬೇಕು, ಇಲ್ಲವಾದರೆ ಸರ್ಕಾರಿ ನೌಕರಿ ಒದಗಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.</p>.<p>ಅಶೋಕ ವೃತ್ತದಿಂದ ಜಿಲ್ಲಾಡಳಿತದ ಭವನದ ತನಕ ಮೆರವಣಿಗೆ ನಡೆಸಿದ ರೈತರು ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಬಲ್ಡೋಟ ಬೇಕು, ಪರಿಸರ ಪೂರಕ ಕಾರ್ಖಾನೆ ಸ್ಥಾಪಿಸಬೇಕು ಎಂದು ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು.</p>.<p>ಭೂಮಿ ಕಳೆದುಕೊಂಡ ರೈತ ಹನುಮಂತಪ್ಪ ಕೌದಿ ಮಾತನಾಡಿ ‘2006-07ರಲ್ಲಿ ಸರ್ಕಾರ ನಮ್ಮ ಜಮೀನನ್ನು ಒತ್ತಾಯಪೂರ್ವಕವಾಗಿ ಪಡೆದುಕೊಂಡು ಬಲ್ದೋಟ ಕಂಪನಿಗೆ ಲೀಸ್ ಅಗ್ರಿಮೆಂಟ್ ಮಾಡಿಕೊಟ್ಟಿದೆ. ಎರಡು ದಶಕಗಳು ಉರುಳಿದರೂ ಕಾರ್ಖಾನೆ ಸ್ಥಾಪನೆಯಾಗಿಲ್ಲ. ರೈತ ಕುಟುಂಬಗಳಿಗೆ ಉದ್ಯೋಗ ಕೊಡುವುದಾಗಿ ನಂಬಿಸಿ ಇತ್ತ ಕಾರ್ಖಾನೆಯೂ ಇಲ್ಲ, ಭೂಮಿಯು ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು. ತಹಶೀಲ್ದಾರ್ ಕಚೇರಿ ಆವರಣದಲ್ಲಿ 107 ದಿನಗಳಿಂದ ಅನಿರ್ದಿಷ್ಟ ಧರಣಿ ಮಾಡುತ್ತಿದ್ದೇವೆ ಎಂದು ಹೇಳಿದರು.</p>.<p>ಮುಖಂಡರಾದ ಕಾಮಣ್ಣ ಕಂಬಳಿ, ಸುರೇಶ ಕೊಪ್ಪಳ, ನಾಗರಾಜ ದಿಪಲದಿನ್ನಿ, ಸಂತೋಷ ಪೂಜಾರ, ಹನುಮಪ್ಪ ಮೈತಾಪುರ, ರಾಘವಡಂಬಳ ಮನೋಜ, ನಾಗರಾಜ ಗುರಿಕಾರ, ಕೆಮು ಇಟಗಿ, ದೇವವ್ವ ಕೌದಿ, ಕಾಳಮ್ಮ ಪಿರಾಂಬಿ, ನಾಗರತ್ನ ಕೌದಿ, ಶಾಂತಮ್ಮ, ಜ್ಯೋತಿಮ್ಮ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>