ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದಾಗ 'ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ತಂಗಡಗಿ ಸ್ಥಿಮಿತ ಕಳೆದುಕೊಂಡಿದ್ದಾರೆ' ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮೋದಿಯನ್ನು ಪ್ರಚಾರಕ್ಕಾಗಿ ಬೈದಿಲ್ಲ. ನನಗೆ ಸುಳ್ಳು ಪ್ರಚಾರದ ಅವಶ್ಯಕತೆ ಇಲ್ಲ. ಅವರನ್ನು ಬೈಯುವ ಆಸೆಯಿಲ್ಲ. ಮೊದಲು ನೆರೆಸಂತ್ರಸ್ತರಿಗೆ ಪರಿಹಾರ ತಂದು ಕೊಡಿ. ಕೇಂದ್ರದಿಂದ ಪರಿಹಾರ ಹಣ ತಂದು ಕೊಟ್ಟರೆ ಬ್ಯಾನರ್ ಹಾಕಿ ಗೌರವಿಸುತ್ತೇನೆ. ಮೋದಿ ಪ್ರಶ್ನಾತೀತ ವ್ಯಕ್ತಿಯೇನಲ್ಲ. ಸಂವಿಧಾನಕ್ಕೆ ಒಳಪಟ್ಟ ಒಬ್ಬ ಸಾಮಾನ್ಯ ಪ್ರಜೆ' ಎಂದು ಹೇಳಿದರು.