<p><strong>ಕಾರಟಗಿ</strong>: ರೈತರೊಬ್ಬರ ಜಮೀನಿನ ಪೋಡಿಗಾಗಿ ಹಣಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಸರ್ವೇಯರ್ನನ್ನು ಬಂಧಿಸಿದ ಘಟನೆ ಸೋಮವಾರ ರಾತ್ರಿ ತಾಲ್ಲೂಕಿನ ಅರುಣೋದಯ ಕ್ಯಾಂಪ್ನಲ್ಲಿ ಜರುಗಿದೆ.</p>.<p>ತಾಲ್ಲೂಕು ಸರ್ವೇಯರ್ ವಿಜಯ್ ಚವ್ಹಾಣ ಬಂಧಿತ ಆರೋಪಿ.</p>.<p>ಸಂತೋಷಕುಮಾರ ಎಂಬುವವರಿಗೆ ಸೇರಿದ 6 ಎಕರೆ ಜಮೀನಿನ ಪೋಡಿ ಮಾಡಿಕೊಡಲು ಸರ್ವೇಯರ್ ವಿಜಯ ಚವ್ಹಾಣ ಅವರು ಸತಾಯಿಸಿ ವಿನಾಕಾರಣ ವಿಳಂಬ ಮಾಡುತ್ತಿದ್ದರು. ರೈತರು ಮತ್ತೆ, ಮತ್ತೆ ಪೋಡಿಗೆ ಒತ್ತಾಯಿಸಿದಾಗ ₹ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ರೈತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ, ನ್ಯಾಯ ಕೋರಿದ್ದರು. ಸೋಮವಾರ ರಾತ್ರಿ ಅರುಣೋದಯ ಕ್ಯಾಂಪ್ನಲ್ಲಿದ್ದ ಸರ್ವೇಯರ್ ವಿಜಯ್ ಚವ್ಹಾಣಗೆ ₹30 ಸಾವಿರ ನಗದು ಹಣ ನೀಡುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಹಣ ಮತ್ತು ಇತರ ದಾಖಲೆಗಳೊಂದಿಗೆ ಸರ್ವೇಯರ್ ವಿಜಯ ಚವ್ಹಾಣ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.</p>.<p>ಮಂಗಳವಾರ ಗಂಗಾವತಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.</p>.<p>ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ವಂಸಂತಕುಮಾರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಚಂದ್ರಪ್ಪ, ಸುನೀಲ್, ನಾಗರತ್ನ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ತಡರಾತ್ರಿಯವರೆಗೆ ವಿಚಾರಣೆ ನಡೆದಿತ್ತು.</p>.<p>ಮತ್ತೊಂದು ಎಫ್ಐಆರ್ ದಾಖಲು: ಲೋಕಾಯುಕ್ತರ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಸರ್ವೇಯರ್ ವಿಜಯ ಚವ್ಹಾಣರನ್ನು ಬೆಂಬಲಿಸಿ, ಲೋಕಾಯುಕ್ತ ತಂಡದ ಕ್ರಮಕ್ಕೆ ಆಕ್ಷೇಪಿಸಿ, ಹಲ್ಲೆ ನಡೆಸಲು ಮುಂದಾದ ಕೆಲವರು ಕಾರ್ಯಚರಣೆಗೆ ಅಡ್ಡಿಪಡಿಸಿದರು.</p>.<p>ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಸರ್ವೇಯರ್ ವಿಜಯ್ ಚವ್ಹಾಣ ಕುಟುಂಬದ ಸದಸ್ಯರಾದ ವಿಜಯ ಚವ್ಹಾಣ, ಲಿಂಬಾಜಿ, ಶಾಂತಾಬಾಯಿ, ಕಾಜಲ್, ರಾಜು ಸೇರಿದಂತೆ ಇತರ 50 ಜನರ ವಿರುದ್ಧ ಕಾರಟಗಿ ಪೊಲೀಸರಿಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಚಂದ್ರಪ್ಪ ಈಟಿ ಮಂಗಳವಾರ ರಾತ್ರಿ ದೂರು ಸಲ್ಲಿಸಿದ್ದಾರೆ.</p>.<p>ಕಾರಟಗಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಧೀರಕುಮಾರ ಬೆಂಕಿ ಪ್ರತಿಕ್ರಿಯಿಸಿ, ಲೋಕಾಯುಕ್ತ ಅಧಿಕಾರಿಗಳು ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ಎಎಸ್ಐ ಭರಮಪ್ಪ ತನಿಖೆ ಕೈಗೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ</strong>: ರೈತರೊಬ್ಬರ ಜಮೀನಿನ ಪೋಡಿಗಾಗಿ ಹಣಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಸರ್ವೇಯರ್ನನ್ನು ಬಂಧಿಸಿದ ಘಟನೆ ಸೋಮವಾರ ರಾತ್ರಿ ತಾಲ್ಲೂಕಿನ ಅರುಣೋದಯ ಕ್ಯಾಂಪ್ನಲ್ಲಿ ಜರುಗಿದೆ.