<p><strong>ಕುಷ್ಟಗಿ:</strong> ತಾಲ್ಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹೈಟೆನ್ಷನ್ ವಿದ್ಯುತ್ ಮಾರ್ಗ ರಚನೆಗಾಗಿ ಅಗತ್ಯ ಗೋಪುರ (ಟವರ್)ಗಳ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಕೃಷಿ ಜಮೀನಿಗೆ ಬೆಲೆ ನಿಗದಿಪಡಿಸುವ ವಿಚಾರದಲ್ಲಿ ಜಿಲ್ಲಾಡಳಿತ ತಾರತಮ್ಯ ನೀತಿ ಅನುಸರಿಸುತ್ತಿರುವುದು ಬೆಳಕಿಗೆ ಬಂದಿದೆ.</p>.<p>ತಮ್ಮ ಜಮಿನುಗಳಲ್ಲಿ ಬೃಹತ್ ಗಾತ್ರದ ವಿದ್ಯುತ್ ಗೋಪುರಗಳನ್ನು ನಿರ್ಮಿಸಲಾಗಿದೆ. ಆದರೆ ಜಮೀನು ಬಳಕೆ ಮಾಡಿಕೊಳ್ಳುವ ವಿಚಾರದಲ್ಲಿ ನಿರ್ಮಾಣ ಕಂಪನಿ ಮತ್ತು ಅಧಿಕಾರಿಗಳು ರೈತರಿಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟಿಲ್ಲ ಎಂದು ಸೋಮವಾರ ಇಲ್ಲಿ ವಿವಿಧ ಗ್ರಾಮಗಳ ರೈತರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಮಳೆಯಾಶ್ರಿತ ಮತ್ತು ನೀರಾವರಿ ಭೂಮಿ ಎರಡಕ್ಕೂ ಒಂದೇ ರೀತಿಯಲ್ಲಿ ಅವೈಜ್ಞಾನಿಕ ಬೆಲೆ ನಿಗದಿಪಡಿಸಲಾಗಿದೆ. ಮಾರ್ಗದ ಮಧ್ಯೆ ಕೊಳವೆಬಾವಿ, ತೋಟಪಟ್ಟಿಗಳು, ಅರಣ್ಯ ಜಾತಿ ಹಾಗೂ ಹಣ್ಣಿನ ಗಿಡಗಳು, ಮನೆ, ಶೆಡ್ಗಳು ಇದ್ದರೂ ಅವುಗಳಿಗೆ ಪರಿಹಾರ ನೀಡಿಲ್ಲ. ಸಂಬಂಧಿಸಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೌಲ್ಯಮಾಪನವನ್ನೂ ಮಾಡಿಲ್ಲ. ರೈತರಿಗೆ ಸೂಕ್ತ ನ್ಯಾಯ ದೊರಕಿಸಿಕೊಟ್ಟಿಲ್ಲ ಎಂದು ಆಕ್ಷೇಪಿಸಿದರೆ ಕಂಪನಿ ಅಧಿಕಾರಿಗಳು ದರ್ಪದಿಂದ ವರ್ತಿಸುತ್ತಾರೆ ಎಂದು ಮಲ್ಲನಗೌಡ ಪೊಲೀಸ್ ಪಾಟೀಲ, ಬಸವರಾಜ ತಳವಾರ, ನಾಗರಾಜ ಪೂಜಾರ, ಮಂಜುನಾಥ ಬುನ್ನಟ್ಟಿ ದೂರಿದರು.</p>.<p>ಗದಗ ಕೊಪ್ಪಳ ಪವರ್ಗ್ರಿಡ್ ಪ್ರಸರಣ ಕಂಪನಿ ಗೋಪುರ ಮತ್ತು ತಂತಿ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ರಾಯಚೂರು ಥರ್ಮಲ್ ಘಟಕದಿಂದ ಗುಳದಳ್ಳಿ ಗ್ರಿಡ್ ಮೂಲಕ ಸಂಪರ್ಕ ಕಲ್ಪಿಸಲು ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳ ವ್ಯಾಪ್ತಿಯ ಹಳ್ಳಿಗಳ ವ್ಯಾಪ್ತಿಯಲ್ಲಿ ಹೊಸ ವಿದ್ಯುತ್ ಮಾರ್ಗ ರಚನೆಗೆ ಮುಂದಾಗಿದೆ. 