ಜಿಲ್ಲಾ ಅರಣ್ಯಾಧಿಕಾರಿ ಹರ್ಷಾಭಾನು ಮಾತನಾಡಿ,‘ನರಭಕ್ಷಕ ಚಿರತೆ ಎಂದು ಗುರುತಿಸಬೇಕಾದರೆ ವಿವಿಧ ನಿಯಮ ಪಾಲನೆ ಮಾಡಬೇಕು. ಚಿರತೆಯ ಉಗುರಿನ ಗುರುತು ಹಾಗೂ ಕೂದಲಿನ ಡಿಎನ್ಎ ಸಂಗ್ರಹಿಸಿ ವರದಿ ಬಂದ ಬಳಿಕ ತಿಳಿಸುತ್ತೇವೆ. ಚಿರತೆಗೆ ಅರವಳಿಕೆ ನೀಡಿ, ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್ಗೆ ಬಿಟ್ಟು ಬರಲಾಗುತ್ತದೆ. ಅಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ, ಖಾತರಿ ಪಡಿಸಲಾಗುವುದು. ಜನರು ಅರಣ್ಯ ಪ್ರದೇಶದಲ್ಲಿ ಒಂಟಿಯಾಗಿ ತಿರುಗಾಡದೆ. ಗುಂಪು ಗುಂಪಾಗಿ ತಿರುಗಾಡಬೇಕು’ ಎಂದು ಹೇಳಿದರು.