<p><strong>ಕುಷ್ಟಗಿ</strong>: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯೆಂದರೆ ಅಲ್ಲಿ ರೈತರಿಗೆ ಪ್ರಾಮುಖ್ಯತೆ ಇರಬೇಕು. ನೀರು, ನೆರಳು, ನೈರ್ಮಲ್ಯ ಒಳಗೊಂಡ ಅಗತ್ಯ ಮೂಲಸೌಲಭ್ಯಗಳಿದ್ದರೆ ಪ್ರಾಂಗಣಕ್ಕೆ ಬರುವ ರೈತರು ಒಂದಷ್ಟು ನೆಮ್ಮದಿ ಕಾಣಲು ಸಾಧ್ಯ. ಕೃಷಿ ಉತ್ಪನ್ನಗಳ ವಹಿವಾಟಿನೊಂದಿಗೆ ರೈತರಿಂದ ವರ್ಷಪೂರ್ತಿ ಮುಲಾಜಿಲ್ಲದೇ ಶುಲ್ಕ ವಸೂಲಿ ಮಾಡುತ್ತಿದ್ದರೂ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಮಾತ್ರ ಜಾಣ ಮರೆವು ಪ್ರದರ್ಶಿಸುತ್ತಿರುವ ಎಪಿಎಂಸಿಯ ನಿರ್ಲಕ್ಷ್ಯದ ನಡೆ ಬಗ್ಗೆ ಬಹಳಷ್ಟು ಆಕ್ಷೇಪಗಳು ಕೇಳಿ ಬಂದಿವೆ.</p>.<p>ಕೊಪ್ಪಳ, ಗಂಗಾವತಿ ಹೊರತುಪಡಿಸಿದರೆ ಅತಿ ಹೆಚ್ಚು ಶುಲ್ಕ ಸಂಗ್ರಹವಾಗುವ ಎಪಿಎಂಸಿ ಇದು. ಅದರಲ್ಲೂ ಬೇವಿನಬೀಜದ ಮಾರಾಟದ ವಿಷಯದಲ್ಲಂತೂ ಜಿಲ್ಲೆಯಲ್ಲೇ ಪ್ರಮುಖ ಸ್ಥಳ. ಅಷ್ಟೇ ಅಲ್ಲ, ಬೇವಿನ ಬೀಜದ ವಹಿವಾಟಿಗೆ ಪ್ರಸಿದ್ಧಿಯಾಗಿ ರಾಜ್ಯದ ಅನೇಕ ಜಿಲ್ಲೆಗಳಿಂದ ಇಲ್ಲಿಗೆ ಮಾರಾಟಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಬೇವಿನ ಬೀಜ ಆವಕವಾಗುತ್ತದೆ. ಹಾಗಾಗಿ ಸಮಿತಿಯ ಸಂಬಂಧ ಅಂತರರಾಜ್ಯದವರೆಗೂ ವಿಸ್ತರಣೆಯಾಗಿದೆ.</p>.<p>ಮೆಕ್ಕೆಜೋಳ, ತೊಗರಿ, ಶೇಂಗಾ, ಸಜ್ಜೆ ಕೃಷಿ ಉತ್ಪನ್ನ ಗಳು ಮತ್ತು ಬೇವಿನ ಬೀಜದ ವಹಿವಾಟಿಗೆ ಸರಿಸಮಾನವಾಗಿ ಪ್ರತಿವರ್ಷ ಮಾರುಕಟ್ಟೆ ಶುಲ್ಕ ಕೋಟಿ ಲೆಕ್ಕದಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದ ಮೇಲೆ ಪ್ರಾಂಗಣದಲ್ಲಿ ಸೌಲಭ್ಯಗಳಿಗೆ ಕೊರತೆಯಿಲ್ಲ ಎಂದು ಕೊಂಡರೆ ಊಹೆ ತಪ್ಪಾಗುತ್ತದೆ. ಯಾವ ಅನುಕೂಲಗಳಿಲ್ಲದೆ ರೈತರು, ವ್ಯಾಪಾರಸ್ಥರು, ಶ್ರಮಿಕರು ಇತರೆ ಜನರು ಪರದಾಡುತ್ತಿದ್ದಾರೆ.