ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಗುತ್ತದೆ. ಜೈನ ಬಸೀದಿಯಲ್ಲಿ ವಿಶೇಷ ಪೂಜೆ ನಡೆಯಲಿದೆ. ಬಹಿರಂಗ ಧಾರ್ಮಿಕ ಸಭೆ, ಮೆರವಣಿಗೆ ನಡೆಯುವುದಿಲ್ಲ. ಸಮುದಾಯದ ಜನತೆ ಮನೆಯಲ್ಲಿ ದೀಪ ಬೆಳಗಿ, ಮಹಾವೀರರ ಸ್ಮರಣೆ ಮಾಡುವ ಮೂಲಕ ಜಯಂತಿ ಆಚರಣೆ ಮಾಡಬೇಕು ಎಂದು ಸಮಾಜದ ಮುಖಂಡ ಶ್ರೇಣಿಕ್ ಕುಮಾರ್ ಜೈನ್ ಮನವಿ ಮಾಡಿದ್ದಾರೆ.