<p><strong>ಕುಕನೂರು:</strong> ಶ್ರದ್ಧೆಯಿಂದ ದುಡಿದರೆ ಕೃಷಿ ಕಾಯಕದಲ್ಲಿ ಬದುಕು ಕಟ್ಟಿಕೊಳ್ಳಬಹುದು. ಇದಕ್ಕೆ ಉತ್ತಮ ನಿದರ್ಶನ ತಾಲ್ಲೂಕಿನ ಹೊನ್ನುಣಸಿ ಗ್ರಾಮದ ಪ್ರಗತಿಪರ ರೈತ ಗುರುಸಿದ್ದಪ್ಪ ಕಟಗಾಲಿ.</p>.<p>ಒಂದೇ ಬೆಳೆ ಬೆಳೆಯುವುದಕ್ಕಿಂತ, ಹಲವು ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂಬುದನ್ನು ಪ್ರಾಯೋಗಿಕವಾಗಿ ಅರಿತ ಗುರುಸಿದ್ದಪ್ಪ, ತಮ್ಮ ಎಂಟು ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯ ಕೈಗೊಳ್ಳುತ್ತಿದ್ದಾರೆ. ವರ್ಷಕ್ಕೆ ₹6ಲಕ್ಷದಿಂದ ರಿಂದ ₹8 ಲಕ್ಷ ಆದಾಯದ ಮಾರ್ಗ ಕಂಡುಕೊಂಡಿದ್ದಾರೆ.</p>.<p>ತಮ್ಮ ಜಮೀನಿನಲ್ಲಿ 400 ತೆಂಗು, 200 ಮಾವು, 150 ದಾಳಿಂಬೆ, 200 ಪಪ್ಪಾಯಿ, ನುಗ್ಗೆಕಾಯಿ, 100 ನಿಂಬೆಕಾಯಿ, ಕರಿಬೇವು, ಜೇನು ಸಾಕಾಣಿಕೆ, ಮೆಣಸಿನಕಾಯಿ, ಶೇಂಗಾ, ಮೆಕ್ಕೆಜೋಳ... ಹೀಗೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.</p>.<p>‘ಜಮೀನಿನಲ್ಲಿ ತಲಾ 20 ಗುಂಟೆಯಲ್ಲಿ ನುಗ್ಗೆಕಾಯಿ ಬೆಳೆದು ವಾರ್ಷಿಕವಾಗಿ ₹2 ಲಕ್ಷ ಆದಾಯ ಗಳಿಸುತ್ತೇನೆ’ ಎಂದು ಗುರುಸಿದ್ದಪ್ಪ ತಿಳಿಸಿದರು.</p>.<p>‘ಎರಡು ಆಕಳು ಸಾಕಿದ್ದೇನೆ. ಅವುಗಳ ಹಾಲು ಮಾರಾಟ ಹಾಗೂ ಹೊಲದಲ್ಲಿರುವ ಮರಗಳ ತೆಂಗಿನಕಾಯಿ ಮಾರಾಟದಿಂದಲೂ ಒಂದಿಷ್ಟು ಆದಾಯ ಕೈಗೆಟುಕುತ್ತಿದೆ. ಜತೆಗೆ ವಿವಿಧ ಧಾನ್ಯ ಮಾರಾಟ ಮಾಡಿ, ಆದಾಯ ಹೆಚ್ಚಿಸಿಕೊಳ್ಳುತ್ತಿದ್ದೇನೆ’ ಎಂದರು.</p>.<p>ಮಿಶ್ರ ಬೆಳೆಗಳು ಒಂದಕ್ಕೊಂದು ಕೀಟ ನಿವಾರಕ, ರೋಗ ನಿರೋಧಕಗಳಾಗಿ ಕೆಲಸ ಮಾಡುತ್ತವೆ. ಹೀಗಾಗಿ, ಅವರು ಕ್ರಿಮಿನಾಶಕ ಉಪಯೋಗ ಮಾಡಿಲ್ಲ. ಬೆಳೆಗಳಿಗೆ ಆಗಾಗ ಸಾವಯವ ಗೊಬ್ಬರ ಮಾತ್ರ ಹಾಕಿದ್ದಾರೆ. ತಮ್ಮ ಕುಟುಂಬಕ್ಕೂ ಕ್ರಿಮಿನಾಶಕ ರಹಿತವಾದ ಶುದ್ಧ ತೊಗರಿ, ಜೋಳ, ತೆಂಗಿನಕಾಯಿ ಸಿಗುತ್ತಿವೆ. ಈ ತೆಂಗಿನಕಾಯಿಗೆ ಹಾಗೂ ನುಗ್ಗೆಕಾಯಿ ಗ್ರಾಹಕರ ಬೇಡಿಕೆಯೂ ಹೆಚ್ಚಾಗಿದೆ.</p>.<p>ಅವರು ತಮ್ಮ ಹೊಲದಲ್ಲಿ 20 ವರ್ಷಗಳ ಹಿಂದೆ ಕೊರೆಯಿಸಿದ ಕೊಳವೆಬಾವಿಯಿಂದ ಎಲ್ಲ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.</p>.<p>‘ನನ್ನ ಜಮೀನಿನಲ್ಲಿ ತಿಪ್ಪೆ ಗೊಬ್ಬರ ಬಳಕೆಗೆ ಒತ್ತು ನೀಡುತ್ತೇನೆ. ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತಿದೆ. ಈಗಿನ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರನ್ನು ಇಟ್ಟುಕೊಂಡು ಕೃಷಿ ಮಾಡಿದರೆ ನಷ್ಟವೇ ಹೆಚ್ಚು. ಕುಟುಂಬದವರೆಲ್ಲ ಕೃಷಿಯಲ್ಲಿ ತೊಡಗಿಕೊಂಡಿದ್ದೇವೆ’ ಎನ್ನುತ್ತಾರೆ ಗುರುಸಿದ್ದಪ್ಪ.</p>.<div><blockquote>ಪರಿಶ್ರಮ ಹಾಗೂ ಬುದ್ಧಿವಂತಿಕೆಯಿಂದ ಕೃಷಿಯಲ್ಲಿ ತೊಡಗಿಕೊಂಡಾಗ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ಪಡೆಯಬಹುದು ಎಂಬುದಕ್ಕೆ ಗುರುಸಿದ್ದಪ್ಪ ಉದಾಹರಣೆ.</blockquote><span class="attribution">ಲಿಂಗನಗೌಡ, ಸಹಾಯಕ ತೋಟಗಾರಿಕಾ ನಿರ್ದೇಶಕ, ಯಲಬುರ್ಗಾ</span></div>.<div><blockquote>ಕೆಂಪು ಮಣ್ಣಿನ ಭೂಮಿಯಲ್ಲಿ ಹಣ್ಣುಗಳ ಬೇಸಾಯ ಲಾಭದಾಯಕವಾಗಿದೆ. ಮಿಶ್ರ ಕೃಷಿಯಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು</blockquote><span class="attribution">ಗುರುಸಿದ್ದಪ್ಪ ಕಟಗಾಲಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಕನೂರು:</strong> ಶ್ರದ್ಧೆಯಿಂದ ದುಡಿದರೆ ಕೃಷಿ ಕಾಯಕದಲ್ಲಿ ಬದುಕು ಕಟ್ಟಿಕೊಳ್ಳಬಹುದು. ಇದಕ್ಕೆ ಉತ್ತಮ ನಿದರ್ಶನ ತಾಲ್ಲೂಕಿನ ಹೊನ್ನುಣಸಿ ಗ್ರಾಮದ ಪ್ರಗತಿಪರ ರೈತ ಗುರುಸಿದ್ದಪ್ಪ ಕಟಗಾಲಿ.</p>.<p>ಒಂದೇ ಬೆಳೆ ಬೆಳೆಯುವುದಕ್ಕಿಂತ, ಹಲವು ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂಬುದನ್ನು ಪ್ರಾಯೋಗಿಕವಾಗಿ ಅರಿತ ಗುರುಸಿದ್ದಪ್ಪ, ತಮ್ಮ ಎಂಟು ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯ ಕೈಗೊಳ್ಳುತ್ತಿದ್ದಾರೆ. ವರ್ಷಕ್ಕೆ ₹6ಲಕ್ಷದಿಂದ ರಿಂದ ₹8 ಲಕ್ಷ ಆದಾಯದ ಮಾರ್ಗ ಕಂಡುಕೊಂಡಿದ್ದಾರೆ.</p>.<p>ತಮ್ಮ ಜಮೀನಿನಲ್ಲಿ 400 ತೆಂಗು, 200 ಮಾವು, 150 ದಾಳಿಂಬೆ, 200 ಪಪ್ಪಾಯಿ, ನುಗ್ಗೆಕಾಯಿ, 100 ನಿಂಬೆಕಾಯಿ, ಕರಿಬೇವು, ಜೇನು ಸಾಕಾಣಿಕೆ, ಮೆಣಸಿನಕಾಯಿ, ಶೇಂಗಾ, ಮೆಕ್ಕೆಜೋಳ... ಹೀಗೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.</p>.<p>‘ಜಮೀನಿನಲ್ಲಿ ತಲಾ 20 ಗುಂಟೆಯಲ್ಲಿ ನುಗ್ಗೆಕಾಯಿ ಬೆಳೆದು ವಾರ್ಷಿಕವಾಗಿ ₹2 ಲಕ್ಷ ಆದಾಯ ಗಳಿಸುತ್ತೇನೆ’ ಎಂದು ಗುರುಸಿದ್ದಪ್ಪ ತಿಳಿಸಿದರು.