</p>.<p>ಮಹಿಳೆಯರ ಗೋಳು ಕೇಳೋರಿಲ್ಲ: ನಿತ್ಯ ನೂರಾರು ರೈತರು ಸಂದರ್ಶಿಸುವ ಮಾರುಕಟ್ಟೆ ಇದು, ಮಹಿಳೆಯರೂ ಇರುತ್ತಾರೆ. ಆದರೆ ಶೌಚಾಲಯ, ಮೂತ್ರಾಲಯದ ಸೂಕ್ತ ವ್ಯವಸ್ಥೆ ಇಲ್ಲ. ಪುರುಷರಿಗಿಂತ ಮಹಿಳೆಯರಿಗೆ ಆಗುವ ಹಿಂಸೆ ಅಷ್ಟಿಷ್ಟಲ್ಲ. ಸೌಲಭ್ಯ ಕಲ್ಪಿಸದ ಅಧಿಕಾರಿಗಳ ನಡವಳಿಕೆ ಅಮಾನವೀಯ. ಆದರೆ ಖರ್ಚಿನ ಪುಸ್ತಕದಲ್ಲಿ ಮಾತ್ರ ಎಲ್ಲ ಅಭಿವೃದ್ಧಿಯಾಗಿರುತ್ತದೆ. ನೀರು, ನೆರಳಿನ ವ್ಯವಸ್ಥೆ ಇಲ್ಲದೆ ಬಿಸಿಲಲ್ಲಿ ಬಸವಳಿಯುವಂತಾಗಿದೆ ಎನ್ನುತ್ತಾರೆ ರೈತರು.</p>.<div><blockquote>ಸಮಿತಿ ಪ್ರಾಂಗಣ ಅವ್ಯವಸ್ಥೆಯ ಆಗರವಾಗಿದೆ. ಅಧಿಕಾರಿಗಳ ಬೇಜವಾಬ್ದಾರಿ ಮಿತಿಮೀರಿದೆ. ಕೇವಲ ಕಲ್ಲು ಮುಳ್ಳು ತೆಗೆಸಿದ ನೆಪದಲ್ಲಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿದ್ದೇ ಅಭಿವೃದ್ಧಿ. ಕೇಳೋರಿಲ್ಲದೆ ನಮ್ಮ ಸ್ಥಿತಿ ಅರಣ್ಯರೋದನವಾಗಿದೆ </blockquote><span class="attribution">ಮಹಾಂತಯ್ಯ ಅರಳೆಲೆಮಠ ಅಧ್ಯಕ್ಷ, ಎಪಿಎಂಸಿ ವರ್ತಕರ ಸಂಘ</span></div>.<p><strong>ಕಳ್ಳಕಾಕರ ಭಯ</strong></p><p>‘ನಿಯಮಗಳ ಪ್ರಕಾರ ಪ್ರಾಂಗಣದ ಸುತ್ತ ಆವರಣ ಗೋಡೆ ಇರಬೇಕು. ಆದರೆ ಪ್ರಾಂಗಣದಲ್ಲೇ ರಸ್ತೆ ನಿರ್ಮಾಣವಾಗಿದೆ. ರಾತ್ರಿ ಅನುಮಾನಾಸ್ಪದ ವ್ಯಕ್ತಿಗಳು ವಾಹನ ಸಮೇತ ಇಲ್ಲಿಗೆ ಬರಹೋಗುತ್ತಿದ್ದು ಕಳ್ಳಕಾಕರ ಭಯ ಇದೆ. ಹಿಂದೆ ಒಂದು ಅಂಗಡಿ ನೌಕರನ ಕೊಲೆ ನಡೆದಿತ್ತು. ಈಗ ತೆಗ್ಗಿನ ಓಣಿಯಿಂದ ಹೆದ್ದಾರಿಗೆ ಪ್ರಾಂಗಣದ ಒಳಗಿನಿಂದಲೇ ಸಂಪರ್ಕ ಕಲ್ಪಿಸುವ ಹುನ್ನಾರ ನಡೆದಿದೆ. ಅದಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಅವರು ರಸ್ತೆ ನಿರ್ಮಿಸುವ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ’ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ವ್ಯಾಪಾರಿಗಳು ‘ಪ್ರಜಾವಾಣಿ’ಗೆ ವಿವರಿಸಿದರು.