2024ರಲ್ಲಿ ರೈತರ ಜಮೀನುಗಳಿಗೆ ಪ್ರತಿ ಚದರ ಮೀಟರ್ಗೆ ₹2,600 ಮತ್ತು ತಂತಿ ಹಾದುಹೋಗುವ ದಾರಿ (ಮೊಗಸಾಲೆ)ಯ ಪ್ರತಿ ಚದರ ಮೀಟರ್ಗೆ ₹ 40ರಂತೆ ಭೂ ಬೆಲೆ ನಿಗದಿಪಡಿಸಿ ಆಗಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಈಗಾಗಲೇ ಶೇ 90ರಷ್ಟು ಕೆಲಸ ಪೂರ್ಣಗೊಂಡಿದೆ.</p>.<p><strong>ಪ್ರತ್ಯೇಕ ಆದೇಶ:</strong> ಈ ಮಧ್ಯೆ ಇದೇ ಮಾರ್ಗದಲ್ಲಿ ಬರುವ ರೈತರೊಬ್ಬರು ತಕರಾರು ತೆಗೆದು ಕೆಲಸ ಸ್ಥಗಿತಗೊಳಿಸಿ, ಹೆಚ್ಚಿನ ಭೂ ಬೆಲೆ ನಿಗದಿಗೆ ಅರ್ಜಿ ಸಲ್ಲಿಸಿದ ನಂತರ ಹಿಂದಿನ ಆದೇಶ ಪರಿಷ್ಕರಿಸಿ ಪ್ರತ್ಯೇಕ (2025 ಡಿ. 31ರಂದು) ಆದೇಶ ಹೊರಡಿಸಿದ ಜಿಲ್ಲಾಧಿಕಾರಿ ಆ ರೈತರ ಭೂಮಿಯ ಬೆಲೆಯನ್ನು ಪ್ರತಿಚದರ ಮೀಟರ್ಗೆ ₹ 3,000 ನಿಗದಿಪಡಿಸಿದ್ದಾರೆ. ಇತರೆ ರೈತರಿಗೂ ಕೂಡ ಹೊಸ ಆದೇಶದಲ್ಲಿನ ಮಾನದಂಡ ಅನ್ವಯವಾಗುವಂತೆ ಮಾಡಿ ಎಂಬ ರೈತರ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿಲ್ಲ. ಪರಿಷ್ಕೃತ ಆದೇಶದಂತೆ ಪರಿಹಾರ ದೊರಕದಿದ್ದರೆ ಕೆಲಸಕ್ಕೆ ಅವಕಾಶ ನೀಡದೆ ನ್ಯಾಯಕ್ಕಾಗಿ ರೈತರು ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದರು.</p>.<div><blockquote>ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಲಿ, ವಿದ್ಯುತ್ ಟವರ್ ಅಳವಡಿಸುವ ಭೂಮಿಗೆ ಪರಿಷ್ಕೃತ ಆದೇಶದ ಪ್ರಕಾರವೇ ಬೆಲೆ ನಿಗದಿಯಾಗಲಿ. ಈ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಡುತ್ತೇನೆ. ಪೊಲೀಸರೂ ಕಂಪನಿ ಪರವಾಗಿ ವರ್ತಿಸಬಾರದು </blockquote><span class="attribution">ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ</span></div>.<p><strong>`ಬೆಲೆ ಕಳೆದುಕೊಂಡ ಭೂಮಿ'</strong></p><p>ಗೋಪುರದ ಕೆಳಗೆ ಇರುವ ಕೊಳವೆಬಾವಿಗಳನ್ನು ಬಳಕೆ ಮಾಡುವಂತಿಲ್ಲ. ಬೇರೆ ಕಡೆ ತೋಡಿಸಿಕೊಳ್ಳಿ ಎನ್ನುತ್ತಿದ್ದಾರೆ. ಬೇರೆಕಡೆ ನೀರು ಸಿಗುವ ಖಾತರಿ ಇಲ್ಲದ ಕಾರಣ ರೈತರು ಅತಂತ್ರ ಸ್ಥಿತಿ ತಲುಪಿದ್ದೇವೆ. ಕೊಳವೆಬಾವಿಗೆ ಪರಿಹಾರವನ್ನೂ ನೀಡಿಲ್ಲ ಎಂದು ಕನ್ನಾಳ ಗ್ರಾಮದ ರೈತ ಬಸವರಾಜ ತಳವಾರ ಆತಂಕ ತೋಡಿಕೊಂಡರು.