‘ಚಳ್ಳೂರ ನಿವಾಸಿ ಮರಿಯಮ್ಮ ಮೈಲಾಪುರದ ಮಗಳ ಮನೆಗೆ ಬಂದು ವಾಪಸ್ ಹೋಗಲು ಬಸ್ಶೆಲ್ಟರ್ ಮುಂದೆ ನಿಂತಿದ್ದರು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ವೃದ್ಧೆ ತೀವ್ರ ರಕ್ತಸ್ರಾವದಿಂದ ಮೂರ್ಛೆ ಹೋಗಿದ್ದರು. ಶಾಸಕರಿದ್ದ ಕಾರಿನಲ್ಲಿಯೇ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಗಂಗಾವತಿ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಳು’ ಎಂದು ಕಾರಟಗಿ ಪೊಲೀಸ್ ಠಾಣೆಯ ಇನ್ಸ್ಟೆಕ್ಟರ್ ಸಿದ್ರಾಮಯ್ಯ ಬಿ. ಎಂ. ತಿಳಿಸಿದರು. ಈ ಕುರಿತು ವೃದ್ಧೆಯ ಅಳಿಯ ಈರಣ್ಣ ಮೈಲಾಪುರ ದೂರು ನೀಡಿದ್ದು ಶಾಸಕರ ಕಾರಿನ ಸಂಖ್ಯೆಯನ್ನು ಮಾತ್ರ ಉಲ್ಲೇಖಿಸಿದ್ದಾರೆ.