</p><p><strong>‘ಕುಡೇಕ ನೀರಾದ್ರೂ ಕೊಡ್ರಿ’</strong></p><p>ಸಮಿತಿ ಪ್ರಾಂಗಣದಲ್ಲಿ ಎದುರಾದ ಹಿರೇಮನ್ನಾಪುರದ ರೈತ ವೀರಭದ್ರಪ್ಪ, ‘ನಮಗ ಹೆಚ್ಗೆ ಏನೂ ಬ್ಯಾಡ್ರೆಪಾ, ನೆತ್ತಿ ಸುಡೊ ಬಿಸಲಾಗ ಗಂಟ್ಲಾ ಒಣಗತೈತಿ, ಕುಡೇಕ ಒಂದಷ್ಟು ಚೊಲೊ ನೀರಾದ್ರೂ ಕೊಡ್ರಿ, ಒಂದಾಕ, ಎರಡಾಕ (ಮೂತ್ರಾಲಯ, ಶೌಚಾಲಯ) ಹೋಗಾಕ ಅನುಕೂಲ ಮಾಡ್ರಿ, ಬ್ಯಾರೆ ಏನೂ ಬ್ಯಾಡ ಅಂದ್ರೂ ನಮ್ಮ ಮಾತು ಯಾರೂ ಕಿವ್ಯಾಗ ಹಾಕ್ಕೋಳಂಗಿಲ್ರಿ. ಈ ಸಮಸ್ಯೆ ಎಮ್ಮೆಲ್ಲೆ ಗಮನಕ್ಕೂ ಐತಿ ಆದ್ರ ತೊಂದ್ರಿ ಹಾಂಗೈ ಉಳದೈತಿನೋಡ್ರಿ’ ಎಂದು ‘ಪ್ರಜಾವಾಣಿ’ ಬಳಿ ಆಕ್ರೋಶ ಹೊರಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ</strong>: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯೆಂದರೆ ಅಲ್ಲಿ ರೈತರಿಗೆ ಪ್ರಾಮುಖ್ಯತೆ ಇರಬೇಕು. ನೀರು, ನೆರಳು, ನೈರ್ಮಲ್ಯ ಒಳಗೊಂಡ ಅಗತ್ಯ ಮೂಲಸೌಲಭ್ಯಗಳಿದ್ದರೆ ಪ್ರಾಂಗಣಕ್ಕೆ ಬರುವ ರೈತರು ಒಂದಷ್ಟು ನೆಮ್ಮದಿ ಕಾಣಲು ಸಾಧ್ಯ. ಕೃಷಿ ಉತ್ಪನ್ನಗಳ ವಹಿವಾಟಿನೊಂದಿಗೆ ರೈತರಿಂದ ವರ್ಷಪೂರ್ತಿ ಮುಲಾಜಿಲ್ಲದೇ ಶುಲ್ಕ ವಸೂಲಿ ಮಾಡುತ್ತಿದ್ದರೂ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಮಾತ್ರ ಜಾಣ ಮರೆವು ಪ್ರದರ್ಶಿಸುತ್ತಿರುವ ಎಪಿಎಂಸಿಯ ನಿರ್ಲಕ್ಷ್ಯದ ನಡೆ ಬಗ್ಗೆ ಬಹಳಷ್ಟು ಆಕ್ಷೇಪಗಳು ಕೇಳಿ ಬಂದಿವೆ.</p>.