ಸರ್ವೋದಯ ಪಕ್ಷದ ರಾಜ್ಯ ಸಂಚಾಲಕ ಅಮ್ಜದ್ ಪಾಷ ಮಾತನಾಡಿ ‘ಪರ್ಯಾಯ ರಾಜಕಾರಣಕ್ಕಾಗಿ ರೈತರು ಹಾಗೂ ಪರಿಶಿಷ್ಟರು ಸೇರಿ ಸರ್ವೋದಯ ಪಕ್ಷ ಕಟ್ಟಿದ್ದರು. ಈಗಿನ ಕೆಟ್ಟ ರಾಜಕೀಯ ಸನ್ನಿವೇಶದ ನಡುವೆಯೂ ನಾವು ರಾಜ್ಯದಾದ್ಯಂತ ಜಿಲ್ಲಾ ಘಟಕಗಳನ್ನು ರಚನೆ ಮಾಡಿ ಪಕ್ಷವನ್ನು ಪುನರ್ ಸಕ್ರಿಯಗೊಳಿಸಲಾಗುವುದು. ಮುಂಬರುವ ವಿಧಾನಸಭಾ ಚುನಾವಣೆಗೆ ಅಣಿಗೊಳ್ಳುತ್ತಿದ್ದೇವೆ’ ಎಂದರು. ಭೀಮಸೇನ್ ಕಲಕೇರಿ, ಗವಿಸಿದ್ದಪ್ಪ ವದ್ನಾಳ ಇದ್ದರು.