ಮೊಟ್ಟೆ ಮುಟ್ಟಲು ಹಿಂಜರಿದ ಸಚಿವ: ನಂತರ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಸಚಿವ ಡಾ.ವೀರೇಂದ್ರ ಕುಮಾರ್ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಅಂಗನವಾಡಿ ಮಕ್ಕಳಿಗೆ ಹಾಲು ಕುಡಿಸಿ ಶೇಂಗಾ ಉಂಡಿ ತಿನ್ನಿಸಿದರು. ನಂತರ ಅಧಿಕಾರಿಗಳು ಮಕ್ಕಳಿಗೆ ನೀಡಲು ಮೊಟ್ಟೆ ತಂದಾಗ ಸಚಿವರು ಮೊಟ್ಟೆ ಮುಟ್ಟಲು ಹಿಂಜರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,‘ನಾನು ಅಪ್ಪಟ ಸಸ್ಯಾಹಾರಿ. ಹಾಗಾಗಿ, ಮೊಟ್ಟೆ ಮುಟ್ಟಲಿಲ್ಲ’ ಎಂದು ಸಮಜಾಯಿಷಿ ನೀಡಿದರು.