</p>.<p>ತಾಲ್ಲೂಕು ಸರ್ವೇಯರ್ ವಿಜಯ್ ಚವ್ಹಾಣ ಬಂಧಿತ ಆರೋಪಿ.</p>.<p>ಸಂತೋಷಕುಮಾರ ಎಂಬುವವರಿಗೆ ಸೇರಿದ 6 ಎಕರೆ ಜಮೀನಿನ ಪೋಡಿ ಮಾಡಿಕೊಡಲು ಸರ್ವೇಯರ್ ವಿಜಯ ಚವ್ಹಾಣ ಅವರು ಸತಾಯಿಸಿ ವಿನಾಕಾರಣ ವಿಳಂಬ ಮಾಡುತ್ತಿದ್ದರು. ರೈತರು ಮತ್ತೆ, ಮತ್ತೆ ಪೋಡಿಗೆ ಒತ್ತಾಯಿಸಿದಾಗ ₹ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ರೈತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ, ನ್ಯಾಯ ಕೋರಿದ್ದರು. ಸೋಮವಾರ ರಾತ್ರಿ ಅರುಣೋದಯ ಕ್ಯಾಂಪ್ನಲ್ಲಿದ್ದ ಸರ್ವೇಯರ್ ವಿಜಯ್ ಚವ್ಹಾಣಗೆ ₹30 ಸಾವಿರ ನಗದು ಹಣ ನೀಡುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಹಣ ಮತ್ತು ಇತರ ದಾಖಲೆಗಳೊಂದಿಗೆ ಸರ್ವೇಯರ್ ವಿಜಯ ಚವ್ಹಾಣ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.</p>.<p>ಮಂಗಳವಾರ ಗಂಗಾವತಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.</p>.<p>ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ವಂಸಂತಕುಮಾರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಚಂದ್ರಪ್ಪ, ಸುನೀಲ್, ನಾಗರತ್ನ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ತಡರಾತ್ರಿಯವರೆಗೆ ವಿಚಾರಣೆ ನಡೆದಿತ್ತು.</p>.<p>ಮತ್ತೊಂದು ಎಫ್ಐಆರ್ ದಾಖಲು: ಲೋಕಾಯುಕ್ತರ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಸರ್ವೇಯರ್ ವಿಜಯ ಚವ್ಹಾಣರನ್ನು ಬೆಂಬಲಿಸಿ, ಲೋಕಾಯುಕ್ತ ತಂಡದ ಕ್ರಮಕ್ಕೆ ಆಕ್ಷೇಪಿಸಿ, ಹಲ್ಲೆ ನಡೆಸಲು ಮುಂದಾದ ಕೆಲವರು ಕಾರ್ಯಚರಣೆಗೆ ಅಡ್ಡಿಪಡಿಸಿದರು.</p>.<p>ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಸರ್ವೇಯರ್ ವಿಜಯ್ ಚವ್ಹಾಣ ಕುಟುಂಬದ ಸದಸ್ಯರಾದ ವಿಜಯ ಚವ್ಹಾಣ, ಲಿಂಬಾಜಿ, ಶಾಂತಾಬಾಯಿ, ಕಾಜಲ್, ರಾಜು ಸೇರಿದಂತೆ ಇತರ 50 ಜನರ ವಿರುದ್ಧ ಕಾರಟಗಿ ಪೊಲೀಸರಿಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಚಂದ್ರಪ್ಪ ಈಟಿ ಮಂಗಳವಾರ ರಾತ್ರಿ ದೂರು ಸಲ್ಲಿಸಿದ್ದಾರೆ.</p>.<p>ಕಾರಟಗಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಧೀರಕುಮಾರ ಬೆಂಕಿ ಪ್ರತಿಕ್ರಿಯಿಸಿ, ಲೋಕಾಯುಕ್ತ ಅಧಿಕಾರಿಗಳು ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ಎಎಸ್ಐ ಭರಮಪ್ಪ ತನಿಖೆ ಕೈಗೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>