<p>ಕೊಪ್ಪಳ, ಗಂಗಾವತಿ ಹೊರತುಪಡಿಸಿದರೆ ಅತಿ ಹೆಚ್ಚು ಶುಲ್ಕ ಸಂಗ್ರಹವಾಗುವ ಎಪಿಎಂಸಿ ಇದು. ಅದರಲ್ಲೂ ಬೇವಿನಬೀಜದ ಮಾರಾಟದ ವಿಷಯದಲ್ಲಂತೂ ಜಿಲ್ಲೆಯಲ್ಲೇ ಪ್ರಮುಖ ಸ್ಥಳ. ಅಷ್ಟೇ ಅಲ್ಲ, ಬೇವಿನ ಬೀಜದ ವಹಿವಾಟಿಗೆ ಪ್ರಸಿದ್ಧಿಯಾಗಿ ರಾಜ್ಯದ ಅನೇಕ ಜಿಲ್ಲೆಗಳಿಂದ ಇಲ್ಲಿಗೆ ಮಾರಾಟಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಬೇವಿನ ಬೀಜ ಆವಕವಾಗುತ್ತದೆ. ಹಾಗಾಗಿ ಸಮಿತಿಯ ಸಂಬಂಧ ಅಂತರರಾಜ್ಯದವರೆಗೂ ವಿಸ್ತರಣೆಯಾಗಿದೆ.</p>.<p>ಮೆಕ್ಕೆಜೋಳ, ತೊಗರಿ, ಶೇಂಗಾ, ಸಜ್ಜೆ ಕೃಷಿ ಉತ್ಪನ್ನ ಗಳು ಮತ್ತು ಬೇವಿನ ಬೀಜದ ವಹಿವಾಟಿಗೆ ಸರಿಸಮಾನವಾಗಿ ಪ್ರತಿವರ್ಷ ಮಾರುಕಟ್ಟೆ ಶುಲ್ಕ ಕೋಟಿ ಲೆಕ್ಕದಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದ ಮೇಲೆ ಪ್ರಾಂಗಣದಲ್ಲಿ ಸೌಲಭ್ಯಗಳಿಗೆ ಕೊರತೆಯಿಲ್ಲ ಎಂದು ಕೊಂಡರೆ ಊಹೆ ತಪ್ಪಾಗುತ್ತದೆ. ಯಾವ ಅನುಕೂಲಗಳಿಲ್ಲದೆ ರೈತರು, ವ್ಯಾಪಾರಸ್ಥರು, ಶ್ರಮಿಕರು ಇತರೆ ಜನರು ಪರದಾಡುತ್ತಿದ್ದಾರೆ.</p>.<p>ಮಹಿಳೆಯರ ಗೋಳು ಕೇಳೋರಿಲ್ಲ: ನಿತ್ಯ ನೂರಾರು ರೈತರು ಸಂದರ್ಶಿಸುವ ಮಾರುಕಟ್ಟೆ ಇದು, ಮಹಿಳೆಯರೂ ಇರುತ್ತಾರೆ. ಆದರೆ ಶೌಚಾಲಯ, ಮೂತ್ರಾಲಯದ ಸೂಕ್ತ ವ್ಯವಸ್ಥೆ ಇಲ್ಲ. ಪುರುಷರಿಗಿಂತ ಮಹಿಳೆಯರಿಗೆ ಆಗುವ ಹಿಂಸೆ ಅಷ್ಟಿಷ್ಟಲ್ಲ. ಸೌಲಭ್ಯ ಕಲ್ಪಿಸದ ಅಧಿಕಾರಿಗಳ ನಡವಳಿಕೆ ಅಮಾನವೀಯ. ಆದರೆ ಖರ್ಚಿನ ಪುಸ್ತಕದಲ್ಲಿ ಮಾತ್ರ ಎಲ್ಲ ಅಭಿವೃದ್ಧಿಯಾಗಿರುತ್ತದೆ. ನೀರು, ನೆರಳಿನ ವ್ಯವಸ್ಥೆ ಇಲ್ಲದೆ ಬಿಸಿಲಲ್ಲಿ ಬಸವಳಿಯುವಂತಾಗಿದೆ ಎನ್ನುತ್ತಾರೆ ರೈತರು.</p>.<div><blockquote>ಸಮಿತಿ ಪ್ರಾಂಗಣ ಅವ್ಯವಸ್ಥೆಯ ಆಗರವಾಗಿದೆ. ಅಧಿಕಾರಿಗಳ ಬೇಜವಾಬ್ದಾರಿ ಮಿತಿಮೀರಿದೆ. ಕೇವಲ ಕಲ್ಲು ಮುಳ್ಳು ತೆಗೆಸಿದ ನೆಪದಲ್ಲಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿದ್ದೇ ಅಭಿವೃದ್ಧಿ. ಕೇಳೋರಿಲ್ಲದೆ ನಮ್ಮ ಸ್ಥಿತಿ ಅರಣ್ಯರೋದನವಾಗಿದೆ </blockquote><span class="attribution">ಮಹಾಂತಯ್ಯ ಅರಳೆಲೆಮಠ ಅಧ್ಯಕ್ಷ, ಎಪಿಎಂಸಿ ವರ್ತಕರ ಸಂಘ</span></div>.