<p><strong>ಕುಷ್ಟಗಿ:</strong> ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಗಾಳಿ ವಿದ್ಯುತ್ ಗೋಪುರ ಏರಿ ಕುಳಿತು ಆತಂಕ ಸೃಷ್ಟಿಸಿದ್ದ ಶರಣಪ್ಪ ಎಂಬಾತನನ್ನು ಇಲ್ಲಿಯ ಅಗ್ನಿಶಾಮಕ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ ಘಟನೆ ಸಮೀಪದ ತಿಪ್ಪನಾಳ(ಯಲಬುರ್ಗಾ ತಾಲ್ಲೂಕು) ಬಳಿ ಮಂಗಳವಾರ ನಡೆದಿದೆ.</p>.<p>ಪೊಲೀಸ್ ಇಲಾಖೆಯಿಂದ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಯು, ಸುಮಾರು 300 ಅಡಿ ಏರಿ ಕುಳಿತಿದ್ದ ವ್ಯಕ್ತಿಯನ್ನು ಸುಮಾರು 3 ತಾಸುಗಳವರೆಗೆ ಹರಸಾಹಸ ಪಟ್ಟು ರಕ್ಷಿಸಿದರು. ತೀವ್ರ ನಿತ್ರಾಣ ಸ್ಥಿತಿಯಲ್ಲಿದ್ದ ಶರಣಪ್ಪನನ್ನು ಆಂಬುಲೆನ್ಸ್ ಮೂಲಕ ಚಿಕಿತ್ಸೆಗೆ ಆಸ್ಪತ್ರೆಗೆ ಕಳಿಸಿದರು.</p>.<p>ಆಗಿದ್ದೇನು: ಗ್ರಾಮದ ಶರಣಪ್ಪ ಹನುಮಪ್ಪ ತುಪ್ಪದ ಎಂಬ 24 ವರ್ಷದ ವ್ಯಕ್ತಿ ಸೋಮವಾರ ರಾತ್ರಿ ಮನೆಯಲ್ಲಿ ಜಗಳ ಮಾಡಿ ಹೊರ ಹೋಗಿದ್ದ. ರಾತ್ರಿಯೇ ಸಮೀಪದಲ್ಲಿದ್ದ ಸುಜಲಾನ್ ಕಂಪನಿಯ ಗಾಳಿ ಗೋಪುರ ಏರಿ ಒಂದು ಸ್ಥಳದಲ್ಲಿ ಠಿಕಾಣಿ ಹೂಡಿದ್ದ. ಮೇಲೆ ಏರಲಾಗದೆ ಕೆಳಗೂ ಇಳಿಯಲು ಸಾಧ್ಯವಾಗದೆ ಇಡೀ ರಾತ್ರಿ ಗೋಪುರದಲ್ಲೇ ಕಾಲ ಕಳೆದಿದ್ದಾನೆ. ಬೆಳಿಗ್ಗೆ ಈತ ಗೋಪುರದಲ್ಲಿ ಕುಳಿತಿದ್ದು ಜನರ ಗಮನಕ್ಕೆ ಬಂದಿದೆ.</p>.<p>ಟವರ್ ಏರಿ ಶರಣಪ್ಪ ಕುಳಿತಿದ್ದ ಸ್ಥಳ ತಲುಪಿದ ಅಗ್ನಿಶಾಮಕ ಸಿಬ್ಬಂದಿ ಕೆಳಗಿಳಿಸಲು ಪ್ರಯತ್ನಿಸಿದರೂ ಅದಕ್ಕೆ ಒಪ್ಪದ ಶರಣಪ್ಪ ರಂಪಾಟ ಮಾಡಿದ್ದಾನೆ. ಆತನನ್ನು ಸಮಾಧಾನ ಚಿತ್ತಕ್ಕೆ ತಂದ ಸಿಬ್ಬಂದಿ ಮನವೊಲಿಸಿ, ಕೆಳಗೆ ಇಳಿಸಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ವಾಹನ ಚಾಲಕ ಸುರೇಶ, ತಂತ್ರಜ್ಞ ಮಹೇಶ ಒಣರೊಟ್ಟಿ, ಚಂದ್ರಶೇಖರ, ಶರಣಗೌಡ ಇದ್ದರು.</p>.