ವೆಂಕಟಗಿರಿ, ಮರಳಿ, ಗಂಗಾವತಿ ಸೇರಿದಂತೆ ನಾನಾ ಹೋಬಳಿಗಳಲ್ಲಿ ಒಟ್ಟು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡಲಾಗಿದ್ದು, ಬೆಳೆಯು ಕಟಾವು ಹಂತಕ್ಕೆ ತಲುಪಿತ್ತು.ಮಂಗಳವಾರ ಸುರಿದ ಗಾಳಿ ಸಹಿತ ಮಳೆಯಿಂದಾಗಿ ವಡ್ಡರಹಟ್ಟಿ, ಆನೆಗೊಂದಿ, ಹಣವಾಳ, ಢಣಾಪೂರ, ಗುಳದಾಳ, ಹೊಸ್ಕೇರಾ, ಮಲ್ಲಾಪೂರ, ಮರಳಿ, ಮುಸ್ಟೂರು ಸೇರಿದಂತೆ ನಾನಾ ಗ್ರಾಮಗಳಲ್ಲಿ ಸಾವಿರಾರು ಎಕರೆ ಬೆಳೆಯು ಸಂಪೂರ್ಣ ನೆಲಕ್ಕೆ ಬಿದ್ದು ಹಾಳಾಗಿ ಹೋಗಿದೆ. ಸತತ ಮೂರು ತಿಂಗಳು ಆರೈಕೆ ಮಾಡಿ ಬೆಳೆಸಿದ್ದ ಭತ್ತದ ಬೆಳೆಯು ಕಟಾವು ಹಂತದಲ್ಲಿ ಹಾನಿಗೀಡಾಗಿದೆ.