ತಾಲ್ಲೂಕು ನರೇಗಾ ಸಹಾಯಕ ನಿರ್ದೇಶಕ ವೆಂಕಟೇಲ ವಂದಾಲ ಮಾತನಾಡಿ,‘ಘನ, ದ್ರವ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ನಿರ್ಮಲ ಭಾರತ ಅಭಿಯಾನದ ಒಂದು ಪ್ರಮುಖ ಅಂಗವಾಗಿದೆ. ಗ್ರಾಮ ನೈರ್ಮಲ್ಯ ಕಾಪಾಡಿ ಗ್ರಾಮಾಂತರ ಪ್ರದೇಶದ ಜನರ ಜೀವನ ಮಟ್ಟ ಸುಧಾರಿಸುವುದು ಯೋಜನೆಯ ಮುಖ್ಯ ಉದ್ದೇಶ’ ಎಂದು ಹೇಳಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ ಮಾತನಾಡಿ,‘ಮನೆಗಳಲ್ಲಿ ಸೃಷ್ಟಿಯಾಗುವ ಕಸ, ಪ್ಲಾಸ್ಟಿಕ್, ತರಕಾರಿ ತ್ಯಾಜ್ಯ, ಹಸಿ ಮತ್ತು ದ್ರವ ರೂಪದ ತ್ಯಾಜ್ಯಗಳನ್ನು ಒಂದೆಡೆ ಸಂಗ್ರಹಿಸಿ ಅದನ್ನು ಗೊಬ್ಬರವಾಗಿ ಪರಿವರ್ತಿಸುವ ಯೋಜನೆ ಇದಾಗಿದೆ’ ಎಂದರು.