</p><p>ವಿದ್ಯುತ್ ಮಾರ್ಗ ಹಾದುಹೋಗಿರುವ ಭೂಮಿಯ ಬೆಲೆ ದಿಢೀರ್ ಕುಸಿದಿದೆ. ವಿದ್ಯುತ್ ಮಾರ್ಗದ ಕೆಳಗೆ ಕೊಳವೆಬಾವಿ ತೋಡುವಂತಿಲ್ಲ. ಅನ್ನ ಉದ್ದೇಶಕ್ಕೆ ಭೂಪರಿವರ್ತನೆ ಮಾಡುವುದಕ್ಕೂ ಅವಕಾಶವಿಲ್ಲ. ರೈತರಿಗೆ ಇಷ್ಟೊಂದು ಅನ್ಯಾಯವಾಗುತ್ತಿದ್ದರೂ ಅದನ್ನು ಸರಿಪಡಿಸಲು ಜಿಲ್ಲಾಧಿಕಾರಿ ಮುಂದಾಗುತ್ತಿಲ್ಲ ಎಂದು ರೈತರು ಅಸಮಾಧಾನ ಹೊರಹಾಕಿದರು.</p><p><strong>'ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ'</strong></p><p>'ಮೊದಲಿನ ಆದೇಶದ ಪ್ರಕಾರ ₹2,600 ಇತ್ತು. ಒಂದು ಪ್ರಕರಣದಲ್ಲಿ ಮಾತ್ರ ಕಣ್ಣಪ್ಪಿನಿಂದ ₹3,000ಕ್ಕೆ ಹೆಚ್ಚಿಸಿ ಆದೇಶಿದ್ದು ನಿಜ. ಆದರೆ ನಾವೇ (ಡಿಸಿ) ಮಾಡಿದ ಆದೇಶವ ನಾವೇ ಪರಿಷ್ಕರಣೆ ಮಾಡುವುದಕ್ಕೆ ಬರುವುದಿಲ್ಲ ಎಂಬುದು ತಿಳಿದ ನಂತರ ಪರಿಹಾರಧನ ಹೆಚ್ಚಿಸಿದ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ. ಅಗತ್ಯ ಎನಿಸಿದರೆ ಈ ವಿಷಯ-ರೈತರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ತಾಲ್ಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹೈಟೆನ್ಷನ್ ವಿದ್ಯುತ್ ಮಾರ್ಗ ರಚನೆಗಾಗಿ ಅಗತ್ಯ ಗೋಪುರ (ಟವರ್)ಗಳ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಕೃಷಿ ಜಮೀನಿಗೆ ಬೆಲೆ ನಿಗದಿಪಡಿಸುವ ವಿಚಾರದಲ್ಲಿ ಜಿಲ್ಲಾಡಳಿತ ತಾರತಮ್ಯ ನೀತಿ ಅನುಸರಿಸುತ್ತಿರುವುದು ಬೆಳಕಿಗೆ ಬಂದಿದೆ.</p>.<p>ತಮ್ಮ ಜಮಿನುಗಳಲ್ಲಿ ಬೃಹತ್ ಗಾತ್ರದ ವಿದ್ಯುತ್ ಗೋಪುರಗಳನ್ನು ನಿರ್ಮಿಸಲಾಗಿದೆ. ಆದರೆ ಜಮೀನು ಬಳಕೆ ಮಾಡಿಕೊಳ್ಳುವ ವಿಚಾರದಲ್ಲಿ ನಿರ್ಮಾಣ ಕಂಪನಿ ಮತ್ತು ಅಧಿಕಾರಿಗಳು ರೈತರಿಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟಿಲ್ಲ ಎಂದು ಸೋಮವಾರ ಇಲ್ಲಿ ವಿವಿಧ ಗ್ರಾಮಗಳ ರೈತರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಮಳೆಯಾಶ್ರಿತ ಮತ್ತು ನೀರಾವರಿ ಭೂಮಿ ಎರಡಕ್ಕೂ ಒಂದೇ ರೀತಿಯಲ್ಲಿ ಅವೈಜ್ಞಾನಿಕ ಬೆಲೆ ನಿಗದಿಪಡಿಸಲಾಗಿದೆ. ಮಾರ್ಗದ ಮಧ್ಯೆ ಕೊಳವೆಬಾವಿ, ತೋಟಪಟ್ಟಿಗಳು, ಅರಣ್ಯ ಜಾತಿ ಹಾಗೂ ಹಣ್ಣಿನ ಗಿಡಗಳು, ಮನೆ, ಶೆಡ್ಗಳು ಇದ್ದರೂ ಅವುಗಳಿಗೆ ಪರಿಹಾರ ನೀಡಿಲ್ಲ. ಸಂಬಂಧಿಸಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೌಲ್ಯಮಾಪನವನ್ನೂ ಮಾಡಿಲ್ಲ. ರೈತರಿಗೆ ಸೂಕ್ತ ನ್ಯಾಯ ದೊರಕಿಸಿಕೊಟ್ಟಿಲ್ಲ ಎಂದು ಆಕ್ಷೇಪಿಸಿದರೆ ಕಂಪನಿ ಅಧಿಕಾರಿಗಳು ದರ್ಪದಿಂದ ವರ್ತಿಸುತ್ತಾರೆ ಎಂದು ಮಲ್ಲನಗೌಡ ಪೊಲೀಸ್ ಪಾಟೀಲ, ಬಸವರಾಜ ತಳವಾರ, ನಾಗರಾಜ ಪೂಜಾರ, ಮಂಜುನಾಥ ಬುನ್ನಟ್ಟಿ ದೂರಿದರು.</p>.<p>ಗದಗ ಕೊಪ್ಪಳ ಪವರ್ಗ್ರಿಡ್ ಪ್ರಸರಣ ಕಂಪನಿ ಗೋಪುರ ಮತ್ತು ತಂತಿ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ರಾಯಚೂರು ಥರ್ಮಲ್ ಘಟಕದಿಂದ ಗುಳದಳ್ಳಿ ಗ್ರಿಡ್ ಮೂಲಕ ಸಂಪರ್ಕ ಕಲ್ಪಿಸಲು ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳ ವ್ಯಾಪ್ತಿಯ ಹಳ್ಳಿಗಳ ವ್ಯಾಪ್ತಿಯಲ್ಲಿ ಹೊಸ ವಿದ್ಯುತ್ ಮಾರ್ಗ ರಚನೆಗೆ ಮುಂದಾಗಿದೆ. 2024ರಲ್ಲಿ ರೈತರ ಜಮೀನುಗಳಿಗೆ ಪ್ರತಿ ಚದರ ಮೀಟರ್ಗೆ ₹2,600 ಮತ್ತು ತಂತಿ ಹಾದುಹೋಗುವ ದಾರಿ (ಮೊಗಸಾಲೆ)ಯ ಪ್ರತಿ ಚದರ ಮೀಟರ್ಗೆ ₹ 40ರಂತೆ ಭೂ ಬೆಲೆ ನಿಗದಿಪಡಿಸಿ ಆಗಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಈಗಾಗಲೇ ಶೇ 90ರಷ್ಟು ಕೆಲಸ ಪೂರ್ಣಗೊಂಡಿದೆ.</p>.<p><strong>ಪ್ರತ್ಯೇಕ ಆದೇಶ:</strong> ಈ ಮಧ್ಯೆ ಇದೇ ಮಾರ್ಗದಲ್ಲಿ ಬರುವ ರೈತರೊಬ್ಬರು ತಕರಾರು ತೆಗೆದು ಕೆಲಸ ಸ್ಥಗಿತಗೊಳಿಸಿ, ಹೆಚ್ಚಿನ ಭೂ ಬೆಲೆ ನಿಗದಿಗೆ ಅರ್ಜಿ ಸಲ್ಲಿಸಿದ ನಂತರ ಹಿಂದಿನ ಆದೇಶ ಪರಿಷ್ಕರಿಸಿ ಪ್ರತ್ಯೇಕ (2025 ಡಿ. 31ರಂದು) ಆದೇಶ ಹೊರಡಿಸಿದ ಜಿಲ್ಲಾಧಿಕಾರಿ ಆ ರೈತರ ಭೂಮಿಯ ಬೆಲೆಯನ್ನು ಪ್ರತಿಚದರ ಮೀಟರ್ಗೆ ₹ 3,000 ನಿಗದಿಪಡಿಸಿದ್ದಾರೆ. ಇತರೆ ರೈತರಿಗೂ ಕೂಡ ಹೊಸ ಆದೇಶದಲ್ಲಿನ ಮಾನದಂಡ ಅನ್ವಯವಾಗುವಂತೆ ಮಾಡಿ ಎಂಬ ರೈತರ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿಲ್ಲ. ಪರಿಷ್ಕೃತ ಆದೇಶದಂತೆ ಪರಿಹಾರ ದೊರಕದಿದ್ದರೆ ಕೆಲಸಕ್ಕೆ ಅವಕಾಶ ನೀಡದೆ ನ್ಯಾಯಕ್ಕಾಗಿ ರೈತರು ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದರು.