ವಿವಾದ ಕಾವು ಪಡೆಯುತ್ತಿದ್ದಂತೆ ಕೆಲ ದಿನಗಳ ಹಿಂದೆ ಜಿಲ್ಲಾಡಳಿತ ಎರಡೂ ಮಠದ ಭಕ್ತರ ಸಭೆ ಕರೆದು, ರಾಜಿ ಸಂಧಾನ ನಡೆಸಲು ಮುಂದಾದರೂ ಸಭೆಯಲ್ಲಿ ನಿರ್ಣಯಕ್ಕೆ ಬಂದಿರಲಿಲ್ಲ. ಪೂಜೆಗೆ ತಮಗೇ ಅವಕಾಶ ನೀಡಬೇಕು ಎಂದು ಎರಡೂ ಮಠದ ಭಕ್ತರು ವಾದಿಸಿದ್ದರಿಂದ ಜಿಲ್ಲಾಧಿಕಾರಿ ಎರಡು ಮಠಗಳ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿ, ದಿನನಿತ್ಯದ ಪೂಜೆಗೆ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿದ್ದರು.