<p>ಶರಣಪ್ಪನನ್ನು ಜೀವ ಸಹಿತ ಸುರಕ್ಷಿತವಾಗಿ ಕೆಳಗಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರ್ಯಕ್ಷಮತೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಸರ್ಕಾರ ಸಿಬ್ಬಂದಿಯನ್ನು ಗೌರವಿಸಬೇಕಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಗಾಳಿ ವಿದ್ಯುತ್ ಗೋಪುರ ಏರಿ ಕುಳಿತು ಆತಂಕ ಸೃಷ್ಟಿಸಿದ್ದ ಶರಣಪ್ಪ ಎಂಬಾತನನ್ನು ಇಲ್ಲಿಯ ಅಗ್ನಿಶಾಮಕ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ ಘಟನೆ ಸಮೀಪದ ತಿಪ್ಪನಾಳ(ಯಲಬುರ್ಗಾ ತಾಲ್ಲೂಕು) ಬಳಿ ಮಂಗಳವಾರ ನಡೆದಿದೆ.</p>.<p>ಪೊಲೀಸ್ ಇಲಾಖೆಯಿಂದ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಯು, ಸುಮಾರು 300 ಅಡಿ ಏರಿ ಕುಳಿತಿದ್ದ ವ್ಯಕ್ತಿಯನ್ನು ಸುಮಾರು 3 ತಾಸುಗಳವರೆಗೆ ಹರಸಾಹಸ ಪಟ್ಟು ರಕ್ಷಿಸಿದರು. ತೀವ್ರ ನಿತ್ರಾಣ ಸ್ಥಿತಿಯಲ್ಲಿದ್ದ ಶರಣಪ್ಪನನ್ನು ಆಂಬುಲೆನ್ಸ್ ಮೂಲಕ ಚಿಕಿತ್ಸೆಗೆ ಆಸ್ಪತ್ರೆಗೆ ಕಳಿಸಿದರು.</p>.<p>ಆಗಿದ್ದೇನು: ಗ್ರಾಮದ ಶರಣಪ್ಪ ಹನುಮಪ್ಪ ತುಪ್ಪದ ಎಂಬ 24 ವರ್ಷದ ವ್ಯಕ್ತಿ ಸೋಮವಾರ ರಾತ್ರಿ ಮನೆಯಲ್ಲಿ ಜಗಳ ಮಾಡಿ ಹೊರ ಹೋಗಿದ್ದ. ರಾತ್ರಿಯೇ ಸಮೀಪದಲ್ಲಿದ್ದ ಸುಜಲಾನ್ ಕಂಪನಿಯ ಗಾಳಿ ಗೋಪುರ ಏರಿ ಒಂದು ಸ್ಥಳದಲ್ಲಿ ಠಿಕಾಣಿ ಹೂಡಿದ್ದ. ಮೇಲೆ ಏರಲಾಗದೆ ಕೆಳಗೂ ಇಳಿಯಲು ಸಾಧ್ಯವಾಗದೆ ಇಡೀ ರಾತ್ರಿ ಗೋಪುರದಲ್ಲೇ ಕಾಲ ಕಳೆದಿದ್ದಾನೆ. ಬೆಳಿಗ್ಗೆ ಈತ ಗೋಪುರದಲ್ಲಿ ಕುಳಿತಿದ್ದು ಜನರ ಗಮನಕ್ಕೆ ಬಂದಿದೆ.</p>.<p>ಟವರ್ ಏರಿ ಶರಣಪ್ಪ ಕುಳಿತಿದ್ದ ಸ್ಥಳ ತಲುಪಿದ ಅಗ್ನಿಶಾಮಕ ಸಿಬ್ಬಂದಿ ಕೆಳಗಿಳಿಸಲು ಪ್ರಯತ್ನಿಸಿದರೂ ಅದಕ್ಕೆ ಒಪ್ಪದ ಶರಣಪ್ಪ ರಂಪಾಟ ಮಾಡಿದ್ದಾನೆ. ಆತನನ್ನು ಸಮಾಧಾನ ಚಿತ್ತಕ್ಕೆ ತಂದ ಸಿಬ್ಬಂದಿ ಮನವೊಲಿಸಿ, ಕೆಳಗೆ ಇಳಿಸಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ವಾಹನ ಚಾಲಕ ಸುರೇಶ, ತಂತ್ರಜ್ಞ ಮಹೇಶ ಒಣರೊಟ್ಟಿ, ಚಂದ್ರಶೇಖರ, ಶರಣಗೌಡ ಇದ್ದರು.</p>.<p>ಶರಣಪ್ಪನನ್ನು ಜೀವ ಸಹಿತ ಸುರಕ್ಷಿತವಾಗಿ ಕೆಳಗಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರ್ಯಕ್ಷಮತೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಸರ್ಕಾರ ಸಿಬ್ಬಂದಿಯನ್ನು ಗೌರವಿಸಬೇಕಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>