</p>.<div><blockquote>ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಲಿ, ವಿದ್ಯುತ್ ಟವರ್ ಅಳವಡಿಸುವ ಭೂಮಿಗೆ ಪರಿಷ್ಕೃತ ಆದೇಶದ ಪ್ರಕಾರವೇ ಬೆಲೆ ನಿಗದಿಯಾಗಲಿ. ಈ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಡುತ್ತೇನೆ. ಪೊಲೀಸರೂ ಕಂಪನಿ ಪರವಾಗಿ ವರ್ತಿಸಬಾರದು </blockquote><span class="attribution">ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ</span></div>.<p><strong>`ಬೆಲೆ ಕಳೆದುಕೊಂಡ ಭೂಮಿ'</strong></p><p>ಗೋಪುರದ ಕೆಳಗೆ ಇರುವ ಕೊಳವೆಬಾವಿಗಳನ್ನು ಬಳಕೆ ಮಾಡುವಂತಿಲ್ಲ. ಬೇರೆ ಕಡೆ ತೋಡಿಸಿಕೊಳ್ಳಿ ಎನ್ನುತ್ತಿದ್ದಾರೆ. ಬೇರೆಕಡೆ ನೀರು ಸಿಗುವ ಖಾತರಿ ಇಲ್ಲದ ಕಾರಣ ರೈತರು ಅತಂತ್ರ ಸ್ಥಿತಿ ತಲುಪಿದ್ದೇವೆ. ಕೊಳವೆಬಾವಿಗೆ ಪರಿಹಾರವನ್ನೂ ನೀಡಿಲ್ಲ ಎಂದು ಕನ್ನಾಳ ಗ್ರಾಮದ ರೈತ ಬಸವರಾಜ ತಳವಾರ ಆತಂಕ ತೋಡಿಕೊಂಡರು.</p><p>ವಿದ್ಯುತ್ ಮಾರ್ಗ ಹಾದುಹೋಗಿರುವ ಭೂಮಿಯ ಬೆಲೆ ದಿಢೀರ್ ಕುಸಿದಿದೆ. ವಿದ್ಯುತ್ ಮಾರ್ಗದ ಕೆಳಗೆ ಕೊಳವೆಬಾವಿ ತೋಡುವಂತಿಲ್ಲ. ಅನ್ನ ಉದ್ದೇಶಕ್ಕೆ ಭೂಪರಿವರ್ತನೆ ಮಾಡುವುದಕ್ಕೂ ಅವಕಾಶವಿಲ್ಲ. ರೈತರಿಗೆ ಇಷ್ಟೊಂದು ಅನ್ಯಾಯವಾಗುತ್ತಿದ್ದರೂ ಅದನ್ನು ಸರಿಪಡಿಸಲು ಜಿಲ್ಲಾಧಿಕಾರಿ ಮುಂದಾಗುತ್ತಿಲ್ಲ ಎಂದು ರೈತರು ಅಸಮಾಧಾನ ಹೊರಹಾಕಿದರು.</p><p><strong>'ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ'</strong></p><p>'ಮೊದಲಿನ ಆದೇಶದ ಪ್ರಕಾರ ₹2,600 ಇತ್ತು. ಒಂದು ಪ್ರಕರಣದಲ್ಲಿ ಮಾತ್ರ ಕಣ್ಣಪ್ಪಿನಿಂದ ₹3,000ಕ್ಕೆ ಹೆಚ್ಚಿಸಿ ಆದೇಶಿದ್ದು ನಿಜ. ಆದರೆ ನಾವೇ (ಡಿಸಿ) ಮಾಡಿದ ಆದೇಶವ ನಾವೇ ಪರಿಷ್ಕರಣೆ ಮಾಡುವುದಕ್ಕೆ ಬರುವುದಿಲ್ಲ ಎಂಬುದು ತಿಳಿದ ನಂತರ ಪರಿಹಾರಧನ ಹೆಚ್ಚಿಸಿದ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ. ಅಗತ್ಯ ಎನಿಸಿದರೆ ಈ ವಿಷಯ-ರೈತರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>