ಕಾರಟಗಿ: ಮಸೀದಿಗಳಲ್ಲಿನ ಆಜಾನ್ಗೆ ಪ್ರತಿಯಾಗಿ ಶ್ರೀರಾಮಸೇನೆ ಮತ್ತು ಬಜರಂಗದಳ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿದರು.
ಮುಖಂಡ ಮಂಜುನಾಥ ಮಸ್ಕಿ ಮಾತನಾಡಿ, ಶ್ರೀರಾಮಸೇನೆ ಅಧ್ಯಕ್ಷರ ಆದೇಶದಂತೆ ಹನುಮಾನ್ ಚಾಲೀಸಾ ಪಠಿಸಲಾಯಿತು. ಶೀಘ್ರದಲ್ಲೇ ಧ್ವನಿವರ್ಧಕ ಅಳವಡಿಸಿ, ನಿತ್ಯ ಬೆಳಿಗ್ಗೆ, ಸಂಜೆ ಹನುಮಾನ್ ಚಾಲೀಸಾ ಪಠಿಸಲಾಗುವುದು’ ಎಂದರು.