<p><strong>ಕಳ್ಳಕಾಕರ ಭಯ</strong></p><p>‘ನಿಯಮಗಳ ಪ್ರಕಾರ ಪ್ರಾಂಗಣದ ಸುತ್ತ ಆವರಣ ಗೋಡೆ ಇರಬೇಕು. ಆದರೆ ಪ್ರಾಂಗಣದಲ್ಲೇ ರಸ್ತೆ ನಿರ್ಮಾಣವಾಗಿದೆ. ರಾತ್ರಿ ಅನುಮಾನಾಸ್ಪದ ವ್ಯಕ್ತಿಗಳು ವಾಹನ ಸಮೇತ ಇಲ್ಲಿಗೆ ಬರಹೋಗುತ್ತಿದ್ದು ಕಳ್ಳಕಾಕರ ಭಯ ಇದೆ. ಹಿಂದೆ ಒಂದು ಅಂಗಡಿ ನೌಕರನ ಕೊಲೆ ನಡೆದಿತ್ತು. ಈಗ ತೆಗ್ಗಿನ ಓಣಿಯಿಂದ ಹೆದ್ದಾರಿಗೆ ಪ್ರಾಂಗಣದ ಒಳಗಿನಿಂದಲೇ ಸಂಪರ್ಕ ಕಲ್ಪಿಸುವ ಹುನ್ನಾರ ನಡೆದಿದೆ. ಅದಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಅವರು ರಸ್ತೆ ನಿರ್ಮಿಸುವ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ’ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ವ್ಯಾಪಾರಿಗಳು ‘ಪ್ರಜಾವಾಣಿ’ಗೆ ವಿವರಿಸಿದರು.</p><p><strong>‘ಕುಡೇಕ ನೀರಾದ್ರೂ ಕೊಡ್ರಿ’</strong></p><p>ಸಮಿತಿ ಪ್ರಾಂಗಣದಲ್ಲಿ ಎದುರಾದ ಹಿರೇಮನ್ನಾಪುರದ ರೈತ ವೀರಭದ್ರಪ್ಪ, ‘ನಮಗ ಹೆಚ್ಗೆ ಏನೂ ಬ್ಯಾಡ್ರೆಪಾ, ನೆತ್ತಿ ಸುಡೊ ಬಿಸಲಾಗ ಗಂಟ್ಲಾ ಒಣಗತೈತಿ, ಕುಡೇಕ ಒಂದಷ್ಟು ಚೊಲೊ ನೀರಾದ್ರೂ ಕೊಡ್ರಿ, ಒಂದಾಕ, ಎರಡಾಕ (ಮೂತ್ರಾಲಯ, ಶೌಚಾಲಯ) ಹೋಗಾಕ ಅನುಕೂಲ ಮಾಡ್ರಿ, ಬ್ಯಾರೆ ಏನೂ ಬ್ಯಾಡ ಅಂದ್ರೂ ನಮ್ಮ ಮಾತು ಯಾರೂ ಕಿವ್ಯಾಗ ಹಾಕ್ಕೋಳಂಗಿಲ್ರಿ. ಈ ಸಮಸ್ಯೆ ಎಮ್ಮೆಲ್ಲೆ ಗಮನಕ್ಕೂ ಐತಿ ಆದ್ರ ತೊಂದ್ರಿ ಹಾಂಗೈ ಉಳದೈತಿನೋಡ್ರಿ’ ಎಂದು ‘ಪ್ರಜಾವಾಣಿ’ ಬಳಿ ಆಕ್ರೋಶ ಹೊರಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>