ಇಲ್ಲಿಯ ಕೊರೊನಾ ನಿರಾಶ್ರಿತರ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ದೆಹಲಿಗೆ ಹೋಗಿದ್ದವರು ತಮ್ಮ ಊರುಗಳಿಗೆ ಮರಳಿದ್ದರಿಂದ ಬೇರೆಯವರಿಗೂ ಸೋಂಕು ಹರಡಿದೆ. ತಪಾಸಣೆಗೆ ಒಳಗಾಗದವರು ಎಷ್ಟು ಜನ ಎಂಬುದನ್ನು ನಿಖರವಾಗಿ ಹೇಳಲಾಗುವುದಿಲ್ಲ. ಗುರುತು ಪತ್ತೆಯಾದ ನಂತರ ಆಯಾ ರಾಜ್ಯಗಳಿಗೆ ಮಾಹಿತಿ ಹೋಗಿದೆ. ಸೋಂಕು ದೃಢಪಟ್ಟಿರುವವರನ್ನು ಕರೆತಂದು ಚಿಕಿತ್ಸೆಗೆ ಒಳಪಡಿಸುವ ಕೆಲಸ ದೇಶದಾದ್ಯಂತ ನಡೆಯುತ್ತಿದೆ’ ಎಂದರು.