‘ರಾಘವೇಂದ್ರ 2022-23ನೇ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬಿತ್ತನೆ ಬೀಜ ರೈತರಿಗೆ ಮಾರಾಟ ಮಾಡಿ ಬಂದ ಹಣವನ್ನು ಕೃಷಿ ಇಲಾಖೆಗೆ ಪ್ರತಿದಿನ ಜಮೆ ಮಾಡಬೇಕಿತ್ತು. ಸಕಾಲದಲ್ಲಿ ಮಾಡದೆ ಐದಾರು ತಿಂಗಳ ನಂತರ ಜಮೆ ಮಾಡಿದ್ದಾರೆ. ಲಕ್ಷಾಂತರ ಹಣವನ್ನು ತಾತ್ಕಾಲಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದರು. ಹಣ ಜಮೆ ಮಾಡುವುದರಲ್ಲಿ ವಿಳಂಬ ಮಾಡಿದ್ದರಿಂದ ಅಮಾನತು ಮಾಡಲಾಗಿದೆ’ ಎಂದು ಕೃಷಿ ಇಲಾಖೆಯ ಆಯುಕ್ತ ಬಿ.ಶರತ್ ಆದೇಶದಲ್ಲಿ ತಿಳಿಸಿದ್ದಾರೆ.