</p>.<p>‘ಎರಡು ಆಕಳು ಸಾಕಿದ್ದೇನೆ. ಅವುಗಳ ಹಾಲು ಮಾರಾಟ ಹಾಗೂ ಹೊಲದಲ್ಲಿರುವ ಮರಗಳ ತೆಂಗಿನಕಾಯಿ ಮಾರಾಟದಿಂದಲೂ ಒಂದಿಷ್ಟು ಆದಾಯ ಕೈಗೆಟುಕುತ್ತಿದೆ. ಜತೆಗೆ ವಿವಿಧ ಧಾನ್ಯ ಮಾರಾಟ ಮಾಡಿ, ಆದಾಯ ಹೆಚ್ಚಿಸಿಕೊಳ್ಳುತ್ತಿದ್ದೇನೆ’ ಎಂದರು.</p>.<p>ಮಿಶ್ರ ಬೆಳೆಗಳು ಒಂದಕ್ಕೊಂದು ಕೀಟ ನಿವಾರಕ, ರೋಗ ನಿರೋಧಕಗಳಾಗಿ ಕೆಲಸ ಮಾಡುತ್ತವೆ. ಹೀಗಾಗಿ, ಅವರು ಕ್ರಿಮಿನಾಶಕ ಉಪಯೋಗ ಮಾಡಿಲ್ಲ. ಬೆಳೆಗಳಿಗೆ ಆಗಾಗ ಸಾವಯವ ಗೊಬ್ಬರ ಮಾತ್ರ ಹಾಕಿದ್ದಾರೆ. ತಮ್ಮ ಕುಟುಂಬಕ್ಕೂ ಕ್ರಿಮಿನಾಶಕ ರಹಿತವಾದ ಶುದ್ಧ ತೊಗರಿ, ಜೋಳ, ತೆಂಗಿನಕಾಯಿ ಸಿಗುತ್ತಿವೆ. ಈ ತೆಂಗಿನಕಾಯಿಗೆ ಹಾಗೂ ನುಗ್ಗೆಕಾಯಿ ಗ್ರಾಹಕರ ಬೇಡಿಕೆಯೂ ಹೆಚ್ಚಾಗಿದೆ.</p>.<p>ಅವರು ತಮ್ಮ ಹೊಲದಲ್ಲಿ 20 ವರ್ಷಗಳ ಹಿಂದೆ ಕೊರೆಯಿಸಿದ ಕೊಳವೆಬಾವಿಯಿಂದ ಎಲ್ಲ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.</p>.<p>‘ನನ್ನ ಜಮೀನಿನಲ್ಲಿ ತಿಪ್ಪೆ ಗೊಬ್ಬರ ಬಳಕೆಗೆ ಒತ್ತು ನೀಡುತ್ತೇನೆ. ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತಿದೆ. ಈಗಿನ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರನ್ನು ಇಟ್ಟುಕೊಂಡು ಕೃಷಿ ಮಾಡಿದರೆ ನಷ್ಟವೇ ಹೆಚ್ಚು. ಕುಟುಂಬದವರೆಲ್ಲ ಕೃಷಿಯಲ್ಲಿ ತೊಡಗಿಕೊಂಡಿದ್ದೇವೆ’ ಎನ್ನುತ್ತಾರೆ ಗುರುಸಿದ್ದಪ್ಪ.</p>.<div><blockquote>ಪರಿಶ್ರಮ ಹಾಗೂ ಬುದ್ಧಿವಂತಿಕೆಯಿಂದ ಕೃಷಿಯಲ್ಲಿ ತೊಡಗಿಕೊಂಡಾಗ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ಪಡೆಯಬಹುದು ಎಂಬುದಕ್ಕೆ ಗುರುಸಿದ್ದಪ್ಪ ಉದಾಹರಣೆ.</blockquote><span class="attribution">ಲಿಂಗನಗೌಡ, ಸಹಾಯಕ ತೋಟಗಾರಿಕಾ ನಿರ್ದೇಶಕ, ಯಲಬುರ್ಗಾ</span></div>.<div><blockquote>ಕೆಂಪು ಮಣ್ಣಿನ ಭೂಮಿಯಲ್ಲಿ ಹಣ್ಣುಗಳ ಬೇಸಾಯ ಲಾಭದಾಯಕವಾಗಿದೆ. ಮಿಶ್ರ ಕೃಷಿಯಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು</blockquote><span class="attribution">ಗುರುಸಿದ್ದಪ್ಪ ಕಟಗಾಲಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>