ಜಿಲ್ಲೆಯಲ್ಲಿ ಮಳೆಯಿಂದ 77 ಶಾಲೆಗಳು ಹಾಗೂ 89 ಅಂಗನವಾಡಿ ಕೇಂದ್ರಗಳು ಸೋರುತ್ತಿರುವ ಕುರಿತು ತಿಳಿದು,‘ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳು ಈಚೆಗೆ ನಿರ್ಮಾಣ ಮಾಡಿದ್ದವಾಗಿದ್ದರೆ ಕಳಪೆ ಕಾಮಗಾರಿ ಎಂದು ಪರಿಗಣಿಸಬೇಕು. ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.